ಸಿರವಾರ: ಏ.21 ಮತ್ತು 22 ರಂದು ನಡೆಯಬೇಕಾಗಿದ್ದ ತಾಲ್ಲೂಕಿನ ವಡವಟ್ಟಿ ಗ್ರಾಮದ ರಂಗನಾಥ ಸ್ವಾಮಿ ಜಾತ್ರೆ ರದ್ದುಪಡಿಸಿ ತಹಶೀಲ್ದಾರ್ ಮಧುರಾಜ ಆದೇಶ ಹೊರಡಿಸಿದ್ದಾರೆ.
ಕೊರೊನಾ ಕಾರಣ ರಾಜ್ಯ ಸರ್ಕಾರದ ನಿರ್ದೇಶನದಂತೆ ಎಲ್ಲ ಜಾತ್ರೆ, ಉತ್ಸವ, ಸಭೆ ಹಾಗೂ ಸಮಾರಂಭಗಳನ್ನು ರದ್ದುಗೊಳಿಸಲಾಗಿದೆ. ಆದ್ದರಿಂದ ವಡವಟ್ಟಿ ಜಾತ್ರೆಯ ರಥೋತ್ಸವ, ಉಚ್ಛಾಯ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.