<p><strong>ಮಾನ್ವಿ (ರಾಯಚೂರು ಜಿಲ್ಲೆ):</strong> ತಾಲ್ಲೂಕಿನ ನೀರಮಾನ್ವಿ ಗುಡ್ಡದಲ್ಲಿ ಚಿರತೆ ಮರಿಯೊಂದನ್ನು ಗ್ರಾಮಸ್ಥರೆ ಭಾನುವಾರ ಸೆರೆಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.</p>.<p>ಗ್ರಾಮದ ಕುರಿಗಾಯಿಗಳು ಬೆಳಿಗ್ಗೆ ಕುರಿಗಳೊಂದಿಗೆ ಗುಡ್ಡ ಏರಿ ಹೋಗುವಾಗ ಎರಡು ಚಿರತೆ ಮರಿಗಳು ಓಡಿ ಬಂದಿವೆ. ಗಾಬರಿಯಾದ ಕುರಿಗಾಯಿಗಳು ಚಿರತೆ ಮರಿಗಳನ್ನು ಬೆದರಿಸಿದ್ದಾರೆ. ಒಂದು ಚಿರತೆ ಮರಿ ಗುಡ್ಡದಲ್ಲಿ ಓಡಿ ಮರೆಯಾಗಿದೆ. ಇನ್ನೊಂದು ಮರಿಯು ಮರ ಏರಿ ಕುಳಿತಿದೆ.</p>.<p>ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಮರ ಏರಿದ್ದ ಚಿರತೆ ಮರಿಯನ್ನು ಬಲೆಹಾಕಿ ಹಿಡಿದಿದ್ದಾರೆ.<br />ಕೆಲವು ದಿನಗಳ ಹಿಂದೆಯೇ ನೀರಮಾನ್ವಿ ಗುಡ್ಡದ ಸಮೀಪದ ಜಮೀನಿನಲ್ಲಿ ದೊಡ್ಡ ಚಿರತೆಯ ಹೆಜ್ಜೆಗಳ ಗುರುತುಗಳು ಪತ್ತೆಯಾಗಿದ್ದವು.</p>.<p>ಅದಕ್ಕೂ ಮೊದಲು ಒಂದು ತಿಂಗಳು ಹಿಂದೆ ಒಂದು ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದಿದ್ದರು. ಈಗ ಇನ್ನೊಂದು ಚಿರತೆಯು ತನ್ನ ಮರಿಗಳೊಂದಿಗೆ ಕಾಣಿಸಿಕೊಂಡಂತಾಗಿದೆ. ತಾಯಿ ಚಿರತೆ ಎಲ್ಲಿದೆ ಎನ್ನುವುದು ಗೊತ್ತಾಗಿಲ್ಲ. ಆದರೆ, ಗ್ರಾಮದಲ್ಲಿ ಆತಂಕ ಮನೆಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾನ್ವಿ (ರಾಯಚೂರು ಜಿಲ್ಲೆ):</strong> ತಾಲ್ಲೂಕಿನ ನೀರಮಾನ್ವಿ ಗುಡ್ಡದಲ್ಲಿ ಚಿರತೆ ಮರಿಯೊಂದನ್ನು ಗ್ರಾಮಸ್ಥರೆ ಭಾನುವಾರ ಸೆರೆಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.</p>.<p>ಗ್ರಾಮದ ಕುರಿಗಾಯಿಗಳು ಬೆಳಿಗ್ಗೆ ಕುರಿಗಳೊಂದಿಗೆ ಗುಡ್ಡ ಏರಿ ಹೋಗುವಾಗ ಎರಡು ಚಿರತೆ ಮರಿಗಳು ಓಡಿ ಬಂದಿವೆ. ಗಾಬರಿಯಾದ ಕುರಿಗಾಯಿಗಳು ಚಿರತೆ ಮರಿಗಳನ್ನು ಬೆದರಿಸಿದ್ದಾರೆ. ಒಂದು ಚಿರತೆ ಮರಿ ಗುಡ್ಡದಲ್ಲಿ ಓಡಿ ಮರೆಯಾಗಿದೆ. ಇನ್ನೊಂದು ಮರಿಯು ಮರ ಏರಿ ಕುಳಿತಿದೆ.</p>.<p>ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಮರ ಏರಿದ್ದ ಚಿರತೆ ಮರಿಯನ್ನು ಬಲೆಹಾಕಿ ಹಿಡಿದಿದ್ದಾರೆ.<br />ಕೆಲವು ದಿನಗಳ ಹಿಂದೆಯೇ ನೀರಮಾನ್ವಿ ಗುಡ್ಡದ ಸಮೀಪದ ಜಮೀನಿನಲ್ಲಿ ದೊಡ್ಡ ಚಿರತೆಯ ಹೆಜ್ಜೆಗಳ ಗುರುತುಗಳು ಪತ್ತೆಯಾಗಿದ್ದವು.</p>.<p>ಅದಕ್ಕೂ ಮೊದಲು ಒಂದು ತಿಂಗಳು ಹಿಂದೆ ಒಂದು ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದಿದ್ದರು. ಈಗ ಇನ್ನೊಂದು ಚಿರತೆಯು ತನ್ನ ಮರಿಗಳೊಂದಿಗೆ ಕಾಣಿಸಿಕೊಂಡಂತಾಗಿದೆ. ತಾಯಿ ಚಿರತೆ ಎಲ್ಲಿದೆ ಎನ್ನುವುದು ಗೊತ್ತಾಗಿಲ್ಲ. ಆದರೆ, ಗ್ರಾಮದಲ್ಲಿ ಆತಂಕ ಮನೆಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>