<p><strong>ಸಿರವಾರ</strong>: ‘ಇಂದಿನ ಸಮಾಜದಲ್ಲಿ ಮಹಿಳೆಯು ಪುರುಷರಿಗೆ ಸಮಾನವಾಗಿ ದುಡಿಯುವ ಜೊತೆಗೆ ಇಡೀ ಕುಟುಂಬವನ್ನು ನಿರ್ವಹಿಸುತ್ತಿದ್ದಾಳೆ. ಇದಕ್ಕೆ ಶಿವಶರಣೆ ಅಕ್ಕಮಹಾದೇವಿ ಹಾಕಿಕೊಟ್ಟ ಸನ್ಮಾರ್ಗ ಮತ್ತು ಹೋರಾಟದ ಶಕ್ತಿಯೇ ಕಾರಣ’ ಎಂದು ಅಕ್ಕನ ಬಳಗದ ಎಂ.ಎನ್.ಅಕ್ಕಮಹಾದೇವಿ ಹೇಳಿದರು.</p>.<p>ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ಶಿವಶರಣೆ ಅಕ್ಕಮಹಾದೇವಿ ಜಯಂತಿ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಶಿವಶರಣೆ ಅಕ್ಕಮಹಾದೇವಿ ತೊಟ್ಟಿಲೋತ್ಸವದಲ್ಲಿ ಅವರು ಮಾತನಾಡಿದರು.</p>.<p>ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ ಮಾತನಾಡಿ, ‘ಶರಣೆ ಅಕ್ಕಮಹಾದೇವಿ ತಮ್ಮ ಹರಿತವಾದ ವಚನಗಳ ಮೂಲಕ ಮಹಿಳಾ ಸಮಾಜಕ್ಕೆ ಆದರ್ಶವಾಗಿದ್ದಾರೆ’ ಎಂದರು.</p>.<p>ಸುವರ್ಣಮ್ಮ ಚುಕ್ಕಿ, ಕವಿತಾ ದೇವೇಂದ್ರ ಸ್ವಾಮಿ, ಶಿವಲೀಲಾ ಅಚ್ಚಾ, ರಾಜೇಶ್ವರಿ ಜೇಗರಕಲ್, ಭಾರತಿ, ಸಿದ್ದಮ್ಮ ಕುಂಬಾರ, ಬೋದಮ್ಮ ಕುಂಬಾರ, ವಿದ್ಯಾಶ್ರೀ ಬೆಳವಿನೂರು, ಸೌಮ್ಯಾ ಸಜ್ಜನ್, ಲತಾ ಗುರುನಾಥ, ರೇಣುಕಾ ನಂದರಡ್ಡಿ, ಕಸ್ತೂರಿ ಸೇರಿದಂತೆ ಅಕ್ಕನ ಬಳಗದ ಮಹಿಳೆಯರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿರವಾರ</strong>: ‘ಇಂದಿನ ಸಮಾಜದಲ್ಲಿ ಮಹಿಳೆಯು ಪುರುಷರಿಗೆ ಸಮಾನವಾಗಿ ದುಡಿಯುವ ಜೊತೆಗೆ ಇಡೀ ಕುಟುಂಬವನ್ನು ನಿರ್ವಹಿಸುತ್ತಿದ್ದಾಳೆ. ಇದಕ್ಕೆ ಶಿವಶರಣೆ ಅಕ್ಕಮಹಾದೇವಿ ಹಾಕಿಕೊಟ್ಟ ಸನ್ಮಾರ್ಗ ಮತ್ತು ಹೋರಾಟದ ಶಕ್ತಿಯೇ ಕಾರಣ’ ಎಂದು ಅಕ್ಕನ ಬಳಗದ ಎಂ.ಎನ್.ಅಕ್ಕಮಹಾದೇವಿ ಹೇಳಿದರು.</p>.<p>ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ಶಿವಶರಣೆ ಅಕ್ಕಮಹಾದೇವಿ ಜಯಂತಿ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಶಿವಶರಣೆ ಅಕ್ಕಮಹಾದೇವಿ ತೊಟ್ಟಿಲೋತ್ಸವದಲ್ಲಿ ಅವರು ಮಾತನಾಡಿದರು.</p>.<p>ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ ಮಾತನಾಡಿ, ‘ಶರಣೆ ಅಕ್ಕಮಹಾದೇವಿ ತಮ್ಮ ಹರಿತವಾದ ವಚನಗಳ ಮೂಲಕ ಮಹಿಳಾ ಸಮಾಜಕ್ಕೆ ಆದರ್ಶವಾಗಿದ್ದಾರೆ’ ಎಂದರು.</p>.<p>ಸುವರ್ಣಮ್ಮ ಚುಕ್ಕಿ, ಕವಿತಾ ದೇವೇಂದ್ರ ಸ್ವಾಮಿ, ಶಿವಲೀಲಾ ಅಚ್ಚಾ, ರಾಜೇಶ್ವರಿ ಜೇಗರಕಲ್, ಭಾರತಿ, ಸಿದ್ದಮ್ಮ ಕುಂಬಾರ, ಬೋದಮ್ಮ ಕುಂಬಾರ, ವಿದ್ಯಾಶ್ರೀ ಬೆಳವಿನೂರು, ಸೌಮ್ಯಾ ಸಜ್ಜನ್, ಲತಾ ಗುರುನಾಥ, ರೇಣುಕಾ ನಂದರಡ್ಡಿ, ಕಸ್ತೂರಿ ಸೇರಿದಂತೆ ಅಕ್ಕನ ಬಳಗದ ಮಹಿಳೆಯರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>