<p><strong>ಸಿಂಧನೂರು:</strong> ‘ಶಿಕ್ಷಣ ಎಂಬುದು ಪ್ರಮುಖ ಅಸ್ತ್ರವಿದ್ದಂತೆ. ಇದರಿಂದ ಜೀವನ ಅಷ್ಟೇ ಅಲ್ಲ, ಸಮಾಜದ ಪರಿವರ್ತನೆಯೂ ಸಾಧ್ಯ. ಜ್ಞಾನದಿಂದ ಜಗತ್ತನ್ನು ಆಳಲು ಸಾಧ್ಯ’ ಎಂದು ಕರ್ನಾಟಕ ರಾಜ್ಯ ಜಾನಪದ ಸಾಹಿತ್ಯ ಅಕಾಡೆಮಿ ಸದಸ್ಯ ಜೀವನ್ಸಾಬ್ ಬಿನ್ನಾಳ ಅಭಿಪ್ರಾಯಪಟ್ಟರು.</p>.<p>ಇಲ್ಲಿನ ಸತ್ಯಗಾರ್ಡನ್ನಲ್ಲಿ ಅಮೋಘ ಸಿದ್ದೇಶ್ವರ ನವೋದಯ ಕೋಚಿಂಗ್ ಸೆಂಟರ್ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ನವೋದಯ ಶಾಲೆಗೆ ಆಯ್ಕೆಯಾದ 42 ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಶಿಕ್ಷಣ ಸಂಸ್ಥೆ ಕಟ್ಟಿ ವಿದ್ಯೆ ಕಲಿಸುವುದು ಸಾಮಾನ್ಯ ಕೆಲಸವಲ್ಲ. ಹಣ, ಆಸ್ತಿ, ಅಂತಸ್ತನ್ನು ಕಸಿದುಕೊಳ್ಳಬಹುದು. ಆದರೆ ವಿದ್ಯೆಯನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದರು.</p>.<p>ಸಾನ್ನಿಧ್ಯ ವಹಿಸಿದ್ದ ತುರ್ವಿಹಾಳದ ಅಮೋಘ ರೇವಣಸಿದ್ದೇಶ್ವರ ಮಠದ ಮಾದಯ್ಯ ಗುರುವಿನ್ ಮಾತನಾಡಿ ‘ವಿದ್ಯಾರ್ಥಿ ಜೀವನ ಬಂಗಾರ ಇದ್ದಂತೆ ಎಂಬ ನಾಣ್ಣುಡಿ ಸತ್ಯವಾದದ್ದು’ ಎಂದು ಹೇಳಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಅಮೋಘ ಸಿದ್ದೇಶ್ವರ ನವೋದಯ ಕೋಚಿಂಗ್ ಸೆಂಟರ್ನ ಅಧ್ಯಕ್ಷ ನಾಗೇಶ ಅರಳಹಳ್ಳಿ ವಕೀಲ, ಮನುಜಮತ ಬಳಗದ ಅಧ್ಯಕ್ಷ ಡಿ.ಎಚ್.ಕಂಬಳಿ ಮಾತನಾಡಿದರು.</p>.<p>ಆಕ್ಸ್ಫರ್ಡ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಸತ್ಯನಾರಾಯಣ ಶ್ರೇಷ್ಠಿ, ಅಮೋಘ ಸಿದ್ದೇಶ್ವರ ಕೋಚಿಂಗ್ ಸೆಂಟರ್ನ ಸಹ ಸಂಚಾಲಕ ಮಂಜುನಾಥ ಚಕ್ರಸಾಲಿ ಉಪಸ್ಥಿತರಿದ್ದರು. ಶಿಕ್ಷಕ ಹನುಮೇಶ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಂಧನೂರು:</strong> ‘ಶಿಕ್ಷಣ ಎಂಬುದು ಪ್ರಮುಖ ಅಸ್ತ್ರವಿದ್ದಂತೆ. ಇದರಿಂದ ಜೀವನ ಅಷ್ಟೇ ಅಲ್ಲ, ಸಮಾಜದ ಪರಿವರ್ತನೆಯೂ ಸಾಧ್ಯ. ಜ್ಞಾನದಿಂದ ಜಗತ್ತನ್ನು ಆಳಲು ಸಾಧ್ಯ’ ಎಂದು ಕರ್ನಾಟಕ ರಾಜ್ಯ ಜಾನಪದ ಸಾಹಿತ್ಯ ಅಕಾಡೆಮಿ ಸದಸ್ಯ ಜೀವನ್ಸಾಬ್ ಬಿನ್ನಾಳ ಅಭಿಪ್ರಾಯಪಟ್ಟರು.</p>.<p>ಇಲ್ಲಿನ ಸತ್ಯಗಾರ್ಡನ್ನಲ್ಲಿ ಅಮೋಘ ಸಿದ್ದೇಶ್ವರ ನವೋದಯ ಕೋಚಿಂಗ್ ಸೆಂಟರ್ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ನವೋದಯ ಶಾಲೆಗೆ ಆಯ್ಕೆಯಾದ 42 ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಶಿಕ್ಷಣ ಸಂಸ್ಥೆ ಕಟ್ಟಿ ವಿದ್ಯೆ ಕಲಿಸುವುದು ಸಾಮಾನ್ಯ ಕೆಲಸವಲ್ಲ. ಹಣ, ಆಸ್ತಿ, ಅಂತಸ್ತನ್ನು ಕಸಿದುಕೊಳ್ಳಬಹುದು. ಆದರೆ ವಿದ್ಯೆಯನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದರು.</p>.<p>ಸಾನ್ನಿಧ್ಯ ವಹಿಸಿದ್ದ ತುರ್ವಿಹಾಳದ ಅಮೋಘ ರೇವಣಸಿದ್ದೇಶ್ವರ ಮಠದ ಮಾದಯ್ಯ ಗುರುವಿನ್ ಮಾತನಾಡಿ ‘ವಿದ್ಯಾರ್ಥಿ ಜೀವನ ಬಂಗಾರ ಇದ್ದಂತೆ ಎಂಬ ನಾಣ್ಣುಡಿ ಸತ್ಯವಾದದ್ದು’ ಎಂದು ಹೇಳಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಅಮೋಘ ಸಿದ್ದೇಶ್ವರ ನವೋದಯ ಕೋಚಿಂಗ್ ಸೆಂಟರ್ನ ಅಧ್ಯಕ್ಷ ನಾಗೇಶ ಅರಳಹಳ್ಳಿ ವಕೀಲ, ಮನುಜಮತ ಬಳಗದ ಅಧ್ಯಕ್ಷ ಡಿ.ಎಚ್.ಕಂಬಳಿ ಮಾತನಾಡಿದರು.</p>.<p>ಆಕ್ಸ್ಫರ್ಡ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಸತ್ಯನಾರಾಯಣ ಶ್ರೇಷ್ಠಿ, ಅಮೋಘ ಸಿದ್ದೇಶ್ವರ ಕೋಚಿಂಗ್ ಸೆಂಟರ್ನ ಸಹ ಸಂಚಾಲಕ ಮಂಜುನಾಥ ಚಕ್ರಸಾಲಿ ಉಪಸ್ಥಿತರಿದ್ದರು. ಶಿಕ್ಷಕ ಹನುಮೇಶ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>