<p><strong>ರಾಯಚೂರು</strong>: ಮಹಾನಗರಪಾಲಿಕೆ, ಉಪ ವಿಜ್ಞಾನ ಕೇಂದ್ರ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಇಲ್ಲಿನ ಉಪ ವಿಜ್ಞಾನ ಕೇಂದ್ರದಲ್ಲಿ ವಿದ್ಯಾರ್ಥಿಗಳು ಖಗ್ರಾಸ್ ಚಂದ್ರ ಗ್ರಹಣವನ್ನು ಟೆಲಿಸ್ಕೋಪ್ ಮೂಲಕ ವೀಕ್ಷಿಸಿದರು.</p><p>ವಿದ್ಯಾರ್ಥಿಗಳು ಚಂದ್ರಗ್ರಹಣ ವೀಕ್ಷಿಸಿ ಖಗೋಲದಲ್ಲಿ ನಡೆಯುವ ಪ್ರಕ್ರಿಯೆಯ ಬಗ್ಗೆ ವಿಜ್ಞಾನ ಶಿಕ್ಷಕರನ್ನು ಕುತೂಲಹದಿಂದ ಪ್ರಶ್ನೆಗಳನ್ನು ಕೇಳಿದರು. ಶಿಕ್ಷಕರು ಮಕ್ಕಳ ಪ್ರಶ್ನೆಗಳನ್ನು ಸಂಯಮದಿಂದ ಆಲಿಸಿ ಸಮಾಧಾನದಿಂದ ಉತ್ತರಿಸಿದರು.</p><p>ಗ್ರಹಣದ ಸಮಯದಲ್ಲಿ ಚಂದ್ರನು ತಾಮ್ರ-ಕೆಂಪು ಬಣ್ಣದಲ್ಲಿ ಕಂಡನು. ಭೂಮಿಯ ವಾತಾವರಣದ ಮೂಲಕ ಹಾದುಹೋಗುವ ಸೂರ್ಯನ ಬೆಳಕಿನ ನೀಲಿ ಬಣ್ಣವು ಹರಡುತ್ತದೆ ಮತ್ತು ಕೆಂಪು ಬಣ್ಣವು ಚಂದ್ರನ ಮೇಲೆ ಬೀಳುತ್ತದೆ. ಹೀಗಾಗಿ ಬಣ್ಣದಲ್ಲಿ ಬದಲಾವಣೆ ಕಂಡು ಬಂದಿದೆ ಎಂದು ಶಿಕ್ಷಕರು ವಿವರಿಸಿದರು. </p><p>ಸೂರ್ಯನ ಬೆಳಕು ಭೂಮಿಯ ನೆರಳಿನಿಂದ ಭಾಗಶಃ ಅಥವಾ ಸಂಪೂರ್ಣವಾಗಿ ತಡೆಯಲ್ಪಟ್ಟಾಗ ಚಂದ್ರಗ್ರಹಣವು ಸಂಭವಿಸುತ್ತದೆ. ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬರುತ್ತದೆ. ಭೂಮಿಯ ಒಳ ನೆರಳು ಚಂದ್ರನನ್ನು ಸಂಪೂರ್ಣವಾಗಿ ಆವರಿಸಿದಾಗ ಖಗ್ರಾಸ ಚಂದ್ರಗ್ರಹಣ ಉಂಟಾಗುತ್ತದೆ ಎಂದು ಪ್ರಾತ್ಯಕ್ಷಿಯೆ ಮೂಲಕ ವಿವರಿಸಿದರು.</p><p>ಹುಣ್ಣಿಮೆ ರಾತ್ರಿಯಲ್ಲಿ ಕಂಗೊಳಿಸಬೇಕಿದ್ದ ಚಂದ್ರ ಇಂದು ಭೂಮಿಯ ಮರೆಯಲ್ಲಿ ಕೆಲಹೊತ್ತು ಮರೆಯಾಗಿ ಹೋದ ಕೌತುಕವನ್ನು ಮಕ್ಕಳು ವೀಕ್ಷಿಸಿ ಆನಂದಿಸಿದರು.</p><p>ಜಿಲ್ಲಾಡಳಿತದಿಂದ ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಿಂದ ನವೋದಯ ಆಸ್ಪತ್ರೆ ಸಮೀಪವಿರುವ ಉಪ ವಿಜ್ಞಾನ ಕೇಂದ್ರದ ವರೆಗೆ ಉಚಿತ ಬಸ್ಸಿನ ವ್ಯವಸ್ಥೆ ಮಾಡಲಾಗಿತ್ತು. ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು.</p><p><strong>ದರ್ಬೆ ಬಂಧನ:</strong></p><p>ಭಾನುವಾರ ಮಧ್ಯಾಹ್ನ ದೇವರಿಗೆ ದರ್ಬೆ ಬಂಧನ ಮಾಡಲಾಯಿತು. ಪೂಜೆ ಪುನಸ್ಕಾರಗಳು ನಡೆಯಲಿಲ್ಲ. ನಗರದಲ್ಲಿನ ಬಹುತೇಕ ದೇವಾಲಯಗಳು ಮುಚ್ಚಿದ್ದವು. ಗ್ರಹಣ ವೇಳೆ ಅನೇಕ ಜನ ಮನೆಯಲ್ಲಿ ಪೂಜೆ ಮೂಲಕ ದೇವರ ಜಪ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು</strong>: ಮಹಾನಗರಪಾಲಿಕೆ, ಉಪ ವಿಜ್ಞಾನ ಕೇಂದ್ರ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಇಲ್ಲಿನ ಉಪ ವಿಜ್ಞಾನ ಕೇಂದ್ರದಲ್ಲಿ ವಿದ್ಯಾರ್ಥಿಗಳು ಖಗ್ರಾಸ್ ಚಂದ್ರ ಗ್ರಹಣವನ್ನು ಟೆಲಿಸ್ಕೋಪ್ ಮೂಲಕ ವೀಕ್ಷಿಸಿದರು.</p><p>ವಿದ್ಯಾರ್ಥಿಗಳು ಚಂದ್ರಗ್ರಹಣ ವೀಕ್ಷಿಸಿ ಖಗೋಲದಲ್ಲಿ ನಡೆಯುವ ಪ್ರಕ್ರಿಯೆಯ ಬಗ್ಗೆ ವಿಜ್ಞಾನ ಶಿಕ್ಷಕರನ್ನು ಕುತೂಲಹದಿಂದ ಪ್ರಶ್ನೆಗಳನ್ನು ಕೇಳಿದರು. ಶಿಕ್ಷಕರು ಮಕ್ಕಳ ಪ್ರಶ್ನೆಗಳನ್ನು ಸಂಯಮದಿಂದ ಆಲಿಸಿ ಸಮಾಧಾನದಿಂದ ಉತ್ತರಿಸಿದರು.</p><p>ಗ್ರಹಣದ ಸಮಯದಲ್ಲಿ ಚಂದ್ರನು ತಾಮ್ರ-ಕೆಂಪು ಬಣ್ಣದಲ್ಲಿ ಕಂಡನು. ಭೂಮಿಯ ವಾತಾವರಣದ ಮೂಲಕ ಹಾದುಹೋಗುವ ಸೂರ್ಯನ ಬೆಳಕಿನ ನೀಲಿ ಬಣ್ಣವು ಹರಡುತ್ತದೆ ಮತ್ತು ಕೆಂಪು ಬಣ್ಣವು ಚಂದ್ರನ ಮೇಲೆ ಬೀಳುತ್ತದೆ. ಹೀಗಾಗಿ ಬಣ್ಣದಲ್ಲಿ ಬದಲಾವಣೆ ಕಂಡು ಬಂದಿದೆ ಎಂದು ಶಿಕ್ಷಕರು ವಿವರಿಸಿದರು. </p><p>ಸೂರ್ಯನ ಬೆಳಕು ಭೂಮಿಯ ನೆರಳಿನಿಂದ ಭಾಗಶಃ ಅಥವಾ ಸಂಪೂರ್ಣವಾಗಿ ತಡೆಯಲ್ಪಟ್ಟಾಗ ಚಂದ್ರಗ್ರಹಣವು ಸಂಭವಿಸುತ್ತದೆ. ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬರುತ್ತದೆ. ಭೂಮಿಯ ಒಳ ನೆರಳು ಚಂದ್ರನನ್ನು ಸಂಪೂರ್ಣವಾಗಿ ಆವರಿಸಿದಾಗ ಖಗ್ರಾಸ ಚಂದ್ರಗ್ರಹಣ ಉಂಟಾಗುತ್ತದೆ ಎಂದು ಪ್ರಾತ್ಯಕ್ಷಿಯೆ ಮೂಲಕ ವಿವರಿಸಿದರು.</p><p>ಹುಣ್ಣಿಮೆ ರಾತ್ರಿಯಲ್ಲಿ ಕಂಗೊಳಿಸಬೇಕಿದ್ದ ಚಂದ್ರ ಇಂದು ಭೂಮಿಯ ಮರೆಯಲ್ಲಿ ಕೆಲಹೊತ್ತು ಮರೆಯಾಗಿ ಹೋದ ಕೌತುಕವನ್ನು ಮಕ್ಕಳು ವೀಕ್ಷಿಸಿ ಆನಂದಿಸಿದರು.</p><p>ಜಿಲ್ಲಾಡಳಿತದಿಂದ ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಿಂದ ನವೋದಯ ಆಸ್ಪತ್ರೆ ಸಮೀಪವಿರುವ ಉಪ ವಿಜ್ಞಾನ ಕೇಂದ್ರದ ವರೆಗೆ ಉಚಿತ ಬಸ್ಸಿನ ವ್ಯವಸ್ಥೆ ಮಾಡಲಾಗಿತ್ತು. ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು.</p><p><strong>ದರ್ಬೆ ಬಂಧನ:</strong></p><p>ಭಾನುವಾರ ಮಧ್ಯಾಹ್ನ ದೇವರಿಗೆ ದರ್ಬೆ ಬಂಧನ ಮಾಡಲಾಯಿತು. ಪೂಜೆ ಪುನಸ್ಕಾರಗಳು ನಡೆಯಲಿಲ್ಲ. ನಗರದಲ್ಲಿನ ಬಹುತೇಕ ದೇವಾಲಯಗಳು ಮುಚ್ಚಿದ್ದವು. ಗ್ರಹಣ ವೇಳೆ ಅನೇಕ ಜನ ಮನೆಯಲ್ಲಿ ಪೂಜೆ ಮೂಲಕ ದೇವರ ಜಪ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>