ರಾಮನಗರದಲ್ಲಿ ಮೂವತ್ತು ಹೆಚ್ಚು ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಪ್ರತಿ ಕಚೇರಿಯಲ್ಲೂ ಶೋಧ ನಡೆಸಿತ್ತು. ರಾತ್ರಿಯಾದರೂ ಈ ಕಾರ್ಯಾಚರಣೆ ನಿಂತಿರಲಿಲ್ಲ. ಮಾಗಡಿ ಕಚೇರಿಯಲ್ಲೂ ಅಧಿಕಾರಿಗಳಿಂದ ತಪಾಸಣೆ ಮುಂದುವರಿದಿತ್ತು. ದಾಳಿ ಸಂದರ್ಭ ಕಚೇರಿಗಳನ್ನು ಒಳಗಿನಿಂದ ಮುಚ್ಚಲಾಗಿತ್ತು. ಮಾಗಡಿಯಲ್ಲಿ ಡಿವೈಎಸ್ಪಿ ಮಲ್ಲೇಶ್ ನೇತೃತ್ವದಲ್ಲಿ ದಾಳಿ ನಡೆಯಿತು. ಈ ಸಂದರ್ಭ ಒಂದಿಷ್ಟು ಪ್ರಮಾಣದಲ್ಲಿ ಹಣ ಸಹ ಪತ್ತೆಯಾಯಿತು ಎನ್ನಲಾಗಿದೆ.