ನೀರು ಬಿಟ್ಟಿದ್ದು ಬೆಂಗಳೂರಿಗೆ: ತಮಿಳುನಾಡಿಗೆ ನೀರು ಹರಿಸಲಾಗಿದೆ ಎಂಬ ಆರೋಪ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಜಯಂತ್, ‘ಬೆಂಗಳೂರಿಗೆ ಕುಡಿಯುವುದಕ್ಕಾಗಿ ಕೆಆರ್ಎಸ್ನಿಂದ ಎರಡು ದಿನ ನೀರು ಬಿಡುಗಡೆ ಮಾಡಿದ್ದೇವೆಯೇ ಹೊರತು, ತಮಿಳುನಾಡಿಗಲ್ಲ. ಬೆಂಗಳೂರಿಗೆ ಪೂರೈಸುವ ಮಳವಳ್ಳಿ ತಾಲ್ಲೂಕಿನ ಶಿವಾ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ತೀರಾ ತಗ್ಗಿತ್ತು. ನೀರಿನ ಪ್ರಮಾಣ ಹೆಚ್ಚಿಸುವುದಕ್ಕಾಗಿ ನಿತ್ಯ ಹರಿಸುವ 1,000 ಕ್ಯುಸೆಕ್ಗಿಂತ ಹೆಚ್ಚು ಹರಿಸುವಂತೆ ಬೆಂಗಳೂರು ಜಲಮಂಡಳಿ ಅಧಿಕಾರಿಗಳು ಮನವಿ ಮಾಡಿದ್ದರು’ ಎಂದರು.