ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಖಾಸಗಿ ವಾಹನಗಳಿಂದ ಪ್ರಯಾಣಿಕರ ಸುಲಿಗೆ!

Last Updated 11 ಡಿಸೆಂಬರ್ 2020, 8:48 IST
ಅಕ್ಷರ ಗಾತ್ರ

ರಾಯಚೂರು: ಸರ್ಕಾರಿ ಬಸ್ಗಳ ಸಂಚಾರ ಸ್ಥಗಿತವನ್ನು ಅವಕಾಶ ಮಾಡಿಕೊಂಡಿರುವ ಖಾಸಗಿ ವಾಹನದಾರರು, ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿವೆ.

ಆಟೊಗಳು ಕೂಡಾ ಬಸ್ ಪ್ರಯಾಣ ದರಕ್ಕಿಂತ ಆರು ಪಟ್ಟು ಹೆಚ್ಚು ಹಣ ಕೇಳುತ್ತಿದ್ದಾರೆ. ರಾಯಚೂರಿನಿಂದ 25 ಕಿಲೋ ಮೀಟರ್ ದೂರದ ಕಲ್ಲೂರಿಗೆ ₹27 ಬಸ್ ಪ್ರಯಾಣ ದರವಿದೆ. ಆಟೊದವರು ₹400 ಕೇಳುತ್ತಿದ್ದಾರೆ. 50 ಕಿಲೋ ಮೀಟರ್‌ ದೂರವಿರುವ ಮಾನ್ವಿಗೆ ತೆರಳಲು ಖಾಸಗಿ ವಾಹನದಾರರು ₹120 ಕೇಳುತ್ತಿದ್ದಾರೆ.

ಪೂರ್ವ ಮಾಹಿತಿಯಿಲ್ಲದೆ ಬಸ್ ನಿಲ್ದಾಣಕ್ಕೆ ಬಂದಿರುವ ಪ್ರಯಾಣಿಕರು ಹಾಗೂ ಬೆಳಿಗ್ಗೆ ಸರ್ಕಾರಿ ಬಸ್ ಮೂಲಕ ವಿವಿಧ ಕಡೆಯಿಂದ ರಾಯಚೂರಿಗೆ ಬಂದಿರುವವರು ತೊಂದರೆ ಅನುಭವಿಸುತ್ತಿದ್ದಾರೆ. ದುಬಾರಿ ಪ್ರಯಾಣ ದರ ಭರಿಸಲು ಸಾಧ್ಯವಾಗದವರ ಸಂಕಷ್ಟ ಪಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT