<p><strong>ರಾಯಚೂರು:</strong> ಮಹಾನಗರ ಪಾಲಿಕೆಯ ಮೇಯರ್ ನರಸಮ್ಮ ಮಾಡಗಿರಿ, ಆಯುಕ್ತ ಜುಬಿನ್ ಮೊಹಾಪಾತ್ರಾ ಹಾಗೂ ಮಹಾನಗರಪಾಲಿಕೆ ಸದಸ್ಯ ಜಯಣ್ಣ ಅವರು ನಗರದ ನೈರ್ಮಲ್ಯ ಮತ್ತು ಘನತ್ಯಾಜ್ಯ ನಿರ್ವಹಣಾ ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಿದರು.<br><br>ಪರಿಶೀಲನೆಯ ಸಮಯದಲ್ಲಿ ಅವರು ವಿಂಡ್ರೋ ಪ್ಲಾಟ್ಫಾರ್ಮ್ನ ಬೆಂಕಿ ತಡೆಗಟ್ಟುವ ಪೈಪ್ಲೈನ್ ಕೆಲಸದ ಪ್ರಗತಿಯನ್ನು ಗಮನಿಸಿದರು. ಇದರ ಜೊತೆಗೆ, 15 ನೇ ಹಣಕಾಸು ಆಯೋಗದ ಅನುದಾನದೊಂದಿಗೆ ಕೈಗೊಳ್ಳಲಾದ ಹೊಸ ಘನತ್ಯಾಜ್ಯ ಸಂಸ್ಕರಣಾ ಯಂತ್ರೋಪಕರಣಗಳ ಸ್ಥಾಪನೆಗೆ ಸಂಬಂಧಿಸಿದ ಶೆಡ್ ವಿನ್ಯಾಸ ಮತ್ತು ಯಂತ್ರೋಪಕರಣಗಳ ಪೂರೈಕೆ ಕೆಲಸದ ಹಂತವನ್ನು ಪರಿಶೀಲಿಸಿದರು.<br><br>ಲೆಗಸಿ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ವೇಯ್ ಬ್ರಿಡ್ಜ್ ಅಳವಡಿಕೆ ಕಾರ್ಯ ಮತ್ತು ಯಂತ್ರೋಪಕರಣಗಳ ಅಳವಡಿಕೆ ಯೋಜನೆಯ ಮುಂದಿನ ಹಂತದ ಪ್ರಗತಿಯನ್ನು ಅಧಿಕಾರಿಗಳು ಗಮನಿಸಿದರು. ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಅಗೆತ ಪೂರ್ಣಗೊಂಡಿದೆ ಮತ್ತು ಜಿಯೊಸಿಂಥೆಟಿಕ್ ಮೆಂಬರೇನ್ ಅಳವಡಿಕೆ ಮತ್ತು ಲೀಚೇಟ್ ನಿರ್ವಹಣಾ ಕೊಳದ ನಿರ್ಮಾಣ ಕಾಮಗಾರಿ ಪರಿಶೀಲಿಸಿದರು. <br><br>ಮೇಯರ್ ಮತ್ತು ಆಯುಕ್ತರು ಎಲ್ಲ ಕೆಲಸಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು:</strong> ಮಹಾನಗರ ಪಾಲಿಕೆಯ ಮೇಯರ್ ನರಸಮ್ಮ ಮಾಡಗಿರಿ, ಆಯುಕ್ತ ಜುಬಿನ್ ಮೊಹಾಪಾತ್ರಾ ಹಾಗೂ ಮಹಾನಗರಪಾಲಿಕೆ ಸದಸ್ಯ ಜಯಣ್ಣ ಅವರು ನಗರದ ನೈರ್ಮಲ್ಯ ಮತ್ತು ಘನತ್ಯಾಜ್ಯ ನಿರ್ವಹಣಾ ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಿದರು.<br><br>ಪರಿಶೀಲನೆಯ ಸಮಯದಲ್ಲಿ ಅವರು ವಿಂಡ್ರೋ ಪ್ಲಾಟ್ಫಾರ್ಮ್ನ ಬೆಂಕಿ ತಡೆಗಟ್ಟುವ ಪೈಪ್ಲೈನ್ ಕೆಲಸದ ಪ್ರಗತಿಯನ್ನು ಗಮನಿಸಿದರು. ಇದರ ಜೊತೆಗೆ, 15 ನೇ ಹಣಕಾಸು ಆಯೋಗದ ಅನುದಾನದೊಂದಿಗೆ ಕೈಗೊಳ್ಳಲಾದ ಹೊಸ ಘನತ್ಯಾಜ್ಯ ಸಂಸ್ಕರಣಾ ಯಂತ್ರೋಪಕರಣಗಳ ಸ್ಥಾಪನೆಗೆ ಸಂಬಂಧಿಸಿದ ಶೆಡ್ ವಿನ್ಯಾಸ ಮತ್ತು ಯಂತ್ರೋಪಕರಣಗಳ ಪೂರೈಕೆ ಕೆಲಸದ ಹಂತವನ್ನು ಪರಿಶೀಲಿಸಿದರು.<br><br>ಲೆಗಸಿ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ವೇಯ್ ಬ್ರಿಡ್ಜ್ ಅಳವಡಿಕೆ ಕಾರ್ಯ ಮತ್ತು ಯಂತ್ರೋಪಕರಣಗಳ ಅಳವಡಿಕೆ ಯೋಜನೆಯ ಮುಂದಿನ ಹಂತದ ಪ್ರಗತಿಯನ್ನು ಅಧಿಕಾರಿಗಳು ಗಮನಿಸಿದರು. ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಅಗೆತ ಪೂರ್ಣಗೊಂಡಿದೆ ಮತ್ತು ಜಿಯೊಸಿಂಥೆಟಿಕ್ ಮೆಂಬರೇನ್ ಅಳವಡಿಕೆ ಮತ್ತು ಲೀಚೇಟ್ ನಿರ್ವಹಣಾ ಕೊಳದ ನಿರ್ಮಾಣ ಕಾಮಗಾರಿ ಪರಿಶೀಲಿಸಿದರು. <br><br>ಮೇಯರ್ ಮತ್ತು ಆಯುಕ್ತರು ಎಲ್ಲ ಕೆಲಸಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>