ಸಿಂಧನೂರು: ಅಲ್ಲಿ ಮಂತ್ರೋಚ್ಛಾರಣೆ ಇಲ್ಲ, ವಾಲಗದ ಸದ್ದಿಲ್ಲ, ಶಾಸ್ತ್ರಾಚಾರಗಳ ಗೊಡವೆಯಿಲ್ಲ, ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವದಡಿ, ಯಾವ ಕಾಲದ ಶಾಸ್ತ್ರವೇನು ಹೇಳಿದರೇನು, ಎದೆಯದನಿಗೂ ಮಿಗಿಲು ಶಾಸ್ತ್ರವಿಹುದೇನು ಎನ್ನುವ ಕುವೆಂಪು ಅವರ ಆಶಯದಡಿ ತಾಯಪ್ಪ ಮತ್ತು ಗಂಗಾ ಅವರ ಮಂತ್ರಮಾಂಗಲ್ಯ ನಗರದ ಎಪಿಎಂಸಿ ಸಮುದಾಯ ಭವನದಲ್ಲಿ ಭಾನುವಾರ ನೆರವೇರಿತು.