ಆರ್ಟಿಪಿಎಸ್ ಮತ್ತು ವೈಟಿಪಿಎಸ್ ವಿದ್ಯುತ್ ಘಟಕಗಳ ಕೇಂದ್ರಗಳಿಂದ ಬರುವ ಹಾರುಬೂದಿಯಿಂದ ನೀರು ಮತ್ತು ಪರಿಸರ ಹಾಳಾಗುತ್ತಿದೆ. ಅಲ್ಲದೆ ಜನರಿಗೆ ಅಸ್ತಮಾ, ಕ್ಯಾನ್ಸರ್, ಸಿಲೋಕೋಸಿಸ್ ಹಾಗೂ ಇನ್ನಿತರ ರೋಗಗಳು ಉಲ್ಬಣಿಸುತ್ತಿವೆ. ಹಾರುಬೂದಿ ಟ್ಯಾಂಕರ್ ಗಳ ಓಡಾಟದಿಂದ ಪುರಾತನ ಕೃಷ್ಣ ಮೇಲ್ ಸೇತುವೆ ರಸ್ತೆ ಸಂಪೂರ್ಣ ಹಾಳಾಗಿದ್ದು ಇತ್ತೀಚೆಗೆ ಖುದ್ದಾಗಿ ಪರಿಶೀಲಿಸಿ ರಾಷ್ಟೀಯ ಹೆದ್ದಾರಿ ಇಂಜಿನಿಯರ್ ಗಳಿಗೆ ಸೂಚನೆ ನೀಡಿ ರಸ್ತೆ ದುರಸ್ತಿ ಮಾಡಿಸಿದರೂ ಪುನಃ ಸೇತುವೆ ರಸ್ತೆ ಹಾಳಾಗಿದೆ. ಆರ್ಟಿಪಿಎಸ್ ಮತ್ತು ವೈಟಿಪಿಎಸ್ ವಿದ್ಯುತ್ ಘಟಕಗಳ ಕೇಂದ್ರ ವ್ಯಾಪ್ತಿ ಯ ಸಾರ್ವಜನಿ ಕ ರಿಗೆ ಪ್ರತಿದಿನ ತೊಂದರೆ ಆಗುತ್ತಿರುವ ಮತ್ತು ಅನಾರೋಗ್ಯ ಸಮಸ್ಯೆಗಳ ಬಗ್ಗೆ ಅನೇಕ ದೂರುಗಳು ಬರುತ್ತಿವೆ ಎಂದು ಸಂಸದ ಅಮರೇಶ್ವರ ನಾಯಕ ಅವರು ದೂರಿದರು.