ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇಶಕ್ಕೆ ರಷ್ಯ ಕ್ರಾಂತಿ ಸ್ಪೂರ್ತಿದಾಯಕ’

Last Updated 7 ನವೆಂಬರ್ 2020, 13:38 IST
ಅಕ್ಷರ ಗಾತ್ರ

ರಾಯಚೂರು: ಮಾನವನಿಂದ ಮಾನವನ ಶೋಷಣೆಗೆ ಕೊನೆಹಾಡಿದ ರಷ್ಯಾ ಕ್ರಾಂತಿಯೂ ಕಾರ್ಮಿಕ ವರ್ಗದ ಇತಿಹಾಸದಲ್ಲಿ ಮಹತ್ವದ ಘಟನೆಯಾಗಿದೆ. ಅತ್ಯಂತ ಹಿಂದುಳಿದ ದೇಶದಲ್ಲಿ ಕ್ರಾಂತಿಗೆ ಕಾರಣರಾದ ಲೆನಿನ್ ಚಿಂತನೆಗಳು ಸ್ಪೂರ್ತಿಯಾಗಿದೆ ಎಂದು ಸೋಶಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಕಾರ್ಯದರ್ಶಿ ಚಂದ್ರಗಿರೀಶ ಹೇಳಿದರು.

ಪಕ್ಷದ ಕಚೇರಿಯಲ್ಲಿ ಶನಿವಾರ ರಷ್ಯಾ ಸಮಾಜವಾದಿ ಮಹಾಕ್ರಾಂತಿಯ 103ನೇ ವಾರ್ಷಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದರು.

ಮಾರ್ಕ್ಸ್‌ವಾದ-ಲೆನಿನ್‍ವಾದ ಕೇವಲ ತತ್ವಶಾಸ್ತ್ರಗಳಲ್ಲ, ಅದು ಜಾರಿಗೆ ತರಲು ಸಾಧ್ಯ ಎನ್ನುವುದು ಸಾಬೀತಾಗಿದೆ. ಭಾರತದಲ್ಲಿರುವ ಶೋಷಕ ಬಂಡವಾಳಶಾಹಿ ವ್ಯವಸ್ಧೆಯ ವಿರುದ್ಧ ಹೋರಾಡಲು ನವೆಂಬರ್ ಕ್ರಾಂತಿ ದಾರಿದೀಪವಾಗಿದೆ ಎಂದರು.

ರಾಯಚೂರು ಜಿಲ್ಲಾ ಸಂಘಟನಾ ಸಮಿತಿಯ ಸದಸ್ಯ ಎನ್.ಎಸ್.ವೀರೆಶ, ಚನ್ನಬಸವ ಜಾನೇಕಲ್, ಮಹೇಶ ಚೀಕಲಪರ್ವಿ, ಸದ್ಯಸ ಅಣ್ಣಪ್ಪ, ಮಲ್ಲಣಗೌಡ, ಪೀರ್ ಸಾಬ್, ಮೌನೇಶ, ಕಾರ್ತಿಕ್, ಬಸವರಾಜ, ಹೇಮಂತ ಅಮೊಘ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT