<p><strong>ರಾಯಚೂರು:</strong> ಮಾನವನಿಂದ ಮಾನವನ ಶೋಷಣೆಗೆ ಕೊನೆಹಾಡಿದ ರಷ್ಯಾ ಕ್ರಾಂತಿಯೂ ಕಾರ್ಮಿಕ ವರ್ಗದ ಇತಿಹಾಸದಲ್ಲಿ ಮಹತ್ವದ ಘಟನೆಯಾಗಿದೆ. ಅತ್ಯಂತ ಹಿಂದುಳಿದ ದೇಶದಲ್ಲಿ ಕ್ರಾಂತಿಗೆ ಕಾರಣರಾದ ಲೆನಿನ್ ಚಿಂತನೆಗಳು ಸ್ಪೂರ್ತಿಯಾಗಿದೆ ಎಂದು ಸೋಶಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಕಾರ್ಯದರ್ಶಿ ಚಂದ್ರಗಿರೀಶ ಹೇಳಿದರು.</p>.<p>ಪಕ್ಷದ ಕಚೇರಿಯಲ್ಲಿ ಶನಿವಾರ ರಷ್ಯಾ ಸಮಾಜವಾದಿ ಮಹಾಕ್ರಾಂತಿಯ 103ನೇ ವಾರ್ಷಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದರು.</p>.<p>ಮಾರ್ಕ್ಸ್ವಾದ-ಲೆನಿನ್ವಾದ ಕೇವಲ ತತ್ವಶಾಸ್ತ್ರಗಳಲ್ಲ, ಅದು ಜಾರಿಗೆ ತರಲು ಸಾಧ್ಯ ಎನ್ನುವುದು ಸಾಬೀತಾಗಿದೆ. ಭಾರತದಲ್ಲಿರುವ ಶೋಷಕ ಬಂಡವಾಳಶಾಹಿ ವ್ಯವಸ್ಧೆಯ ವಿರುದ್ಧ ಹೋರಾಡಲು ನವೆಂಬರ್ ಕ್ರಾಂತಿ ದಾರಿದೀಪವಾಗಿದೆ ಎಂದರು.</p>.<p>ರಾಯಚೂರು ಜಿಲ್ಲಾ ಸಂಘಟನಾ ಸಮಿತಿಯ ಸದಸ್ಯ ಎನ್.ಎಸ್.ವೀರೆಶ, ಚನ್ನಬಸವ ಜಾನೇಕಲ್, ಮಹೇಶ ಚೀಕಲಪರ್ವಿ, ಸದ್ಯಸ ಅಣ್ಣಪ್ಪ, ಮಲ್ಲಣಗೌಡ, ಪೀರ್ ಸಾಬ್, ಮೌನೇಶ, ಕಾರ್ತಿಕ್, ಬಸವರಾಜ, ಹೇಮಂತ ಅಮೊಘ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು:</strong> ಮಾನವನಿಂದ ಮಾನವನ ಶೋಷಣೆಗೆ ಕೊನೆಹಾಡಿದ ರಷ್ಯಾ ಕ್ರಾಂತಿಯೂ ಕಾರ್ಮಿಕ ವರ್ಗದ ಇತಿಹಾಸದಲ್ಲಿ ಮಹತ್ವದ ಘಟನೆಯಾಗಿದೆ. ಅತ್ಯಂತ ಹಿಂದುಳಿದ ದೇಶದಲ್ಲಿ ಕ್ರಾಂತಿಗೆ ಕಾರಣರಾದ ಲೆನಿನ್ ಚಿಂತನೆಗಳು ಸ್ಪೂರ್ತಿಯಾಗಿದೆ ಎಂದು ಸೋಶಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಕಾರ್ಯದರ್ಶಿ ಚಂದ್ರಗಿರೀಶ ಹೇಳಿದರು.</p>.<p>ಪಕ್ಷದ ಕಚೇರಿಯಲ್ಲಿ ಶನಿವಾರ ರಷ್ಯಾ ಸಮಾಜವಾದಿ ಮಹಾಕ್ರಾಂತಿಯ 103ನೇ ವಾರ್ಷಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದರು.</p>.<p>ಮಾರ್ಕ್ಸ್ವಾದ-ಲೆನಿನ್ವಾದ ಕೇವಲ ತತ್ವಶಾಸ್ತ್ರಗಳಲ್ಲ, ಅದು ಜಾರಿಗೆ ತರಲು ಸಾಧ್ಯ ಎನ್ನುವುದು ಸಾಬೀತಾಗಿದೆ. ಭಾರತದಲ್ಲಿರುವ ಶೋಷಕ ಬಂಡವಾಳಶಾಹಿ ವ್ಯವಸ್ಧೆಯ ವಿರುದ್ಧ ಹೋರಾಡಲು ನವೆಂಬರ್ ಕ್ರಾಂತಿ ದಾರಿದೀಪವಾಗಿದೆ ಎಂದರು.</p>.<p>ರಾಯಚೂರು ಜಿಲ್ಲಾ ಸಂಘಟನಾ ಸಮಿತಿಯ ಸದಸ್ಯ ಎನ್.ಎಸ್.ವೀರೆಶ, ಚನ್ನಬಸವ ಜಾನೇಕಲ್, ಮಹೇಶ ಚೀಕಲಪರ್ವಿ, ಸದ್ಯಸ ಅಣ್ಣಪ್ಪ, ಮಲ್ಲಣಗೌಡ, ಪೀರ್ ಸಾಬ್, ಮೌನೇಶ, ಕಾರ್ತಿಕ್, ಬಸವರಾಜ, ಹೇಮಂತ ಅಮೊಘ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>