ಬೆಳಿಗ್ಗೆ 8ರಿಂದ 9 ಗಂಟೆಯ ಮೀನ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ಹರಹರ ಮಹಾದೇವ ಎಂಬ ಘೋಷಣೆ ಕೂಗುತ್ತ ತೇರು ಎಳೆದರು. ರಥಕ್ಕೆ ಬಾಳೆಹಣ್ಣು ಹವನ ಎಸೆದು ಭಕ್ತಿ ಅರ್ಪಿಸಿದರು. ಜಾತ್ರೋತ್ಸವದ ಪ್ರಯುಕ್ತ ಜಾನಪದ ಕಲಾತಂಡಗಳು ಸಾಥ್ ನೀಡಿದವು. ರಥೋತ್ಸವದ ಪ್ರಯುಕ್ತ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನಗರದ ಅಗ್ರಹಾರ, ಎಂ.ಜಿ.ರಸ್ತೆ, ಗಣೇಶ ದೇವಾಲಯದ ರಸ್ತೆ, ಛತ್ರದ ಬೀದಿ ಬಳಸಿದ ರಥವು ಸಂಜೆಯ ವೇಳೆಗೆ ದೇವಾಲಯವನ್ನು ಸೇರಿತು.