ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಕಬ್ಬು ಬೆಳೆಗಾರರ ವಿರೋಧಿ ಬ್ರೆಜಿಲ್ ಪ್ರಧಾನಿ ಬೋಲ್ಸೇನಾರೋ ಅವರು ಭಾರತಕ್ಕೆ ಬರುವುದನ್ನು ಎಲ್ಲ ರೈತರು ವಿರೋಧಿಸಿದ್ದಾರೆ. ಆಸ್ಟ್ರೇಲಿಯಾ ಮತ್ತು ಬ್ರೇಜಿಲ್ ದೇಶಗಳು ಜಿನಿವಾದಲ್ಲಿರುವ ವಿಶ್ವ ವಾಣಿಜ್ಯ ಒಪ್ಪಂದದ ವಿವಾದದ ನ್ಯಾಯಾಲಯದ ಮುಂದೆ ದಾವಾ ತಂದು ಭಾರತ ದೇಶದ ಕಬ್ಬು ಬೆಳೆಗಾರರಿಗೆ ವಿಶ್ವ ವಾಣಿಜ್ಯ ಒಪ್ಪಂದಕ್ಕೆ ವಿರೋಧವಾಗಿ ಹೆಚ್ಚು ಸಬ್ಸಿಡಿ ನೀಡುತ್ತಿದೆ ಮತ್ತು ಎಫ್ಆರ್ ಪಿ ದರ ನಿಗದಿ ಮಾಡುತ್ತಿದೆ, ಇದನ್ನು ರದ್ದು ಪಡಿಸಬೇಕೆಂದು ಕೇಳಿರುತ್ತಾರೆ. ಸ್ವತಃ ಬ್ರೆಜಿಲ್ ಪ್ರಧಾನಿ ಬೋಲ್ಸೇನಾರೋ ಆ ದಾವಾದಲ್ಲಿ ವಾದಿಯಾಗಿದ್ದಾರೆ. ಇಂತಹ ಪ್ರಧಾನಿಯನ್ನು ಭಾರತ ದೇಶಕ್ಕೆ ಆಹ್ವಾನಿಸುವುದು ಬೇಡ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಒತ್ತಾಯಿಸಲಾಗುವುದು. ಒಂದು ವೇಳೆ, ಭಾರತಕ್ಕೆ ಬಂದರೆ ರೈತರಿಂದ ಹೋರಾಟ ಮಾಡುವುದಾಗಿ ತಿಳಿಸಿದರು.