ಸೋಮವಾರ ಹೇಳಿಕೆ ನೀಡಿರುವ ಅವರು,‘ಫೆ.19 ರಂದು ದೇವನಹಳ್ಳಿಯಿಂದ ಆರಂಭವಾದ ಈ ರ್ಯಾಲಿ ಕರ್ನಾಟಕ ರಾಜ್ಯದಾದ್ಯಂತ 13 ದಿನಗಳ ಕಾಲ 3 ಸಾವಿರ ಕಿಲೋ ಮೀಟರ್ ಸಂಚರಿಸಲಿದೆ. ಫೆ.27 ರಂದು ಬೆಳಿಗ್ಗೆ 9 ಗಂಟೆಗೆ ರಾಯಚೂರು, 10.30 ಗಂಟೆಗೆ ಮಾನ್ವಿ, 11.30 ಗಂಟೆಗೆ ಸಿಂಧನೂರಿಗೆ ಬಂದು ಬಸವ ವೃತ್ತದ ಬಳಿ ಸಾರ್ವಜನಿಕರನ್ನು ಉದ್ದೇಶಿಸಿ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಹಾಗೂ ಪಕ್ಷದ ಪ್ರಮುಖರು ಮಾತನಾಡಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಸಿರಗುಪ್ಪ, 3 ಗಂಟೆಗೆ ಬಳ್ಳಾರಿ, ಸಂಜೆ 5 ಗಂಟೆಗೆ ಹೊಸಪೇಟೆಗೆ ತೆರಳಲಿದೆ’ ಎಂದರು.