<p><strong>ರಾಯಚೂರು</strong>: ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಸೋಮವಾರ ಬೆಳಿಗ್ಗೆ 11 ಗಂಟೆಗೆ ಗುಡುಗು, ಸಿಡಿಲಿನ ಅಬ್ಬರವನ್ನು ಕೇಳಿ ಆಂತಕಕ್ಕೊಳಗಾಗಿದ್ದರು.</p>.<p>ಸುಮಾರು ಅರ್ಧಗಂಟೆ ಅವಧಿಯಲ್ಲಿ ಕಿವಿ ಪರಧೆ ಹರಿಯುವಂತೆ ಸಿಡಿಲಿನ ಅಬ್ಬರವಿತ್ತು. ಬಾಗಿಲು, ಕಿಟಕಿ ಬಂದ್ ಮಾಡಿಕೊಂಡು ಜನರು ಮನೆಯೊಳಗೆ ಸೇರಿದರು. ನಿರೀಕ್ಷಿಯಂತೆ ಆನಂತರ ಕೊಳವೆಗಳಿಂದ ನೀರು ಹರಿಸಿದಂತೆ ಬಿರುಸಿನಿಂದ ಮಳೆ ಸುರಿಯಲಾರಂಭಿಸಿತು.</p>.<p>10 ನಿಮಿಷಗಳಲ್ಲಿ ರಸ್ತೆ, ಚರಂಡಿ ಹಾಗೂ ತಗ್ಗುಪ್ರದೇಶಗಳೆಲ್ಲವೂ ಜಲಾವೃತವಾಗಿದ್ದವು. ಮಹಾವೀರ ವೃತ್ತದಿಂದ ಬಂಗಿಕುಂಟಾ ರಸ್ತೆ ಮಾರ್ಗ, ಸಿಯಾತಾಲಾಬ್, ಗಂಜ್ ಸುತ್ತಮುತ್ತಲೂ ನೀರು ಸಂಗ್ರಹವಾಗಿತ್ತು. ವಾಹನಗಳು ಸಂಚರಿಸುವುದು ಸಂಕಷ್ಟಮಯವಾಗಿತ್ತು.</p>.<p>ತಗ್ಗುಪ್ರದೇಶದ ರಸ್ತೆಗಳೆಲ್ಲವೂ ಕಾಲುವೆಗಳಾಗಿದ್ದವು. ಅರ್ಧಗಂಟೆ ಸುರಿದ ಮಳೆಯಿಂದ ರಸ್ತೆಯಲ್ಲಿದ್ದ ಘನತ್ಯಾಜ್ಯವೆಲ್ಲವೂ ಚರಂಡಿಗೆ ಸೇರಿಕೊಂಡಿತು. ಇದರಿಂದ ಕೆಲವು ಕಡೆಗಳಲ್ಲಿ ಚರಂಡಿಗಳು ಸ್ಥಗಿತಗೊಂಡು ಸಮಸ್ಯೆ ಸೃಷ್ಟಿಯಾಗಿತ್ತು.</p>.<p>ಜೇಗರಕಲ್, ಮರ್ಚೆಡ್, ಮಲ್ಲಾಪುರ, ಕಡಗಂದೊಡ್ಡಿ, ಚಂದ್ರಬಂಡಾದಲ್ಲಿ ಮಳೆ ಸುರಿದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು</strong>: ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಸೋಮವಾರ ಬೆಳಿಗ್ಗೆ 11 ಗಂಟೆಗೆ ಗುಡುಗು, ಸಿಡಿಲಿನ ಅಬ್ಬರವನ್ನು ಕೇಳಿ ಆಂತಕಕ್ಕೊಳಗಾಗಿದ್ದರು.</p>.<p>ಸುಮಾರು ಅರ್ಧಗಂಟೆ ಅವಧಿಯಲ್ಲಿ ಕಿವಿ ಪರಧೆ ಹರಿಯುವಂತೆ ಸಿಡಿಲಿನ ಅಬ್ಬರವಿತ್ತು. ಬಾಗಿಲು, ಕಿಟಕಿ ಬಂದ್ ಮಾಡಿಕೊಂಡು ಜನರು ಮನೆಯೊಳಗೆ ಸೇರಿದರು. ನಿರೀಕ್ಷಿಯಂತೆ ಆನಂತರ ಕೊಳವೆಗಳಿಂದ ನೀರು ಹರಿಸಿದಂತೆ ಬಿರುಸಿನಿಂದ ಮಳೆ ಸುರಿಯಲಾರಂಭಿಸಿತು.</p>.<p>10 ನಿಮಿಷಗಳಲ್ಲಿ ರಸ್ತೆ, ಚರಂಡಿ ಹಾಗೂ ತಗ್ಗುಪ್ರದೇಶಗಳೆಲ್ಲವೂ ಜಲಾವೃತವಾಗಿದ್ದವು. ಮಹಾವೀರ ವೃತ್ತದಿಂದ ಬಂಗಿಕುಂಟಾ ರಸ್ತೆ ಮಾರ್ಗ, ಸಿಯಾತಾಲಾಬ್, ಗಂಜ್ ಸುತ್ತಮುತ್ತಲೂ ನೀರು ಸಂಗ್ರಹವಾಗಿತ್ತು. ವಾಹನಗಳು ಸಂಚರಿಸುವುದು ಸಂಕಷ್ಟಮಯವಾಗಿತ್ತು.</p>.<p>ತಗ್ಗುಪ್ರದೇಶದ ರಸ್ತೆಗಳೆಲ್ಲವೂ ಕಾಲುವೆಗಳಾಗಿದ್ದವು. ಅರ್ಧಗಂಟೆ ಸುರಿದ ಮಳೆಯಿಂದ ರಸ್ತೆಯಲ್ಲಿದ್ದ ಘನತ್ಯಾಜ್ಯವೆಲ್ಲವೂ ಚರಂಡಿಗೆ ಸೇರಿಕೊಂಡಿತು. ಇದರಿಂದ ಕೆಲವು ಕಡೆಗಳಲ್ಲಿ ಚರಂಡಿಗಳು ಸ್ಥಗಿತಗೊಂಡು ಸಮಸ್ಯೆ ಸೃಷ್ಟಿಯಾಗಿತ್ತು.</p>.<p>ಜೇಗರಕಲ್, ಮರ್ಚೆಡ್, ಮಲ್ಲಾಪುರ, ಕಡಗಂದೊಡ್ಡಿ, ಚಂದ್ರಬಂಡಾದಲ್ಲಿ ಮಳೆ ಸುರಿದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>