ರಾಯಚೂರು: ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಹೇಮನಾಳ ಮತ್ತು ಶಾವಂತಗೇರ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಬೇಕು ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಐದು ವರ್ಷಗಳಿಂದ ಈ ಎರಡು ಪಂಚಾಯಿತಿಗಳಿಗೆ ಚುನಾವಣೆ ನಡೆಯದೇ ಅಭಿವೃದ್ಧಿ ಕಾರ್ಯಗಳು ಅಗುತ್ತಿಲ್ಲ. ಮೂಲಸೌಕರ್ಯ ಸ್ಥಗಿತಗೊಂಡಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 5 ವರ್ಷಕ್ಕೆ ಚುನಾವಣೆ ಚುನಾಯಿತ ಪ್ರತಿನಿಧಿಗಳು ಇಲ್ಲದ ಕಾರಣ ಗ್ರಾಮಸ್ವರಾಜ ವ್ಯವಸ್ಥೆಯ ವಿರೋಧ ಕ್ರಮವಾಗಿದೆ ಎಂದರು.
ಹೇಮನಾಳ ಗ್ರಾಮ ಪಂಚಾಯಿತಿಗೆ ಮದರಕಲ್ ಗ್ರಾಮ ಸೇರ್ಪಡೆ ಮಾಡುವ ಕುರಿತು ಹೈಕೋರ್ಟ್ ನಲ್ಲಿ ದಾವೆ ಇರುವ ಕಾರಣ ತಡೆಯಾಜ್ಞೆ ಇದ್ದು, ಶೀಘ್ರವೇ ತೆರವುಗೊಳಿಸಿ ಎರಡು ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು.
ಗ್ರಾಮಸ್ಥರಾದ ದೇವೆಂದ್ರಪ್ಪ ಗೌಡ ಶಾವಂತಗೇರಾ, ರಾಜ ಶೇಖರ ಪಾಟೀಲ, ಪರ್ವತ ರೆಡ್ಡಿ ಗೌಡ, ತಮ್ಮಣ್ಣ ಬೊಮ್ಮನಾಳ, ವಿಜಯ ಭಂಡಾರಿ ಶಾವಂತಗೇರಾ, ಸೂಗಪ್ಪ ಗೌಡ ಹೊನ್ನಟಗಿ, ಬಸವರಾಜ, ಮಾಂತಪ್ಪ ಸಾಹುಕಾರ ಹೇಮನಾಳ, ಅಮರೇಗೌಡ ಹೊನ್ನಟಗಿ, ಸತ್ಯ ನಾರಾಯಣ ಸಿಂಗ್ ಇದ್ದರು.