<p><strong>ಮಾಗಡಿ</strong>: ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ ಬಾಳೆ ಹಣ್ಣಿನ ಬೆಲೆಯಲ್ಲಿ ಭಾರಿ ಏರಿಳಿತದಿಂದಾಗಿ ಅತಿ ಹೆಚ್ಚು ಬಾಳೆ ಬೆಳೆಯುವ ತಾಲ್ಲೂಕಿನ ಬೆಳೆಗಾರರು ಕಂಗಾಲಾಗಿದ್ದಾರೆ. </p>.<p>ಈ ಬಾರಿ ಪಚ್ಚೆ ಬಾಳೆ ಭರ್ಜರಿ ಫಸಲು ಬಂದಿದೆ. ಆದರೆ, ಮಾರುಕಟ್ಟೆಯಲ್ಲಿ ಕೇಳುವವರು ಇಲ್ಲದಂತಾಗಿದೆ. ಮಂಡಿಗೆ ಬಾಳೆಹಣ್ಣಿನ ಗೊನೆ ಸಾಗಿಸಲು ಕೆ.ಜಿಗೆ ಆರು ರೂಪಾಯಿ ಕೂಲಿ ಕೇಳುತ್ತಿದ್ದಾರೆ. </p>.<p>ಮಾರುಕಟ್ಟೆಗೂ ಸಾಗಿಸುವ ವೆಚ್ಚ ಭರಿಸಲಾಗದ ರೈತರು ಕಟಾವಿಗೆ ಬಂದಿರುವ ಎಕರೆ ಗಟ್ಟಲೆ ಬಾಳೆಯನ್ನು ಕಟಾವು ಮಾಡದೆ ಕೈಚೆಲ್ಲಿದ್ದಾರೆ.</p>.<p>ತಾಲ್ಲೂಕಿನ ಚಕ್ರಬಾವಿ ಸಮೀಪ ನರಸಿಂಹಮೂರ್ತಿ ಎಂಬುವರು ನಾಲ್ಕು ಎಕರೆ ತೋಟದಲ್ಲಿ ₹2.50 ಲಕ್ಷ ವೆಚ್ಚದಲ್ಲಿ ಸಾವಯವ ಪದ್ಧತಿಯಲ್ಲಿ ಪಚ್ಚೆ ಬಾಳೆ ಬೆಳೆದಿದ್ದು, ಉತ್ತಮ ಫಸಲು ಬಂದಿದೆ. ಒಂದು ಬಾಳೆಗೊನೆ ಅಂದಾಜು 40 ರಿಂದ 50 ಕೆ.ಜಿ ತೂಗುತ್ತದೆ.</p>.<p>ನಾಲ್ಕು ಎಕರೆ ತೋಟದಲ್ಲಿ 2,500 ಬಾಳೆ ಗಿಡಿ ಬೆಳೆದಿದ್ದ ನರಸಿಂಹಮೂರ್ತಿ ₹20 ಲಕ್ಷ ಆದಾಯ ನಿರೀಕ್ಷಿಸಿದ್ದರು. ಒಂದು ಬಾಳೆ ಗೊನೆ 40 ಕೆ.ಜಿ ತೂಕವಿದ್ದು ಕೆ.ಜಿಗೆ ಇಪ್ಪತ್ತು ರೂಪಾಯಿ ಸಿಕ್ಕಿದ್ದರೂ ಗೊನೆಗೆ ₹800 ಸಿಗುತ್ತಿತ್ತು. ಎರಡೂವರೆ ಲಕ್ಷ ವೆಚ್ಚ ಕಳೆದರೆ ₹17 ಲಕ್ಷ ಲಾಭವಾಗುತ್ತಿತ್ತು. ಈಗ ನೋಡಿದರೆ ಹಾಕಿದ ಬಂಡವಾಳ ಕೂಡ ಬಾರದಂತಾಗಿದೆ ಎನ್ನುತ್ತಾರೆ ನರಸಿಂಹಮೂರ್ತಿ.</p>.<p>ಕಟಾವಿಗೆ ಬಂದ ಸಮಯದಲ್ಲಿ ಸಗಟು ಮಾರುಕಟ್ಟೆಯಲ್ಲಿ ಪಚ್ಚೆ ಬಾಳೆ ಬೆಲೆ ಕುಸಿದಿದೆ. ಇದೇ ಬೆಲೆಗೆ ಮಾರಾಟ ಮಾಡಿದರೆ ಬಂಡವಾಳ ಮರಳಿ ಬರುವುದು ದೂರದ ಮಾತು. ಕೂಲಿ ಮತ್ತು ಸಾಗಾಣಿಕೆ ವೆಚ್ಚ ಕೂಡ ಮರಳಿ ಬರಲ್ಲ ಎನ್ನುವ ಸ್ಥಿತಿ ಇದೆ.</p>.<p>ಮಾಗಡಿ ತಾಲ್ಲೂಕಿನಲ್ಲಿ ಕೆಲವು ದಿನಗಳಿಂದ ಮೋಡ ಮುಸುಕಿದ ವಾತಾವರಣ ಮತ್ತು ತುಂತುರು ಮಳೆ ಇದ್ದು ಗ್ರಾಹಕರು ಬಾಳೆ ಹಣ್ಣು ಖರೀದಿಸಲು ಹಿಂಜರಿಯುತ್ತಿದ್ದಾರೆ.</p>.<p>ನೆಲಕ್ಕೆ ಬಾಗಿರುವ ಬಾಳೆಗೊನೆಗಳನ್ನು ಹಾಗೆಯೇ ತೋಟದಲ್ಲಿ ಬಿಟ್ಟರೆ ನೊಣಗಳ ಕಾಟ ಹೆಚ್ಚಾಗಿ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತದೆ. ತೋಟಕ್ಕೆ ಕಾಲಿಡಲಾಗದ ಸ್ಥಿತಿ ನಿರ್ಮಾಣವಾಗಲಿದೆ. ಹಾಗಾಗಿ ನೆಂಟರು, ಪರಿಚಿತರು ಮತ್ತು ಸ್ನೇಹಿತರಿಗೆ ಉಚಿತವಾಗಿ ಬಾಳೆ ಗೊನೆಗಳನ್ನು ಕೊಡುತ್ತಿದ್ದೇವೆ ಎಂದು ಬೆಳೆಗಾರರು ಹೇಳುತ್ತಾರೆ.</p>.<p>ಕೃಷಿಗೆ ಬಳಸುವ ರಸಗೊಬ್ಬರ ಕೀಟನಾಶಕಗಳಿಗೆ ಗರಿಷ್ಠ ಮಾರಾಟ ಬೆಲೆ (ಎಂಆರ್ಪಿ) ನಿಗದಿ ಮಾಡಿರುವ ಸರ್ಕಾರ ಅದೇ ರೀತಿ ರೈತರ ಬೆಳೆಗಳಿಗೂ ಎಂಆರ್ಪಿ ನಿಗದಿ ಮಾಡಬೇಕು. ಈ ರೀತಿ ಬೆಲೆ ಕುಸಿದಾಗ ಸರ್ಕಾರ ರೈತರ ನೆರವಿಗೆ ನಿಲ್ಲಬೇಕು.</p><p><strong>-ಗೋವಿಂದರಾಜುತಾಲ್ಲೂಕು ಅಧ್ಯಕ್ಷ ರೈತ ಸಂಘ </strong></p>.<p>ಹಾಪ್ಕಾಮ್ಸ್ ಬಾಳೆಯನ್ನು ನಿಗದಿತ ಬೆಲೆಯಲ್ಲಿ ಕೊಂಡು ಸರ್ಕಾರಿ ಆಸ್ಪತ್ರೆ ಮತ್ತು ಜೈಲುಗಳಿಗೆವಿತರಿಸಬೇಕು. ಇದರಿಂದ ರೈತರಿಗೆ ನುಕೂಲವಾಗುತ್ತದೆ. ಇಲ್ಲವಾದರೆ ಮಾಗಡಿ ಮತ್ತು ರಾಮನಗರ ತಾಲ್ಲೂಕಿನ ಬಾಳೆ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ.</p><p><strong>-ಹೊಸಪಾಳ್ಯ ಲೋಕೇಶ್ ಬಾಳೆ ಬೆಳೆಗಾರರು </strong></p>.<p>ಬಾಳೆಚಿಕ್ಕುಟೊಮ್ಯಾಟೊ ಹಾಗೂ ಇತರ ತೋಟಗಾರಿಕೆ ಬೆಳೆಗಳಿಗೆ ಸರ್ಕಾರ ಸಿ 2/50 ಅನುದಾನ ಬಿಡುಗಡೆ ಮಾಡಬೇಕು. ಶೇ.50 ವೆಚ್ಚ ಭರಿಸುವ ಮೂಲಕ ರೈತರ ನೆರವಿಗೆ ಸರ್ಕಾರ ನಿಲ್ಲಬೇಕು. ರೈತರಿಂದ ಸರ್ಕಾರ ನೇರವಾಗಿ ಬಾಳೆ ಖರೀದಿಸಿ ಸರ್ಕಾರಿ ಶಾಲಾ ಮಕ್ಕಳ ಮಧ್ಯಾಹ್ನದ ಊಟದ ಜೊತೆ ಕೊಡುವ ಕೆಲಸ ಮಾಡಬೇಕು.</p><p><strong>-ಬಗಿನಗೆರೆ ರಂಗಸ್ವಾಮಿ ಪ್ರಗತಿಪರ ರೈತ</strong> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಗಡಿ</strong>: ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ ಬಾಳೆ ಹಣ್ಣಿನ ಬೆಲೆಯಲ್ಲಿ ಭಾರಿ ಏರಿಳಿತದಿಂದಾಗಿ ಅತಿ ಹೆಚ್ಚು ಬಾಳೆ ಬೆಳೆಯುವ ತಾಲ್ಲೂಕಿನ ಬೆಳೆಗಾರರು ಕಂಗಾಲಾಗಿದ್ದಾರೆ. </p>.<p>ಈ ಬಾರಿ ಪಚ್ಚೆ ಬಾಳೆ ಭರ್ಜರಿ ಫಸಲು ಬಂದಿದೆ. ಆದರೆ, ಮಾರುಕಟ್ಟೆಯಲ್ಲಿ ಕೇಳುವವರು ಇಲ್ಲದಂತಾಗಿದೆ. ಮಂಡಿಗೆ ಬಾಳೆಹಣ್ಣಿನ ಗೊನೆ ಸಾಗಿಸಲು ಕೆ.ಜಿಗೆ ಆರು ರೂಪಾಯಿ ಕೂಲಿ ಕೇಳುತ್ತಿದ್ದಾರೆ. </p>.<p>ಮಾರುಕಟ್ಟೆಗೂ ಸಾಗಿಸುವ ವೆಚ್ಚ ಭರಿಸಲಾಗದ ರೈತರು ಕಟಾವಿಗೆ ಬಂದಿರುವ ಎಕರೆ ಗಟ್ಟಲೆ ಬಾಳೆಯನ್ನು ಕಟಾವು ಮಾಡದೆ ಕೈಚೆಲ್ಲಿದ್ದಾರೆ.</p>.<p>ತಾಲ್ಲೂಕಿನ ಚಕ್ರಬಾವಿ ಸಮೀಪ ನರಸಿಂಹಮೂರ್ತಿ ಎಂಬುವರು ನಾಲ್ಕು ಎಕರೆ ತೋಟದಲ್ಲಿ ₹2.50 ಲಕ್ಷ ವೆಚ್ಚದಲ್ಲಿ ಸಾವಯವ ಪದ್ಧತಿಯಲ್ಲಿ ಪಚ್ಚೆ ಬಾಳೆ ಬೆಳೆದಿದ್ದು, ಉತ್ತಮ ಫಸಲು ಬಂದಿದೆ. ಒಂದು ಬಾಳೆಗೊನೆ ಅಂದಾಜು 40 ರಿಂದ 50 ಕೆ.ಜಿ ತೂಗುತ್ತದೆ.</p>.<p>ನಾಲ್ಕು ಎಕರೆ ತೋಟದಲ್ಲಿ 2,500 ಬಾಳೆ ಗಿಡಿ ಬೆಳೆದಿದ್ದ ನರಸಿಂಹಮೂರ್ತಿ ₹20 ಲಕ್ಷ ಆದಾಯ ನಿರೀಕ್ಷಿಸಿದ್ದರು. ಒಂದು ಬಾಳೆ ಗೊನೆ 40 ಕೆ.ಜಿ ತೂಕವಿದ್ದು ಕೆ.ಜಿಗೆ ಇಪ್ಪತ್ತು ರೂಪಾಯಿ ಸಿಕ್ಕಿದ್ದರೂ ಗೊನೆಗೆ ₹800 ಸಿಗುತ್ತಿತ್ತು. ಎರಡೂವರೆ ಲಕ್ಷ ವೆಚ್ಚ ಕಳೆದರೆ ₹17 ಲಕ್ಷ ಲಾಭವಾಗುತ್ತಿತ್ತು. ಈಗ ನೋಡಿದರೆ ಹಾಕಿದ ಬಂಡವಾಳ ಕೂಡ ಬಾರದಂತಾಗಿದೆ ಎನ್ನುತ್ತಾರೆ ನರಸಿಂಹಮೂರ್ತಿ.</p>.<p>ಕಟಾವಿಗೆ ಬಂದ ಸಮಯದಲ್ಲಿ ಸಗಟು ಮಾರುಕಟ್ಟೆಯಲ್ಲಿ ಪಚ್ಚೆ ಬಾಳೆ ಬೆಲೆ ಕುಸಿದಿದೆ. ಇದೇ ಬೆಲೆಗೆ ಮಾರಾಟ ಮಾಡಿದರೆ ಬಂಡವಾಳ ಮರಳಿ ಬರುವುದು ದೂರದ ಮಾತು. ಕೂಲಿ ಮತ್ತು ಸಾಗಾಣಿಕೆ ವೆಚ್ಚ ಕೂಡ ಮರಳಿ ಬರಲ್ಲ ಎನ್ನುವ ಸ್ಥಿತಿ ಇದೆ.</p>.<p>ಮಾಗಡಿ ತಾಲ್ಲೂಕಿನಲ್ಲಿ ಕೆಲವು ದಿನಗಳಿಂದ ಮೋಡ ಮುಸುಕಿದ ವಾತಾವರಣ ಮತ್ತು ತುಂತುರು ಮಳೆ ಇದ್ದು ಗ್ರಾಹಕರು ಬಾಳೆ ಹಣ್ಣು ಖರೀದಿಸಲು ಹಿಂಜರಿಯುತ್ತಿದ್ದಾರೆ.</p>.<p>ನೆಲಕ್ಕೆ ಬಾಗಿರುವ ಬಾಳೆಗೊನೆಗಳನ್ನು ಹಾಗೆಯೇ ತೋಟದಲ್ಲಿ ಬಿಟ್ಟರೆ ನೊಣಗಳ ಕಾಟ ಹೆಚ್ಚಾಗಿ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತದೆ. ತೋಟಕ್ಕೆ ಕಾಲಿಡಲಾಗದ ಸ್ಥಿತಿ ನಿರ್ಮಾಣವಾಗಲಿದೆ. ಹಾಗಾಗಿ ನೆಂಟರು, ಪರಿಚಿತರು ಮತ್ತು ಸ್ನೇಹಿತರಿಗೆ ಉಚಿತವಾಗಿ ಬಾಳೆ ಗೊನೆಗಳನ್ನು ಕೊಡುತ್ತಿದ್ದೇವೆ ಎಂದು ಬೆಳೆಗಾರರು ಹೇಳುತ್ತಾರೆ.</p>.<p>ಕೃಷಿಗೆ ಬಳಸುವ ರಸಗೊಬ್ಬರ ಕೀಟನಾಶಕಗಳಿಗೆ ಗರಿಷ್ಠ ಮಾರಾಟ ಬೆಲೆ (ಎಂಆರ್ಪಿ) ನಿಗದಿ ಮಾಡಿರುವ ಸರ್ಕಾರ ಅದೇ ರೀತಿ ರೈತರ ಬೆಳೆಗಳಿಗೂ ಎಂಆರ್ಪಿ ನಿಗದಿ ಮಾಡಬೇಕು. ಈ ರೀತಿ ಬೆಲೆ ಕುಸಿದಾಗ ಸರ್ಕಾರ ರೈತರ ನೆರವಿಗೆ ನಿಲ್ಲಬೇಕು.</p><p><strong>-ಗೋವಿಂದರಾಜುತಾಲ್ಲೂಕು ಅಧ್ಯಕ್ಷ ರೈತ ಸಂಘ </strong></p>.<p>ಹಾಪ್ಕಾಮ್ಸ್ ಬಾಳೆಯನ್ನು ನಿಗದಿತ ಬೆಲೆಯಲ್ಲಿ ಕೊಂಡು ಸರ್ಕಾರಿ ಆಸ್ಪತ್ರೆ ಮತ್ತು ಜೈಲುಗಳಿಗೆವಿತರಿಸಬೇಕು. ಇದರಿಂದ ರೈತರಿಗೆ ನುಕೂಲವಾಗುತ್ತದೆ. ಇಲ್ಲವಾದರೆ ಮಾಗಡಿ ಮತ್ತು ರಾಮನಗರ ತಾಲ್ಲೂಕಿನ ಬಾಳೆ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ.</p><p><strong>-ಹೊಸಪಾಳ್ಯ ಲೋಕೇಶ್ ಬಾಳೆ ಬೆಳೆಗಾರರು </strong></p>.<p>ಬಾಳೆಚಿಕ್ಕುಟೊಮ್ಯಾಟೊ ಹಾಗೂ ಇತರ ತೋಟಗಾರಿಕೆ ಬೆಳೆಗಳಿಗೆ ಸರ್ಕಾರ ಸಿ 2/50 ಅನುದಾನ ಬಿಡುಗಡೆ ಮಾಡಬೇಕು. ಶೇ.50 ವೆಚ್ಚ ಭರಿಸುವ ಮೂಲಕ ರೈತರ ನೆರವಿಗೆ ಸರ್ಕಾರ ನಿಲ್ಲಬೇಕು. ರೈತರಿಂದ ಸರ್ಕಾರ ನೇರವಾಗಿ ಬಾಳೆ ಖರೀದಿಸಿ ಸರ್ಕಾರಿ ಶಾಲಾ ಮಕ್ಕಳ ಮಧ್ಯಾಹ್ನದ ಊಟದ ಜೊತೆ ಕೊಡುವ ಕೆಲಸ ಮಾಡಬೇಕು.</p><p><strong>-ಬಗಿನಗೆರೆ ರಂಗಸ್ವಾಮಿ ಪ್ರಗತಿಪರ ರೈತ</strong> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>