ರಾಯಚೂರು: ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆಶೀರ್ವಾದದೊಂದಿಗೆ ಐಡಿಎಆರ್ಸಿ ಸಂಸ್ಥೆಯಿಂದ ಮಾರ್ಚ್ 31ರಂದು ಶ್ರೀಸುಯೀಂದ್ರ ಆರೋಗ್ಯ ಶಾಲೆಯಲ್ಲಿ ಉಚಿತ ವಿಶೇಷ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ.
ಈ ಶಿಬಿರದಲ್ಲಿ ಮೂಳೆ, ಎಲುಬು, ಮಧುಮೇಹ, ಹೃದಯರೋಗ, ಚರ್ಮರೋಗ, ನರಗಳ ಸಂಬಂಧಿತ, ಸಿದ್ಧ ಆಯುರ್ವೇದ ಮೊದಲಾದ ಪರೀಕ್ಷೆಗಳನ್ನು ವೈದ್ಯರು ಅತ್ಯಾಧುನಿಕ ಯಂತ್ರಗಳೊಂದಿಗೆ ತಪಾಸಣೆ ಮಾಡಲಿದ್ದಾರೆ. ಮಂತ್ರಾಲಯ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಲಾಗಿದೆ.
ಜಿ.ವಿ.ಸುರೇಶ್, ಅರಕೋಣಂ ರಾಘವೇಂದ್ರ ಟ್ರಸ್ಟ್- ತಮಿಳನಾಡು, ಡಾ.ಶಂಕರ್ ಅವರ ನೇತೃತ್ವದಲ್ಲಿ ತಜ್ಞ ವೈದ್ಯರು ಶಿಬಿರ ನಡೆಸಿಕೊಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಯೋಜಕ ಗಿರಿಜಾಗಣೇಶ ಮೊ: 97910 89327 ಅವರನ್ನು ಸಂಪರ್ಕಿಸಬಹುದು ಎಂದು ಶ್ರೀಮಠದ ವ್ಯವಸ್ಥಾಪಕ ಎಸ್.ಕೆ. ಶ್ರೀನಿವಾಸರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.