ಮಾಗಡಿ: ಕೆಂಪೇಗೌಡ ಸರ್ಕಲ್ನಲ್ಲಿ ಚಿತ್ರನಟ ಅಂಬರೀಷ್ ಪುತ್ಥಳಿ ನಿರ್ಮಿಸಲು ಫೆ.3ರಂದು ಬೆಳಿಗ್ಗೆ 11ಕ್ಕೆ ಶಾಸಕ ಎ.ಮಂಜುನಾಥ, ಸಂಸದ ಡಿ.ಕೆ.ಸುರೇಶ್ ಭೂಮಿ ಪೂಜೆ ನೆರವೇರಿಸಲಿದ್ದಾರೆ ಎಂದು ರಾಜ್ಯ ಅಂಬರೀಷ್ ಅಭಿಮಾನಿಗಳ ಸಂಘದ ಉಪಾಧ್ಯಕ್ಷ ಟಿ.ಕೆ.ರಾಮು ತಿಳಿಸಿದರು.
ತಾಲ್ಲೂಕು ಅಂಬರೀಷ್ ಅಭಿಮಾನಿಗಳ ಸಂಘ ಮತ್ತು ಅಭಿಮಾನಿಗಳ ಸಹಕಾರದೊಂದಿಗೆ ಪುತ್ಥಳಿ ನಿರ್ಮಾಣ ಕಾರ್ಯ ನಡೆದಿದೆ. ಎಲ್ಲರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.