<p><strong>ರಾಯಚೂರು: </strong>ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಹೇಮನಾಳ ಮತ್ತು ಶಾವಂತಗೇರ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಬೇಕು ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.</p>.<p>ಐದು ವರ್ಷಗಳಿಂದ ಈ ಎರಡು ಪಂಚಾಯಿತಿಗಳಿಗೆ ಚುನಾವಣೆ ನಡೆಯದೇ ಅಭಿವೃದ್ಧಿ ಕಾರ್ಯಗಳು ಅಗುತ್ತಿಲ್ಲ. ಮೂಲಸೌಕರ್ಯ ಸ್ಥಗಿತಗೊಂಡಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 5 ವರ್ಷಕ್ಕೆ ಚುನಾವಣೆ ಚುನಾಯಿತ ಪ್ರತಿನಿಧಿಗಳು ಇಲ್ಲದ ಕಾರಣ ಗ್ರಾಮಸ್ವರಾಜ ವ್ಯವಸ್ಥೆಯ ವಿರೋಧ ಕ್ರಮವಾಗಿದೆ ಎಂದರು.</p>.<p>ಹೇಮನಾಳ ಗ್ರಾಮ ಪಂಚಾಯಿತಿಗೆ ಮದರಕಲ್ ಗ್ರಾಮ ಸೇರ್ಪಡೆ ಮಾಡುವ ಕುರಿತು ಹೈಕೋರ್ಟ್ ನಲ್ಲಿ ದಾವೆ ಇರುವ ಕಾರಣ ತಡೆಯಾಜ್ಞೆ ಇದ್ದು, ಶೀಘ್ರವೇ ತೆರವುಗೊಳಿಸಿ ಎರಡು ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು.</p>.<p>ಗ್ರಾಮಸ್ಥರಾದ ದೇವೆಂದ್ರಪ್ಪ ಗೌಡ ಶಾವಂತಗೇರಾ, ರಾಜ ಶೇಖರ ಪಾಟೀಲ, ಪರ್ವತ ರೆಡ್ಡಿ ಗೌಡ, ತಮ್ಮಣ್ಣ ಬೊಮ್ಮನಾಳ, ವಿಜಯ ಭಂಡಾರಿ ಶಾವಂತಗೇರಾ, ಸೂಗಪ್ಪ ಗೌಡ ಹೊನ್ನಟಗಿ, ಬಸವರಾಜ, ಮಾಂತಪ್ಪ ಸಾಹುಕಾರ ಹೇಮನಾಳ, ಅಮರೇಗೌಡ ಹೊನ್ನಟಗಿ, ಸತ್ಯ ನಾರಾಯಣ ಸಿಂಗ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು: </strong>ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಹೇಮನಾಳ ಮತ್ತು ಶಾವಂತಗೇರ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಬೇಕು ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.</p>.<p>ಐದು ವರ್ಷಗಳಿಂದ ಈ ಎರಡು ಪಂಚಾಯಿತಿಗಳಿಗೆ ಚುನಾವಣೆ ನಡೆಯದೇ ಅಭಿವೃದ್ಧಿ ಕಾರ್ಯಗಳು ಅಗುತ್ತಿಲ್ಲ. ಮೂಲಸೌಕರ್ಯ ಸ್ಥಗಿತಗೊಂಡಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 5 ವರ್ಷಕ್ಕೆ ಚುನಾವಣೆ ಚುನಾಯಿತ ಪ್ರತಿನಿಧಿಗಳು ಇಲ್ಲದ ಕಾರಣ ಗ್ರಾಮಸ್ವರಾಜ ವ್ಯವಸ್ಥೆಯ ವಿರೋಧ ಕ್ರಮವಾಗಿದೆ ಎಂದರು.</p>.<p>ಹೇಮನಾಳ ಗ್ರಾಮ ಪಂಚಾಯಿತಿಗೆ ಮದರಕಲ್ ಗ್ರಾಮ ಸೇರ್ಪಡೆ ಮಾಡುವ ಕುರಿತು ಹೈಕೋರ್ಟ್ ನಲ್ಲಿ ದಾವೆ ಇರುವ ಕಾರಣ ತಡೆಯಾಜ್ಞೆ ಇದ್ದು, ಶೀಘ್ರವೇ ತೆರವುಗೊಳಿಸಿ ಎರಡು ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು.</p>.<p>ಗ್ರಾಮಸ್ಥರಾದ ದೇವೆಂದ್ರಪ್ಪ ಗೌಡ ಶಾವಂತಗೇರಾ, ರಾಜ ಶೇಖರ ಪಾಟೀಲ, ಪರ್ವತ ರೆಡ್ಡಿ ಗೌಡ, ತಮ್ಮಣ್ಣ ಬೊಮ್ಮನಾಳ, ವಿಜಯ ಭಂಡಾರಿ ಶಾವಂತಗೇರಾ, ಸೂಗಪ್ಪ ಗೌಡ ಹೊನ್ನಟಗಿ, ಬಸವರಾಜ, ಮಾಂತಪ್ಪ ಸಾಹುಕಾರ ಹೇಮನಾಳ, ಅಮರೇಗೌಡ ಹೊನ್ನಟಗಿ, ಸತ್ಯ ನಾರಾಯಣ ಸಿಂಗ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>