ದೇವಸ್ಥಾನದಲ್ಲಿ ಸೇವೆ ಮಾಡುವ ನಮಗೆ ಲಾಕ್ ಡೌನ್ ನಿಂದಾಗಿ ದಿನ ನಿತ್ಯದ ಜೀವನ ನಡೆಸಲು ತೀವ್ರ ತೊಂದರೆಯಾಗಿದೆ. ಬೇರೆ ಆದಾಯ ಮೂಲವಿಲ್ಲದ ನಮಗೆ ಸರ್ಕಾರದಿಂದ ನೀಡುವ ಆರ್ಥಿಕ ಸೌಲಭ್ಯಗಳನ್ನು ನೀಡಿ ಸಂಕಷ್ಟದ ಕಾಲಕ್ಕೆ ನೆರವು ನೀಡಬೇಕು ಎಂದು ಶೀಲಾ ಕುಮಾರ ಶಾಸ್ತ್ರೀ, ದತ್ತ ದಿಗಂಬರ ಜೋಶಿ, ನಾರಾಯಣ ಭಟ್ಟ ಜೋಶಿ, ಸುಹಾಸ್, ಗೋಪಾಲ ಜೋಶಿ, ವಸಂತ ಭಟ್ ಮತ್ತಿತರರು ಆಗ್ರಹಿಸಿದ್ದಾರೆ.