ಸಂಘದ ಐದು ನಿರ್ದೇಶಕರು ಈಚೆಗೆ ರಾಜೀನಾಮೆ ನೀಡಿದ್ದು, ಅವರಲ್ಲಿ ಇಬ್ಬರು ಮಾತ್ರ ನಾಮಪತ್ರ ಹಿಂಪಡೆದಿದ್ದಾರೆ. ಈ ನಡುವೆ ಸಂಘದ ಮುಖ್ಯ ಕಾರ್ಯ ನಿರ್ವಾಹಕ ಮುತ್ತುರಾಜು ಅವರ ತಂದೆ ವೀರಭದ್ರಯ್ಯ ಅವರು ಸಂಘದ ನಿರ್ದೇಶಕರಾಗಿದ್ದಾರೆ. ಅವರ ಆಯ್ಕೆಯು ಕಾನೂನಿಗೆ ವಿರುದ್ಧವಾಗಿದ್ದು, ಅವರ ಸದಸ್ಯತ್ವ ರದ್ದಾಗುವ ಸಾಧ್ಯತೆ ಇದೆ. ಹೀಗಾದಲ್ಲಿ ಡೇರಿಯಲ್ಲಿ ಕೋರಂ ಕೊರತೆ ಎದುರಾಗಲಿದೆ.