<p><strong>ರಾಮನಗರ</strong>: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ–275ರಲ್ಲಿ ಶೇ 5ರಿಂದ ಶೇ 10ರವರೆಗೆ ಟೋಲ್ ಹೆಚ್ಚಳ ಮಾಡಿದೆ. ಪರಿಷ್ಕೃತ ದರ ಮಂಗಳವಾರದಿಂದಲೇ (ಏಪ್ರಿಲ್ 1) ಜಾರಿಗೆ ಬಂದಿದೆ.</p>.<p>ಬೆಂಗಳೂರು ನಗರ ಜಿಲ್ಲೆಯ ಕಣಿಮಿಣಿಕೆ ಹಾಗೂ ರಾಮನಗರ ಜಿಲ್ಲೆಯ ಶೇಷಗಿರಿಹಳ್ಳಿ ಟೋಲ್ ಪ್ಲಾಜಾದಿಂದ ನಿಡಘಟ್ಟವರೆಗೆ ಶೇ 9ರಷ್ಟು ಹಾಗೂ ಮಂಡ್ಯ ಜಿಲ್ಲೆಯ ನಿಡಘಟ್ಟದಿಂದ ಶ್ರೀರಂಗಪಟ್ಟಣದ ಗಣಂಗೂರು ಟೋಲ್ ಪ್ಲಾಜಾವರೆಗೆ (ಮೈಸೂರುವರೆಗೆ) ಶೇ 5ರಷ್ಟು ಪರಿಷ್ಕರಿಸಲಾಗಿದೆ.</p>.<p>ಕಾರು, ವ್ಯಾನ್, ಜೀಪು, ಲಘು ವಾಹನ, ಮಿನಿ ಬಸ್, ಟ್ರಕ್, ಬಸ್, 2 ಆ್ಯಕ್ಸಲ್ ವಾಹನ, ಮೂರು ಆ್ಯಕ್ಸಲ್ ವಾಣಿಜ್ಯ ವಾಹನ, ಕಟ್ಟಡ ನಿರ್ಮಾಣ ಭಾರಿ ವಾಹನ (4–6 ಆಕ್ಸಲ್), 7 ಅಥವಾ ಅದಕ್ಕಿಂತ ಹೆಚ್ಚಿನ ಆ್ಯಕ್ಸಲ್ ವಾಹನದ ಟೋಲ್ ಪರಿಷ್ಕರಣೆಯಾಗಿದೆ.</p>.<p>ತಿಂಗಳ 50 ಏಕಮುಖ ಸಂಚಾರ ಪಾಸ್ ದರವೂ ಏರಿಕೆಯಾಗಿದೆ. ಕಾರು, ವ್ಯಾನ್ ಹಾಗೂ ಜೀಪುಗಳ ಸ್ಥಳೀಯ ಮಾಸಿಕ ಬಸ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.</p>.<p>ಹಣ ಪಾವತಿಸಿದ ಸಮಯದಿಂದ ಎಲ್ಲಾ ಮಾದರಿಯ ವಾಹನಗಳು 24 ತಾಸಿನೊಳಗೆ ಮರಳಿ ಸಂಚಾರ ಮಾಡಿದರೆ ಶೇ 25ರಷ್ಟು ಹಾಗೂ ಹಣ ಪಾವತಿಸಿದ ಸಮಯದಿಂದ ಒಂದು ತಿಂಗಳಲ್ಲಿ 50 ಸಲ ಪ್ರಯಾಣಿಸಿದಲ್ಲಿ ಶೇ 33ರಷ್ಟು ರಿಯಾಯಿತಿ ಸಿಗಲಿದೆ ಎಂದು ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.</p>.<p>2023ರ ಏಪ್ರಿಲ್ 1ರಿಂದ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಆರಂಭಿಸಿದ್ದ ಪ್ರಾಧಿಕಾರ, ಅದಾದ ಎರಡೇ ತಿಂಗಳಲ್ಲಿ (2023 ಜೂನ್ 1) ಏಕಾಏಕಿಯಾಗಿ ಶೇ 22ರಷ್ಟು ಹೆಚ್ಚಿಸಿತ್ತು. ಈ ಕುರಿತು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಹೆಚ್ಚಳ ನಿರ್ಧಾರ ಹಿಂದಕ್ಕೆ ಪಡೆದಿತ್ತು. ನಂತರ ಪ್ರತಿ ವರ್ಷ ಏಪ್ರಿಲ್ 1ರಿಂದ ವಾರ್ಷಿಕ ಶೇ 5ರಷ್ಟು ಟೋಲ್ ಹೆಚ್ಚಳ ಮಾಡುವುದಾಗಿ ಹೇಳಿತ್ತು.</p>.<p>ಬೆಂಗಳೂರು ನಗರ ಜಿಲ್ಲೆಯ ಕುಂಬಳಗೋಡಿನಿಂದ ಆರಂಭವಾಗುವ 118 ಕಿ.ಮೀ. ಉದ್ದದ ಹೆದ್ದಾರಿಯು ರಾಮನಗರ ಜಿಲ್ಲೆಯಲ್ಲಿ 55 ಕಿ.ಮೀ., ಮಂಡ್ಯದಲ್ಲಿ 58 ಕಿ.ಮೀ. ಹಾಗೂ ಮೈಸೂರು ಜಿಲ್ಲೆಯಲ್ಲಿ 5 ಕಿ.ಮೀ. ವ್ಯಾಪ್ತಿ ಹೊಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ</strong>: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ–275ರಲ್ಲಿ ಶೇ 5ರಿಂದ ಶೇ 10ರವರೆಗೆ ಟೋಲ್ ಹೆಚ್ಚಳ ಮಾಡಿದೆ. ಪರಿಷ್ಕೃತ ದರ ಮಂಗಳವಾರದಿಂದಲೇ (ಏಪ್ರಿಲ್ 1) ಜಾರಿಗೆ ಬಂದಿದೆ.</p>.<p>ಬೆಂಗಳೂರು ನಗರ ಜಿಲ್ಲೆಯ ಕಣಿಮಿಣಿಕೆ ಹಾಗೂ ರಾಮನಗರ ಜಿಲ್ಲೆಯ ಶೇಷಗಿರಿಹಳ್ಳಿ ಟೋಲ್ ಪ್ಲಾಜಾದಿಂದ ನಿಡಘಟ್ಟವರೆಗೆ ಶೇ 9ರಷ್ಟು ಹಾಗೂ ಮಂಡ್ಯ ಜಿಲ್ಲೆಯ ನಿಡಘಟ್ಟದಿಂದ ಶ್ರೀರಂಗಪಟ್ಟಣದ ಗಣಂಗೂರು ಟೋಲ್ ಪ್ಲಾಜಾವರೆಗೆ (ಮೈಸೂರುವರೆಗೆ) ಶೇ 5ರಷ್ಟು ಪರಿಷ್ಕರಿಸಲಾಗಿದೆ.</p>.<p>ಕಾರು, ವ್ಯಾನ್, ಜೀಪು, ಲಘು ವಾಹನ, ಮಿನಿ ಬಸ್, ಟ್ರಕ್, ಬಸ್, 2 ಆ್ಯಕ್ಸಲ್ ವಾಹನ, ಮೂರು ಆ್ಯಕ್ಸಲ್ ವಾಣಿಜ್ಯ ವಾಹನ, ಕಟ್ಟಡ ನಿರ್ಮಾಣ ಭಾರಿ ವಾಹನ (4–6 ಆಕ್ಸಲ್), 7 ಅಥವಾ ಅದಕ್ಕಿಂತ ಹೆಚ್ಚಿನ ಆ್ಯಕ್ಸಲ್ ವಾಹನದ ಟೋಲ್ ಪರಿಷ್ಕರಣೆಯಾಗಿದೆ.</p>.<p>ತಿಂಗಳ 50 ಏಕಮುಖ ಸಂಚಾರ ಪಾಸ್ ದರವೂ ಏರಿಕೆಯಾಗಿದೆ. ಕಾರು, ವ್ಯಾನ್ ಹಾಗೂ ಜೀಪುಗಳ ಸ್ಥಳೀಯ ಮಾಸಿಕ ಬಸ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.</p>.<p>ಹಣ ಪಾವತಿಸಿದ ಸಮಯದಿಂದ ಎಲ್ಲಾ ಮಾದರಿಯ ವಾಹನಗಳು 24 ತಾಸಿನೊಳಗೆ ಮರಳಿ ಸಂಚಾರ ಮಾಡಿದರೆ ಶೇ 25ರಷ್ಟು ಹಾಗೂ ಹಣ ಪಾವತಿಸಿದ ಸಮಯದಿಂದ ಒಂದು ತಿಂಗಳಲ್ಲಿ 50 ಸಲ ಪ್ರಯಾಣಿಸಿದಲ್ಲಿ ಶೇ 33ರಷ್ಟು ರಿಯಾಯಿತಿ ಸಿಗಲಿದೆ ಎಂದು ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.</p>.<p>2023ರ ಏಪ್ರಿಲ್ 1ರಿಂದ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಆರಂಭಿಸಿದ್ದ ಪ್ರಾಧಿಕಾರ, ಅದಾದ ಎರಡೇ ತಿಂಗಳಲ್ಲಿ (2023 ಜೂನ್ 1) ಏಕಾಏಕಿಯಾಗಿ ಶೇ 22ರಷ್ಟು ಹೆಚ್ಚಿಸಿತ್ತು. ಈ ಕುರಿತು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಹೆಚ್ಚಳ ನಿರ್ಧಾರ ಹಿಂದಕ್ಕೆ ಪಡೆದಿತ್ತು. ನಂತರ ಪ್ರತಿ ವರ್ಷ ಏಪ್ರಿಲ್ 1ರಿಂದ ವಾರ್ಷಿಕ ಶೇ 5ರಷ್ಟು ಟೋಲ್ ಹೆಚ್ಚಳ ಮಾಡುವುದಾಗಿ ಹೇಳಿತ್ತು.</p>.<p>ಬೆಂಗಳೂರು ನಗರ ಜಿಲ್ಲೆಯ ಕುಂಬಳಗೋಡಿನಿಂದ ಆರಂಭವಾಗುವ 118 ಕಿ.ಮೀ. ಉದ್ದದ ಹೆದ್ದಾರಿಯು ರಾಮನಗರ ಜಿಲ್ಲೆಯಲ್ಲಿ 55 ಕಿ.ಮೀ., ಮಂಡ್ಯದಲ್ಲಿ 58 ಕಿ.ಮೀ. ಹಾಗೂ ಮೈಸೂರು ಜಿಲ್ಲೆಯಲ್ಲಿ 5 ಕಿ.ಮೀ. ವ್ಯಾಪ್ತಿ ಹೊಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>