<p><strong>ಸಿರವಾರ (ರಾಯಚೂರು):</strong> ಅನವಶ್ಯಕವಾಗಿ ತಿರುಗಾಡುವ ಜನರನ್ನು ನಿಯಂತ್ರಿಸುವ ಸಲುವಾಗಿ ಶಿಕ್ಷಕರ ಪಡೆಯನ್ನು ಚೆಕ್ ಪೋಸ್ಟ್ಗಳಲ್ಲಿ ತಾಲ್ಲೂಕು ಆಡಳಿತ ನಿಯೋಜಿಸಿದೆ.</p>.<p>ಪ್ರಮುಖ ವಾರ್ಡ್ಗಳ ಮುಂಭಾಗದಲ್ಲಿ 18 ಚೆಕ್ ಪೋಸ್ಟ್ಗಳನ್ನು ನಿರ್ಮಿಸಿ ಅನವಶ್ಯಕವಾಗಿ ತಿರುಗುವ ಜನರನ್ನು ನಿಯಂತ್ರಿಸಲು ಕ್ರಮಕೈಗೊಳ್ಳಲಾಗಿದ್ದು, ತಾಲ್ಲೂಕಿನ ಸರ್ಕಾರಿ ಶಾಲೆಗಳ 54 ಶಿಕ್ಷಕರನ್ನು ನೇಮಿಸಿ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ.</p>.<p>ಒಂದು ಚೆಕ್ ಪೋಸ್ಟ್ನಲ್ಲಿ ಬೆಳಿಗ್ಗೆ 7 ಗಂಟೆಯಿಂದ 11.40 ರವರಗೆ ಮಧ್ಯಾಹ್ನ 11.40 ರಿಂದ 4.20 ರವರೆಗೆ ಮತ್ತು 4.20 ರಿಂದ ರಾತ್ರಿ 9 ಗಂಟೆಯವರೆಗೆ ಪಾಳಿ ವ್ಯವಸ್ಥೆ ಮೂಲಕ ಕಾರ್ಯನಿರ್ವಹಿಸಲು ಮೂರು ಜನ ಶಿಕ್ಷಕರು ನೇಮಿಸಲಾಗಿದೆ.</p>.<p>ರಜಾ ಮೂಡ್ ನಲ್ಲಿದ್ದ ಶಿಕ್ಷಕರಿಗೆ ನಿರಾಶೆ: ಪ್ರತಿ ವರ್ಷವೂ ಬೇಸಿಗೆ ರಜೆಯಲ್ಲಿ ಒಂದಿಲ್ಲ ಒಂದು ಕೆಲಸ ಮಾಡಲು ಆದೇಶ ನೀಡುತ್ತಿದ್ದ ಶಿಕ್ಷಣ ಇಲಾಖೆಯು ಈ ಬಾರಿ ಕೋವಿಡ್ -19ಗೆ ಯಾವುದೇ ಪ್ರಮುಖ ಕೆಲಸಗಳನ್ನು ನೀಡದೇ ಶಿಕ್ಷಕರಿಗೆ ರಜೆ ನೀಡಿತ್ತು. ಪರೀಕ್ಷೆಗಳ ಮುಂದೂಡಿಕೆ, ಪರೀಕ್ಷೆಗಳ ರದ್ಧತಿ ಸೇರಿದಂತೆ ಇಲಾಖೆ ಕೆಲಸದಿಂದ ದೂರವಿದ್ದ ಶಿಕ್ಷಕರಿಗೆ ನಿರಾಶೆಯಾಗಿದೆ.</p>.<p>'ಪೊಲೀಸ್ ಇಲಾಖೆ ಸೂಚನೆಯಂತೆ ವಾರ್ಡಗಳ ಮುಂಭಾಗದಲ್ಲಿ ಚೆಕ್ ಪೋಸ್ಟ್ಗಳನ್ನು ನಿರ್ಮಿಸಿದ್ದು, ಸ್ಥಳಗಳಲ್ಲಿ ಪೊಲೀಸರಿಗೆ ಸಹಕಾರಿಯಾಗಲು ಜಿಲ್ಲಾಧಿಕಾರಿಗಳ ಆದೇಶದಂತೆ ಶಿಕ್ಷಕರನ್ನು ನೇಮಿಸಲಾಗಿದೆ. ಇದರಿಂದ ಜನರ ಅನವಶ್ಯಕ ಓಡಾಟವನ್ನು ನಿಯಂತ್ರಿಸಬಹುದು' ಎಂದುತಹಶೀಲ್ದಾರ್ ಶ್ರುತಿ ತಹಶೀಲ್ದಾರ್ ಹೇಳಿದರು.</p>.<p>ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ನಾವು ಕಾರ್ಯ ನಿರ್ವಹಿಸಲು ಸನ್ನದ್ಧರಿದ್ದು. ಆದರೆ, ಇಲ್ಲಿನ ಜನರು ಪೊಲೀಸರ ಲಾಠಿಗೆ ಅಂಜುವುದಿಲ್ಲ, ನಮ್ಮಂತ ಶಿಕ್ಷಕರಿಗೆ ಹೇಗೆ ಹೆದರುತ್ತಾರೆ. ಶಿಕ್ಷಕರ ಜೊತೆಗೆ ಒಬ್ಬ ಹೋಂಗಾರ್ಡ ನೇಮಿಸಬೇಕು ಎಂದು ಹೆಸರು ಹೇಳಲು ಇಚ್ಛಿಸದ ಶಿಕ್ಷಕರೊಬ್ಬರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿರವಾರ (ರಾಯಚೂರು):</strong> ಅನವಶ್ಯಕವಾಗಿ ತಿರುಗಾಡುವ ಜನರನ್ನು ನಿಯಂತ್ರಿಸುವ ಸಲುವಾಗಿ ಶಿಕ್ಷಕರ ಪಡೆಯನ್ನು ಚೆಕ್ ಪೋಸ್ಟ್ಗಳಲ್ಲಿ ತಾಲ್ಲೂಕು ಆಡಳಿತ ನಿಯೋಜಿಸಿದೆ.</p>.<p>ಪ್ರಮುಖ ವಾರ್ಡ್ಗಳ ಮುಂಭಾಗದಲ್ಲಿ 18 ಚೆಕ್ ಪೋಸ್ಟ್ಗಳನ್ನು ನಿರ್ಮಿಸಿ ಅನವಶ್ಯಕವಾಗಿ ತಿರುಗುವ ಜನರನ್ನು ನಿಯಂತ್ರಿಸಲು ಕ್ರಮಕೈಗೊಳ್ಳಲಾಗಿದ್ದು, ತಾಲ್ಲೂಕಿನ ಸರ್ಕಾರಿ ಶಾಲೆಗಳ 54 ಶಿಕ್ಷಕರನ್ನು ನೇಮಿಸಿ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ.</p>.<p>ಒಂದು ಚೆಕ್ ಪೋಸ್ಟ್ನಲ್ಲಿ ಬೆಳಿಗ್ಗೆ 7 ಗಂಟೆಯಿಂದ 11.40 ರವರಗೆ ಮಧ್ಯಾಹ್ನ 11.40 ರಿಂದ 4.20 ರವರೆಗೆ ಮತ್ತು 4.20 ರಿಂದ ರಾತ್ರಿ 9 ಗಂಟೆಯವರೆಗೆ ಪಾಳಿ ವ್ಯವಸ್ಥೆ ಮೂಲಕ ಕಾರ್ಯನಿರ್ವಹಿಸಲು ಮೂರು ಜನ ಶಿಕ್ಷಕರು ನೇಮಿಸಲಾಗಿದೆ.</p>.<p>ರಜಾ ಮೂಡ್ ನಲ್ಲಿದ್ದ ಶಿಕ್ಷಕರಿಗೆ ನಿರಾಶೆ: ಪ್ರತಿ ವರ್ಷವೂ ಬೇಸಿಗೆ ರಜೆಯಲ್ಲಿ ಒಂದಿಲ್ಲ ಒಂದು ಕೆಲಸ ಮಾಡಲು ಆದೇಶ ನೀಡುತ್ತಿದ್ದ ಶಿಕ್ಷಣ ಇಲಾಖೆಯು ಈ ಬಾರಿ ಕೋವಿಡ್ -19ಗೆ ಯಾವುದೇ ಪ್ರಮುಖ ಕೆಲಸಗಳನ್ನು ನೀಡದೇ ಶಿಕ್ಷಕರಿಗೆ ರಜೆ ನೀಡಿತ್ತು. ಪರೀಕ್ಷೆಗಳ ಮುಂದೂಡಿಕೆ, ಪರೀಕ್ಷೆಗಳ ರದ್ಧತಿ ಸೇರಿದಂತೆ ಇಲಾಖೆ ಕೆಲಸದಿಂದ ದೂರವಿದ್ದ ಶಿಕ್ಷಕರಿಗೆ ನಿರಾಶೆಯಾಗಿದೆ.</p>.<p>'ಪೊಲೀಸ್ ಇಲಾಖೆ ಸೂಚನೆಯಂತೆ ವಾರ್ಡಗಳ ಮುಂಭಾಗದಲ್ಲಿ ಚೆಕ್ ಪೋಸ್ಟ್ಗಳನ್ನು ನಿರ್ಮಿಸಿದ್ದು, ಸ್ಥಳಗಳಲ್ಲಿ ಪೊಲೀಸರಿಗೆ ಸಹಕಾರಿಯಾಗಲು ಜಿಲ್ಲಾಧಿಕಾರಿಗಳ ಆದೇಶದಂತೆ ಶಿಕ್ಷಕರನ್ನು ನೇಮಿಸಲಾಗಿದೆ. ಇದರಿಂದ ಜನರ ಅನವಶ್ಯಕ ಓಡಾಟವನ್ನು ನಿಯಂತ್ರಿಸಬಹುದು' ಎಂದುತಹಶೀಲ್ದಾರ್ ಶ್ರುತಿ ತಹಶೀಲ್ದಾರ್ ಹೇಳಿದರು.</p>.<p>ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ನಾವು ಕಾರ್ಯ ನಿರ್ವಹಿಸಲು ಸನ್ನದ್ಧರಿದ್ದು. ಆದರೆ, ಇಲ್ಲಿನ ಜನರು ಪೊಲೀಸರ ಲಾಠಿಗೆ ಅಂಜುವುದಿಲ್ಲ, ನಮ್ಮಂತ ಶಿಕ್ಷಕರಿಗೆ ಹೇಗೆ ಹೆದರುತ್ತಾರೆ. ಶಿಕ್ಷಕರ ಜೊತೆಗೆ ಒಬ್ಬ ಹೋಂಗಾರ್ಡ ನೇಮಿಸಬೇಕು ಎಂದು ಹೆಸರು ಹೇಳಲು ಇಚ್ಛಿಸದ ಶಿಕ್ಷಕರೊಬ್ಬರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>