‘ಯಾರಿಗೆ ರಾಜಕೀಯ ಅಭದ್ರತೆ ಹಾಗೂ ಸೋಲಿನ ಭೀತಿ ಕಾಡುತ್ತದೊ ಅವರು ಮಾತ್ರ ಜನರಿಗೆ ಆಮಿಷವೊಡ್ಡುತ್ತಾರೆ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ಮಾತಿನಂತೆ, ಎಲ್ಲಿಂದಲೋ ಬಂದಿರುವ ದುಡ್ಡನ್ನು ಚೆಲ್ಲುತ್ತಿದ್ದಾರೆ. ಆದರೆ, ಜನ ಬುದ್ದಿವಂತರಾಗಿದ್ದಾರೆ. ಆಮಿಷಗಳನ್ನು ತಿರಸ್ಕರಿಸಿ ತಮ್ಮ ಇಚ್ಛೆ ಏನೆಂದು ಮತದಾನದ ದಿನದಂದು ತೋರಿಸುತ್ತಾರೆ. ಮುಂದಿನ ತಲೆಮಾರು ಹೇಗಿರಬೇಕೆಂಬುದನ್ನು ವಿವೇಚನೆ ಬಳಸಿ ನಿರ್ಧರಿಸಲಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.