‘ಆತ್ಮ, ಜೀವಕ್ಕೆ ಪ್ರಾಮುಖ್ಯತೆ ಕೊಡುವುದು ಆಧ್ಯಾತ್ಮ. ಗೊಂದಲದಲ್ಲಿರುವ ಮನಸ್ಸಿಗೆ ಸೃಜನಾತ್ಮಕತೆ, ಉತ್ಸಾಹ ಕೊಡುವುದೆ ಅಧ್ಯಾತ್ಮ. ಚಿಂತೆಯಲ್ಲಿದ್ದವರಿಗೆ ಚಿಂತನೆ ಸಾಧ್ಯವಿಲ್ಲ. ಆಗಿ ಹೋಗಿರುವ ಬಗ್ಗೆ ಆಕ್ರೋಶ, ಆಗಬಹುದಾದರ ಬಗ್ಗೆ ಆಶಂಕೆ ಮೂಡುತ್ತದೆ. ಭೂತ–ಭವಿಷ್ಯ ಮಧ್ಯೆ ಹೊಯ್ದಾಟದ ಮನಸ್ಸಿನಿಂದಾಗಿ ದೇಹದಲ್ಲಿ ವಿಷಮತೆ ಉತ್ಪಾದನೆ ಆಗುತ್ತದೆ. ಇದರಿಂದ ಶರೀರದಲ್ಲಿ ಆಲಸ್ಯ, ಸಿಟ್ಟು ಮೂಡುತ್ತದೆ’ ಎಂದು ಹೇಳಿದರು.