<p><strong>ಚನ್ನಪಟ್ಟಣ</strong>: ಬೆಂಗಳೂರು-ಮೈಸೂರು ಹೆದ್ದಾರಿ ಉತ್ತರ ಹಾಗೂ ದಕ್ಷಿಣ ಭಾಗದಲ್ಲಿ ಇರುವ ಎರಡು ಸಂಪರ್ಕ ರಸ್ತೆಗಳು ಸಾರ್ವಜನಿಕ ಉಪಯೋಗಕ್ಕೆ ಬಾರದೆ ಮುಚ್ಚಿ ಹೋಗಿದೆ. ಈ ರಸ್ತೆಗಳು ಸಾರ್ವಜನಿಕರ ಕಸ ಸುರಿಯುವ ಜಾಗಗಳಾಗಿ ಮಾರ್ಪಾಡಾಗಿವೆ.</p>.<p>ಕುವೆಂಪು ನಗರದ ಒಂದು ಅಡ್ಡ ರಸ್ತೆಯಿಂದ ಮತ್ತೊಂದು ಅಡ್ಡ ರಸ್ತೆಗೆ ತೆರಳಲು ಹಾಗೂ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಹಾಗೂ ಸಾರ್ವಜನಿಕರ ಓಡಾಟದ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ನಿರ್ಮಿಸಲಾಗಿರುವ ಸುಮಾರು ಎರಡು ಕಿ.ಮೀ. ಉದ್ದದ ಸಂಪರ್ಕ ರಸ್ತೆಗಳು ಸ್ವಚ್ಛತೆ ಕಾಣದೆ ಕಸ ಹಾಕುವ ತಾಣಗಳಾಗಿವೆ. ಹಂದಿ, ನಾಯಿಗಳ ಆವಾಸಸ್ಥಾನಗಳಾಗಿವೆ.</p>.<p>ಕುವೆಂಪು ನಗರದ ದಕ್ಷಿಣ ಭಾಗದಲ್ಲಿ ಒಂದನೇ ಅಡ್ಡ ರಸ್ತೆಯಿಂದ ಆರಂಭವಾಗಿ ಮಂಗಳವಾರಪೇಟೆವರೆಗೆ ಇರುವ ಸಂಪರ್ಕ ರಸ್ತೆಯು ಒಂದನೇ ಅಡ್ಡ ರಸ್ತೆಯಿಂದ ಎರಡನೇ ಅಡ್ಡ ರಸ್ತೆವರೆಗೆ ಮಾತ್ರ ಸುಸ್ಥಿತಿಯಲ್ಲಿದೆ. ಆ ನಂತರದ ರಸ್ತೆ ಕಸದ ತೊಟ್ಟಿಯಾಗಿ ಮಾರ್ಪಾಡಾಗಿದೆ. ಅದು ಮುಂದುವರಿದಂತೆ ಕೆಲವೆಡೆ ಮುಚ್ಚಿ ಹೋಗಿದೆ. ಕೆಲವೆಡೆ ಅಕ್ಕಪಕ್ಕದ ನಿವಾಸಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಒಂದನೇ ಅಡ್ಡ ರಸ್ತೆ ಸಂಪರ್ಕ ರಸ್ತೆಯು ಸ್ವಚ್ಛತೆ ಕಾಪಾಡಿಕೊಂಡಿದ್ದರೂ ಅದು ಸಾರ್ವಜನಿಕರ ವಾಹನಗಳ ನಿಲುಗಡೆ ಸ್ಥಾನವಾಗಿದೆ ಎನ್ನುವುದು ಸಾರ್ವಜನಿಕರ ಆರೋಪ.</p>.<p>ದಕ್ಷಿಣದ ರಸ್ತೆಯು ಹೆಚ್ಚು ಸಾರ್ವಜನಿಕರು ಓಡಾಡುವ ರಸ್ತೆಯಾಗಿದೆ. ಕುವೆಂಪು ನಗರ, ಮಂಜುನಾಥ ನಗರ, ವಿವೇಕಾನಂದ ನಗರ, ಮಂಗಳವಾರಪೇಟೆ ಸೇರಿದಂತೆ ಹಲವು ಬಡಾವಣೆಗಳಿಗೆ ತೆರಳುವ ಮಂದಿ ಇದನ್ನು ಬಳಸುತ್ತಿದ್ದರು. ಆದರೆ, ಈಗ ಈ ರಸ್ತೆ ಇದ್ದೂ ಇಲ್ಲದಂತಾಗಿದೆ ಎಂದು ಕುವೆಂಪು ನಗರದ ನಾಗರಾಜು, ಕೃಷ್ಣರಾಜು ಆರೋಪಿಸುತ್ತಾರೆ.</p>.<p>ಹಾಗೆಯೇ ಕುವೆಂಪು ನಗರದ ಉತ್ತರಕ್ಕಿರುವ ಸಂಪರ್ಕ ರಸ್ತೆಯು ಒಂದನೇ ಅಡ್ಡರಸ್ತೆಯಿಂದ 12ನೇ ಅಡ್ಡ ರಸ್ತೆ ನ್ಯಾಯಾಲಯದ ರಸ್ತೆವರೆಗೂ ಸಂಪರ್ಕ ಕಲ್ಪಿಸುತ್ತದೆ. ಇದು ಸಹ ಕೊಳಚೆ ನೀರು ಹರಿಯುವ, ಕಸ ಹಾಕುವ ತಾಣವಾಗಿದೆ. ನಗರಸಭೆ ಅಧಿಕಾರಿಗಳು ಈ ರಸ್ತೆಯನ್ನು ಸ್ವಚ್ಛ ಮಾಡಿಸಿ, ಕಾಂಕ್ರೀಟ್ ಹಾಕಿಸಿದ್ದರು. ಈ ರಸ್ತೆಯಲ್ಲಿ ಹೆಚ್ಚು ಮಂದಿ ಓಡಾಡದ ಕಾರಣ ಈಗ ಅಲ್ಲಲ್ಲಿ ಕಸ ಹಾಕುವ ತಾಣವಾಗಿದೆ ಎನ್ನುವುದು ಸಾರ್ವಜನಿಕರ ಆರೋಪ.</p>.<p>ಕುವೆಂಪು ನಗರದ ಒಂದರಿಂದ 12ನೇ ಅಡ್ಡ ರಸ್ತೆಗಳಲ್ಲಿ ನಗರಸಭೆಯು ಅಲ್ಲಲ್ಲಿ ಹಲವು ಕಸದ ತೊಟ್ಟಿ ನಿರ್ಮಾಣ ಮಾಡಿದ್ದರೂ ಕೆಲವರು ಈ ತೊಟ್ಟಿಗಳಲ್ಲಿ ಕಸ ಹಾಕದೆ, ಸಂಪರ್ಕ ರಸ್ತೆಗಳಲ್ಲಿ ಕಸ ಹಾಕುತ್ತಿದ್ದಾರೆ. ಅದರಲ್ಲೂ ಎರಡನೇ ಅಡ್ಡ ರಸ್ತೆಯಿಂದ ಮೂರನೇ ಅಡ್ಡ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಂತೂ ಕಸದ ತೊಟ್ಟಿಯಾಗಿದೆ. ಇದು ನಗರಸಭೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಬಗ್ಗೆ ಸಾರ್ವಜನಿಕರಿಗೆ ಎಷ್ಟೇ ಜಾಗೃತಿ ಮೂಡಿಸಿದರೂ ಪ್ರಯೋಜನವಾಗದ ಕಾರಣ ಕುಪಿತಗೊಂಡ ನಗರಸಭೆ ಅಧಿಕಾರಿಗಳು ಈ ರಸ್ತೆಯನ್ನು ಎರಡೂ ಕಡೆ ಮುಚ್ಚಿ ಬೀಗ ಹಾಕಿದ್ದಾರೆ. ಇಲ್ಲಿ ಕಸ ಹಾಕಿದರೆ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ನಾಮಫಲಕ ಹಾಕಿದ್ದಾರೆ.</p>.<p>ಸಂಪರ್ಕ ರಸ್ತೆಗಳನ್ನು ರಿಪೇರಿ ಮಾಡಿದ ಮೇಲೆ ಅವುಗಳನ್ನು ಸ್ವಚ್ಛವಾಗಿಟ್ಟು ಸಾರ್ವಜನಿಕರ ಉಪಯೋಗಕ್ಕೆ ಮುಕ್ತ ಮಾಡುವುದು ನಗರಸಭೆ ಕೆಲಸ. ಆದರೆ, ನಗರಸಭೆ ಅಧಿಕಾರಿಗಳು ಇದಕ್ಕೂ ನಮಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಈ ಬಗ್ಗೆ ಗಮನ ಸೆಳೆದರೂ ಕೇವಲ ಕಸ ವಿಲೇವಾರಿ ಮಾಡಿ ಸುಮ್ಮನಾಗುತ್ತಾರೆ. ಸ್ವಲ್ಪ ದಿನದ ನಂತರ ಸಂಪರ್ಕ ರಸ್ತೆಗಳು ಮತ್ತೆ ಯಥಾಸ್ಥಿತಿಗೆ ಬರುತ್ತವೆ ಎಂದು ನಾಗರಿಕರಾದ ಅರುಣ್ ಕುಮಾರ್, ರೋಹಿತ್ ತಿಳಿಸುತ್ತಾರೆ.</p>.<p>ನಗರಸಭೆಯು ಒತ್ತುವರಿಯಾಗಿರುವ ಸಂಪರ್ಕ ರಸ್ತೆ ತೆರವುಗೊಳಿಸಿ ಸಾರ್ವಜನಿಕರಿಗೆ ಮುಕ್ತ ಮಾಡಬೇಕು. ಕಸ ಹಾಕದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ರಸ್ತೆಗಳ ಸ್ವಚ್ಛತೆಗೆ ಪ್ರತಿದಿನ ಆದ್ಯತೆ ನೀಡಬೇಕು. ಕಸ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.</p>.<p><strong>ಸ್ವಚ್ಛತೆಗೆ ನಗರಸಭೆ ಮುಂದಾಗಲಿ</strong></p><p>‘ಕುವೆಂಪು ನಗರದಲ್ಲಿ ಓಡಾಡುವ ಜನರು ಹೆಚ್ಚಾಗಿ ಸಂಪರ್ಕ ರಸ್ತೆ ಬಳಸುತ್ತಾರೆ. ಈ ರಸ್ತೆಗಳ ಸ್ವಚ್ಛತೆಗೆ ನಗರಸಭೆ ಆದ್ಯತೆ ನೀಡಬೇಕು. ಸಂಪರ್ಕ ರಸ್ತೆಗಳನ್ನು ಸರಿಪಡಿಸಿದರೆ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಓಡಾಡುವವರು ಈ ರಸ್ತೆಗಳನ್ನು ಬಳಸಿದರೆ ಅಲ್ಲಿ ಆಗುವ ಅಪಘಾತ ತಡೆಯಬಹುದು. ಸಂಪರ್ಕ ರಸ್ತೆಗಳು ಅವಶ್ಯಕವಾಗಿ ಬೇಕಾಗಿದೆ.’</p><p>– ಪ್ರದೀಪ್ ಕುಮಾರ್, ಸ್ಥಳೀಯ ನಿವಾಸಿ, ಚನ್ನಪಟ್ಟಣ </p><p><strong>ಬೀಗ ಹಾಕುವುದು ಸೂಕ್ತವಲ್ಲ </strong></p><p>‘ನಗರದ ದೂರದೃಷ್ಟಿ ಫಲವಾಗಿ ಸಂಪರ್ಕ ರಸ್ತೆಗಳು ನಿರ್ಮಾಣವಾಗಿವೆ. ಆದರೆ, ಈ ರಸ್ತೆಗಳ ಸಮರ್ಪಕ ಉಪಯೋಗ ಆಗದಿರುವುದು ನಿಜಕ್ಕೂ ದುರಂತ. ಇದಲ್ಲದೆ ಎರಡು ಹಾಗೂ ಮೂರನೇ ಅಡ್ಡ ರಸ್ತೆಯನ್ನು ಮುಚ್ಚಿ ಬೀಗ ಹಾಕಿರಿವುದು ಸೂಕ್ತವಲ್ಲ. ಈ ರಸ್ತೆಗಳನ್ನು ಸ್ವಚ್ಛ ಮಾಡಿ ಸಾರ್ವಜನಿಕರ ಉಪಯೋಗಕ್ಕೆ ಮುಕ್ತ ಮಾಡುವುದು ನಗರಸಭೆ ಕರ್ತವ್ಯ’</p><p>– ಜಿ.ರಾಘವೇಂದ್ರ, ಚನ್ನಪಟ್ಟಣ</p><p><strong>ಕಸ ತಡೆಯಲು ಮುಚ್ಚಲಾಗಿದೆ</strong></p><p>‘ಸಂಪರ್ಕ ರಸ್ತೆಗಳಲ್ಲಿ ಕಸ ಸುರಿಯುವುದು ಹೆಚ್ಚಾಗಿದ್ದ ಕಾರಣ ಅಲ್ಲಿ ಸಾರ್ವಜನಿಕ ಪ್ರಕಟಣೆ ಹಾಕಿ ಎರಡು ರಸ್ತೆ ಮುಚ್ಚಲಾಗಿದೆ. ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರೂ ಪ್ರಯೋಜನವಾಗಿರಲಿಲ್ಲ. ಹಾಗಾಗಿ ಕ್ರಮ ಕೈಗೊಳ್ಳಲಾಗಿದೆ. ಮುಂದೆ ಅವುಗಳನ್ನು ಸ್ವಚ್ಛ ಮಾಡಿ ಸಾರ್ವಜನಿಕರ ಓಡಾಟಕ್ಕೆ ಮುಕ್ತ ಮಾಡುತ್ತೇವೆ’.</p><p>– ವಾಸಿಲ್ ಆಲಿಖಾನ್, ನಗರಸಭೆ ಅಧ್ಯಕ್ಷ, ಚನ್ನಪಟ್ಟಣ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಪಟ್ಟಣ</strong>: ಬೆಂಗಳೂರು-ಮೈಸೂರು ಹೆದ್ದಾರಿ ಉತ್ತರ ಹಾಗೂ ದಕ್ಷಿಣ ಭಾಗದಲ್ಲಿ ಇರುವ ಎರಡು ಸಂಪರ್ಕ ರಸ್ತೆಗಳು ಸಾರ್ವಜನಿಕ ಉಪಯೋಗಕ್ಕೆ ಬಾರದೆ ಮುಚ್ಚಿ ಹೋಗಿದೆ. ಈ ರಸ್ತೆಗಳು ಸಾರ್ವಜನಿಕರ ಕಸ ಸುರಿಯುವ ಜಾಗಗಳಾಗಿ ಮಾರ್ಪಾಡಾಗಿವೆ.</p>.<p>ಕುವೆಂಪು ನಗರದ ಒಂದು ಅಡ್ಡ ರಸ್ತೆಯಿಂದ ಮತ್ತೊಂದು ಅಡ್ಡ ರಸ್ತೆಗೆ ತೆರಳಲು ಹಾಗೂ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಹಾಗೂ ಸಾರ್ವಜನಿಕರ ಓಡಾಟದ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ನಿರ್ಮಿಸಲಾಗಿರುವ ಸುಮಾರು ಎರಡು ಕಿ.ಮೀ. ಉದ್ದದ ಸಂಪರ್ಕ ರಸ್ತೆಗಳು ಸ್ವಚ್ಛತೆ ಕಾಣದೆ ಕಸ ಹಾಕುವ ತಾಣಗಳಾಗಿವೆ. ಹಂದಿ, ನಾಯಿಗಳ ಆವಾಸಸ್ಥಾನಗಳಾಗಿವೆ.</p>.<p>ಕುವೆಂಪು ನಗರದ ದಕ್ಷಿಣ ಭಾಗದಲ್ಲಿ ಒಂದನೇ ಅಡ್ಡ ರಸ್ತೆಯಿಂದ ಆರಂಭವಾಗಿ ಮಂಗಳವಾರಪೇಟೆವರೆಗೆ ಇರುವ ಸಂಪರ್ಕ ರಸ್ತೆಯು ಒಂದನೇ ಅಡ್ಡ ರಸ್ತೆಯಿಂದ ಎರಡನೇ ಅಡ್ಡ ರಸ್ತೆವರೆಗೆ ಮಾತ್ರ ಸುಸ್ಥಿತಿಯಲ್ಲಿದೆ. ಆ ನಂತರದ ರಸ್ತೆ ಕಸದ ತೊಟ್ಟಿಯಾಗಿ ಮಾರ್ಪಾಡಾಗಿದೆ. ಅದು ಮುಂದುವರಿದಂತೆ ಕೆಲವೆಡೆ ಮುಚ್ಚಿ ಹೋಗಿದೆ. ಕೆಲವೆಡೆ ಅಕ್ಕಪಕ್ಕದ ನಿವಾಸಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಒಂದನೇ ಅಡ್ಡ ರಸ್ತೆ ಸಂಪರ್ಕ ರಸ್ತೆಯು ಸ್ವಚ್ಛತೆ ಕಾಪಾಡಿಕೊಂಡಿದ್ದರೂ ಅದು ಸಾರ್ವಜನಿಕರ ವಾಹನಗಳ ನಿಲುಗಡೆ ಸ್ಥಾನವಾಗಿದೆ ಎನ್ನುವುದು ಸಾರ್ವಜನಿಕರ ಆರೋಪ.</p>.<p>ದಕ್ಷಿಣದ ರಸ್ತೆಯು ಹೆಚ್ಚು ಸಾರ್ವಜನಿಕರು ಓಡಾಡುವ ರಸ್ತೆಯಾಗಿದೆ. ಕುವೆಂಪು ನಗರ, ಮಂಜುನಾಥ ನಗರ, ವಿವೇಕಾನಂದ ನಗರ, ಮಂಗಳವಾರಪೇಟೆ ಸೇರಿದಂತೆ ಹಲವು ಬಡಾವಣೆಗಳಿಗೆ ತೆರಳುವ ಮಂದಿ ಇದನ್ನು ಬಳಸುತ್ತಿದ್ದರು. ಆದರೆ, ಈಗ ಈ ರಸ್ತೆ ಇದ್ದೂ ಇಲ್ಲದಂತಾಗಿದೆ ಎಂದು ಕುವೆಂಪು ನಗರದ ನಾಗರಾಜು, ಕೃಷ್ಣರಾಜು ಆರೋಪಿಸುತ್ತಾರೆ.</p>.<p>ಹಾಗೆಯೇ ಕುವೆಂಪು ನಗರದ ಉತ್ತರಕ್ಕಿರುವ ಸಂಪರ್ಕ ರಸ್ತೆಯು ಒಂದನೇ ಅಡ್ಡರಸ್ತೆಯಿಂದ 12ನೇ ಅಡ್ಡ ರಸ್ತೆ ನ್ಯಾಯಾಲಯದ ರಸ್ತೆವರೆಗೂ ಸಂಪರ್ಕ ಕಲ್ಪಿಸುತ್ತದೆ. ಇದು ಸಹ ಕೊಳಚೆ ನೀರು ಹರಿಯುವ, ಕಸ ಹಾಕುವ ತಾಣವಾಗಿದೆ. ನಗರಸಭೆ ಅಧಿಕಾರಿಗಳು ಈ ರಸ್ತೆಯನ್ನು ಸ್ವಚ್ಛ ಮಾಡಿಸಿ, ಕಾಂಕ್ರೀಟ್ ಹಾಕಿಸಿದ್ದರು. ಈ ರಸ್ತೆಯಲ್ಲಿ ಹೆಚ್ಚು ಮಂದಿ ಓಡಾಡದ ಕಾರಣ ಈಗ ಅಲ್ಲಲ್ಲಿ ಕಸ ಹಾಕುವ ತಾಣವಾಗಿದೆ ಎನ್ನುವುದು ಸಾರ್ವಜನಿಕರ ಆರೋಪ.</p>.<p>ಕುವೆಂಪು ನಗರದ ಒಂದರಿಂದ 12ನೇ ಅಡ್ಡ ರಸ್ತೆಗಳಲ್ಲಿ ನಗರಸಭೆಯು ಅಲ್ಲಲ್ಲಿ ಹಲವು ಕಸದ ತೊಟ್ಟಿ ನಿರ್ಮಾಣ ಮಾಡಿದ್ದರೂ ಕೆಲವರು ಈ ತೊಟ್ಟಿಗಳಲ್ಲಿ ಕಸ ಹಾಕದೆ, ಸಂಪರ್ಕ ರಸ್ತೆಗಳಲ್ಲಿ ಕಸ ಹಾಕುತ್ತಿದ್ದಾರೆ. ಅದರಲ್ಲೂ ಎರಡನೇ ಅಡ್ಡ ರಸ್ತೆಯಿಂದ ಮೂರನೇ ಅಡ್ಡ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಂತೂ ಕಸದ ತೊಟ್ಟಿಯಾಗಿದೆ. ಇದು ನಗರಸಭೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಬಗ್ಗೆ ಸಾರ್ವಜನಿಕರಿಗೆ ಎಷ್ಟೇ ಜಾಗೃತಿ ಮೂಡಿಸಿದರೂ ಪ್ರಯೋಜನವಾಗದ ಕಾರಣ ಕುಪಿತಗೊಂಡ ನಗರಸಭೆ ಅಧಿಕಾರಿಗಳು ಈ ರಸ್ತೆಯನ್ನು ಎರಡೂ ಕಡೆ ಮುಚ್ಚಿ ಬೀಗ ಹಾಕಿದ್ದಾರೆ. ಇಲ್ಲಿ ಕಸ ಹಾಕಿದರೆ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ನಾಮಫಲಕ ಹಾಕಿದ್ದಾರೆ.</p>.<p>ಸಂಪರ್ಕ ರಸ್ತೆಗಳನ್ನು ರಿಪೇರಿ ಮಾಡಿದ ಮೇಲೆ ಅವುಗಳನ್ನು ಸ್ವಚ್ಛವಾಗಿಟ್ಟು ಸಾರ್ವಜನಿಕರ ಉಪಯೋಗಕ್ಕೆ ಮುಕ್ತ ಮಾಡುವುದು ನಗರಸಭೆ ಕೆಲಸ. ಆದರೆ, ನಗರಸಭೆ ಅಧಿಕಾರಿಗಳು ಇದಕ್ಕೂ ನಮಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಈ ಬಗ್ಗೆ ಗಮನ ಸೆಳೆದರೂ ಕೇವಲ ಕಸ ವಿಲೇವಾರಿ ಮಾಡಿ ಸುಮ್ಮನಾಗುತ್ತಾರೆ. ಸ್ವಲ್ಪ ದಿನದ ನಂತರ ಸಂಪರ್ಕ ರಸ್ತೆಗಳು ಮತ್ತೆ ಯಥಾಸ್ಥಿತಿಗೆ ಬರುತ್ತವೆ ಎಂದು ನಾಗರಿಕರಾದ ಅರುಣ್ ಕುಮಾರ್, ರೋಹಿತ್ ತಿಳಿಸುತ್ತಾರೆ.</p>.<p>ನಗರಸಭೆಯು ಒತ್ತುವರಿಯಾಗಿರುವ ಸಂಪರ್ಕ ರಸ್ತೆ ತೆರವುಗೊಳಿಸಿ ಸಾರ್ವಜನಿಕರಿಗೆ ಮುಕ್ತ ಮಾಡಬೇಕು. ಕಸ ಹಾಕದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ರಸ್ತೆಗಳ ಸ್ವಚ್ಛತೆಗೆ ಪ್ರತಿದಿನ ಆದ್ಯತೆ ನೀಡಬೇಕು. ಕಸ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.</p>.<p><strong>ಸ್ವಚ್ಛತೆಗೆ ನಗರಸಭೆ ಮುಂದಾಗಲಿ</strong></p><p>‘ಕುವೆಂಪು ನಗರದಲ್ಲಿ ಓಡಾಡುವ ಜನರು ಹೆಚ್ಚಾಗಿ ಸಂಪರ್ಕ ರಸ್ತೆ ಬಳಸುತ್ತಾರೆ. ಈ ರಸ್ತೆಗಳ ಸ್ವಚ್ಛತೆಗೆ ನಗರಸಭೆ ಆದ್ಯತೆ ನೀಡಬೇಕು. ಸಂಪರ್ಕ ರಸ್ತೆಗಳನ್ನು ಸರಿಪಡಿಸಿದರೆ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಓಡಾಡುವವರು ಈ ರಸ್ತೆಗಳನ್ನು ಬಳಸಿದರೆ ಅಲ್ಲಿ ಆಗುವ ಅಪಘಾತ ತಡೆಯಬಹುದು. ಸಂಪರ್ಕ ರಸ್ತೆಗಳು ಅವಶ್ಯಕವಾಗಿ ಬೇಕಾಗಿದೆ.’</p><p>– ಪ್ರದೀಪ್ ಕುಮಾರ್, ಸ್ಥಳೀಯ ನಿವಾಸಿ, ಚನ್ನಪಟ್ಟಣ </p><p><strong>ಬೀಗ ಹಾಕುವುದು ಸೂಕ್ತವಲ್ಲ </strong></p><p>‘ನಗರದ ದೂರದೃಷ್ಟಿ ಫಲವಾಗಿ ಸಂಪರ್ಕ ರಸ್ತೆಗಳು ನಿರ್ಮಾಣವಾಗಿವೆ. ಆದರೆ, ಈ ರಸ್ತೆಗಳ ಸಮರ್ಪಕ ಉಪಯೋಗ ಆಗದಿರುವುದು ನಿಜಕ್ಕೂ ದುರಂತ. ಇದಲ್ಲದೆ ಎರಡು ಹಾಗೂ ಮೂರನೇ ಅಡ್ಡ ರಸ್ತೆಯನ್ನು ಮುಚ್ಚಿ ಬೀಗ ಹಾಕಿರಿವುದು ಸೂಕ್ತವಲ್ಲ. ಈ ರಸ್ತೆಗಳನ್ನು ಸ್ವಚ್ಛ ಮಾಡಿ ಸಾರ್ವಜನಿಕರ ಉಪಯೋಗಕ್ಕೆ ಮುಕ್ತ ಮಾಡುವುದು ನಗರಸಭೆ ಕರ್ತವ್ಯ’</p><p>– ಜಿ.ರಾಘವೇಂದ್ರ, ಚನ್ನಪಟ್ಟಣ</p><p><strong>ಕಸ ತಡೆಯಲು ಮುಚ್ಚಲಾಗಿದೆ</strong></p><p>‘ಸಂಪರ್ಕ ರಸ್ತೆಗಳಲ್ಲಿ ಕಸ ಸುರಿಯುವುದು ಹೆಚ್ಚಾಗಿದ್ದ ಕಾರಣ ಅಲ್ಲಿ ಸಾರ್ವಜನಿಕ ಪ್ರಕಟಣೆ ಹಾಕಿ ಎರಡು ರಸ್ತೆ ಮುಚ್ಚಲಾಗಿದೆ. ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರೂ ಪ್ರಯೋಜನವಾಗಿರಲಿಲ್ಲ. ಹಾಗಾಗಿ ಕ್ರಮ ಕೈಗೊಳ್ಳಲಾಗಿದೆ. ಮುಂದೆ ಅವುಗಳನ್ನು ಸ್ವಚ್ಛ ಮಾಡಿ ಸಾರ್ವಜನಿಕರ ಓಡಾಟಕ್ಕೆ ಮುಕ್ತ ಮಾಡುತ್ತೇವೆ’.</p><p>– ವಾಸಿಲ್ ಆಲಿಖಾನ್, ನಗರಸಭೆ ಅಧ್ಯಕ್ಷ, ಚನ್ನಪಟ್ಟಣ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>