ಸಿಂಧನೂರು: ನಗರದ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳ ಉದ್ಯಾನದಲ್ಲಿ ಸುರೇಶ ಹಚ್ಚೊಳ್ಳಿ ಸುಕಾಲಪೇಟೆ ಅಭಿಮಾನಿಗಳ ಬಳಗ ಹಾಗೂ ವನಸಿರಿ ಫೌಂಡೇಶನ್ ಸಹಯೋಗದಲ್ಲಿ ಗಿಡ ಮರಗಳಿಗೆ ಮಣ್ಣಿನ ಮಡಿಕೆ ಕಟ್ಟಿ ಪಕ್ಷಿಗಳಿಗೆ ನೀರುಣಿಸುವ ಕಾರ್ಯ ನಡೆಸಲಾಯಿತು.
ನಂತರ ಯುವ ಮುಖಂಡ ಸುರೇಶ ಹಚ್ಚೊಳ್ಳಿ ಮಾತನಾಡಿ,‘ಈ ಬೇಸಿಗೆಯಲ್ಲಿ ಮನುಷ್ಯರೇ ನೀರಿಗಾಗಿ ಪರಿತಪಿಸುವ ಪರಿಸ್ಥಿತಿ ಬಂದಿದೆ. ಇಂಥ ಸಂದರ್ಭದಲ್ಲಿ ಪಕ್ಷಿಗಳಿಗೆ ನೀರುಣಿಸುವ ಕಾರ್ಯ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಆದ್ದರಿಂದ ಸಾರ್ವಜನಿಕರು ತಮ್ಮ ಮನೆಗಳ ಮೇಲೆ, ಕಾಂಪೌಂಡ್ ಆವರಣದಲ್ಲಿರುವ ಗಿಡಮರಗಳಿಗೆ ಮಣ್ಣಿನ ಮಡಿಕೆಗಳನ್ನು ಕಟ್ಟಿ ಪ್ರತಿನಿತ್ಯ ನೀರು, ಕಾಳು ಇಡುವ ಮೂಲಕ ಪಕ್ಷಿಗಳ ಸಂರಕ್ಷಣೆಗೆ ಮುಂದಾಗಬೇಕು’ ಎಂದು ಹೇಳಿದರು.
ವನಸಿರಿ ಫೌಂಡೇಶನ್ ಸಂಸ್ಥಾಪಕ ಅಮರೇಗೌಡ ಮಲ್ಲಾಪುರ, ಮುಖಂಡರಾದ ಶಂಭಣ್ಣ.ಬಿ, ನಾಗಾರಾಜ, ಮಂಜುನಾಥ ಗಾಣಗೇರಾ, ನಿರುಪಾದಿ ಸುಕಾಲಪೇಟೆ, ನಾಗರಾಜ ಬಾಗೋಡಿ, ರಾಮಕೃಷ್ಣ ಹಾಗೂ ನಿಂಗಪ್ಪ ಭಾಗವಹಿಸಿದ್ದರು.