<p><strong>ಚನ್ನಪಟ್ಟಣ</strong>: ನಗರದಲ್ಲಿ ಮಂಗಳವಾರ ನಡೆದ ಕಲೆ, ಸಾಹಿತ್ಯ, ಸಂಸ್ಕೃತಿ ಉತ್ಸವದಲ್ಲಿ ಚೌಡಮ್ಮ, ಜವರಮ್ಮ ಹಾಗೂ ಮಾಯಮ್ಮ ಮತ್ತು ತಂಡದವರು ಸೋಬಾನೆ ಗೀತೆಗಳನ್ನು ಹಾಡಿದರು.</p>.<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಸಿರಿ ಸಾಮಾಜಿಕ ಮತ್ತು ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ನಡೆದ ಉತ್ಸವದಲ್ಲಿ ವಿವಿಧ ಕಲಾವಿದರ ರಂಗಗೀತೆ, ಕ್ರಾಂತಿಗೀತೆ, ಹಾಸ್ಯ, ಮಿಮಿಕ್ರಿ ಪ್ರೇಕ್ಷಕರಿಗೆ ಮುದ ನೀಡಿದವು.</p>.<p>ಗ್ರಾಮೀಣ ಭಾಗದ ಜನರು ಕೆಲಸದ ಶ್ರಮ ಮರೆಯಲು ಕಟ್ಟಿದ ಜಾನಪದ ಸಂಸ್ಕೃತಿ ಅನನ್ಯವಾಗಿದೆ. ಶ್ರಮ ಸಂಸ್ಕೃತಿಯ ಜೊತೆ ಜಾನಪದ ಸಂಸ್ಕೃತಿ ಕಟ್ಟಿ ಬೆಳೆಸಿದ್ದಾರೆ.ಈ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ಅವಶ್ಯ ಎಂದು ಸರ್ವಸ್ವ ಗ್ರಾಮೀಣ ಸಂಸ್ಥೆಯ ಕಾರ್ಯದರ್ಶಿ ಎ.ಎಸ್. ಪ್ರೇಮ ಹೇಳಿದರು. </p>.<p>ಮಹಿಳೆಯರು ಇಂದು ಎಲ್ಲ ರಂಗಗಳಲ್ಲೂ ಮೇಲುಗೈ ಸಾಧಿಸುತ್ತಿದ್ದು, ಇದು ಮಹಿಳಾ ಸಬಲೀಕರಣಕ್ಕೆ ಬರೆಯುತ್ತಿರುವ ಮುನ್ನುಡಿ ಎಂದು ಉತ್ಸವ ಉದ್ಘಾ ಸಿವಿಲ್ ಎಂಜಿನಿಯರ್ ಎನ್. ಪೂರ್ಣಿಮಾ ಅಭಿಪ್ರಾಯಪಟ್ಟರು.</p>.<p>ಸೋಬಾನೆ ಕಲಾವಿದರಾದ ಚಂದ್ರಮ್ಮ, ಮಾಯಮ್ಮ, ಚಿಕ್ಕತಾಯಮ್ಮ, ಗಾಯಕ ಬ್ಯಾಡರಹಳ್ಳಿ ಶಿವಕುಮಾರ್, ಕಲಾವಿದ ಧರ್ಮ ಹಾಸನ್ ಮುಂತಾದ ಕಲಾವಿದರು ಭಾಗವಹಿಸಿದ್ದರು.</p>.<p>ತಿಟ್ಟಮಾರನಹಳ್ಳಿ ಸಿದ್ದೇಗೌಡ, ಎಸ್. ಕುಮಾರ್, ಕೃಷ್ಣ, ಎಸ್.ಆರ್. ಮನುಜ, ಎಸ್. ಪೂರ್ಣಿಮಾ, ಭರತ್ ಕುಮಾರ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಪಟ್ಟಣ</strong>: ನಗರದಲ್ಲಿ ಮಂಗಳವಾರ ನಡೆದ ಕಲೆ, ಸಾಹಿತ್ಯ, ಸಂಸ್ಕೃತಿ ಉತ್ಸವದಲ್ಲಿ ಚೌಡಮ್ಮ, ಜವರಮ್ಮ ಹಾಗೂ ಮಾಯಮ್ಮ ಮತ್ತು ತಂಡದವರು ಸೋಬಾನೆ ಗೀತೆಗಳನ್ನು ಹಾಡಿದರು.</p>.<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಸಿರಿ ಸಾಮಾಜಿಕ ಮತ್ತು ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ನಡೆದ ಉತ್ಸವದಲ್ಲಿ ವಿವಿಧ ಕಲಾವಿದರ ರಂಗಗೀತೆ, ಕ್ರಾಂತಿಗೀತೆ, ಹಾಸ್ಯ, ಮಿಮಿಕ್ರಿ ಪ್ರೇಕ್ಷಕರಿಗೆ ಮುದ ನೀಡಿದವು.</p>.<p>ಗ್ರಾಮೀಣ ಭಾಗದ ಜನರು ಕೆಲಸದ ಶ್ರಮ ಮರೆಯಲು ಕಟ್ಟಿದ ಜಾನಪದ ಸಂಸ್ಕೃತಿ ಅನನ್ಯವಾಗಿದೆ. ಶ್ರಮ ಸಂಸ್ಕೃತಿಯ ಜೊತೆ ಜಾನಪದ ಸಂಸ್ಕೃತಿ ಕಟ್ಟಿ ಬೆಳೆಸಿದ್ದಾರೆ.ಈ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ಅವಶ್ಯ ಎಂದು ಸರ್ವಸ್ವ ಗ್ರಾಮೀಣ ಸಂಸ್ಥೆಯ ಕಾರ್ಯದರ್ಶಿ ಎ.ಎಸ್. ಪ್ರೇಮ ಹೇಳಿದರು. </p>.<p>ಮಹಿಳೆಯರು ಇಂದು ಎಲ್ಲ ರಂಗಗಳಲ್ಲೂ ಮೇಲುಗೈ ಸಾಧಿಸುತ್ತಿದ್ದು, ಇದು ಮಹಿಳಾ ಸಬಲೀಕರಣಕ್ಕೆ ಬರೆಯುತ್ತಿರುವ ಮುನ್ನುಡಿ ಎಂದು ಉತ್ಸವ ಉದ್ಘಾ ಸಿವಿಲ್ ಎಂಜಿನಿಯರ್ ಎನ್. ಪೂರ್ಣಿಮಾ ಅಭಿಪ್ರಾಯಪಟ್ಟರು.</p>.<p>ಸೋಬಾನೆ ಕಲಾವಿದರಾದ ಚಂದ್ರಮ್ಮ, ಮಾಯಮ್ಮ, ಚಿಕ್ಕತಾಯಮ್ಮ, ಗಾಯಕ ಬ್ಯಾಡರಹಳ್ಳಿ ಶಿವಕುಮಾರ್, ಕಲಾವಿದ ಧರ್ಮ ಹಾಸನ್ ಮುಂತಾದ ಕಲಾವಿದರು ಭಾಗವಹಿಸಿದ್ದರು.</p>.<p>ತಿಟ್ಟಮಾರನಹಳ್ಳಿ ಸಿದ್ದೇಗೌಡ, ಎಸ್. ಕುಮಾರ್, ಕೃಷ್ಣ, ಎಸ್.ಆರ್. ಮನುಜ, ಎಸ್. ಪೂರ್ಣಿಮಾ, ಭರತ್ ಕುಮಾರ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>