ರತಿ ಮನ್ಮಥರ ಬೈಕ್ ಸವಾರಿ ಅಲಂಕಾರ
ಹರಕೆ ಹೊತ್ತರೆ ಮದುವೆಯಾಗುತ್ತದೆ!
ರತಿ ಮನ್ಮಥರಿಗೆ ಹರಕೆ ಹೊತ್ತು ಮಡಿಲಕ್ಕಿ ಕಟ್ಟಿದರೆ ಮದುವೆಯಾಗುತ್ತದೆ, ಮಕ್ಕಳಾಗದವರಿಗೆ ಮಕ್ಕಳಾಗುತ್ತವೆ ಎನ್ನುವುದು ಇಲ್ಲಿಯ ವಾಡಿಕೆಯಾಗಿದೆ. ರತಿ ಮನ್ಮಥರ ಪ್ರತಿಷ್ಠಾಪನೆಯಾದ ನಂತರ ಕೆಲವರು ಹರಕೆ ಹೊರಲು ಬರುತ್ತಾರೆ. ಮಂಗಳವಾರ, ಶುಕ್ರವಾರ ಮಡಿಲಕ್ಕಿ ಕಟ್ಟುತ್ತಾರೆ. ಅನೇಕ ಮಂದಿಗೆ ಅವರ ನಂಬಿಕೆ ನಿಜವಾಗಿದೆ. ಅಂತವರು ಮುಂದಿನ ವರ್ಷ ಹರಕೆ ತೀರಿಸಲು ಬರುತ್ತಾರೆ. ರತಿಮನ್ಮಥರಿಗೆ ಅಕ್ಕಿ, ಬಳೆ, ಸೀರೆ, ರವಿಕೆ, ಪಂಚೆ, ಶಲ್ಯ ಅರ್ಪಿಸಿ, ಪ್ರಸಾದ ತಯಾರಿಸಿ ಭಕ್ತರಿಗೆ ಪ್ರಸಾದ ಹಂಚುತ್ತಾರೆ ಎಂಬುದು ಅರ್ಚಕ ಗಂಗಾಧರಯ್ಯ ಅವರ ಮಾತಾಗಿದೆ.

ನಾಡಿನಲ್ಲಿ ಉತ್ತಮ ಮಳೆ ಬೆಳೆಯಾಗಿ ನಾಡು ಸುಭಿಕ್ಷವಾಗಿರಲಿ. ಮಾನವ ಕುಲ, ಪ್ರಾಣಿ ಸಂಕುಲಕ್ಕೆ ಒಳ್ಳೆಯದಾಗಲಿ. ಎಲ್ಲರೂ ಸುಖ ಸಂತೋಷದಿಂದ ಇರಲಿ ಎನ್ನುವ ಉದ್ದೇಶದಿಂದ ಕಾಮನ ಹಬ್ಬ ಆಚರಿಸಲಾಗುತ್ತದೆ. ಇಲ್ಲಿ ಸಂಪ್ರದಾಯದಂತೆ ಕಾಮನಹಬ್ಬ ಆಚರಿಸಲಾಗುತ್ತಿದ್ದು, ಮುಂದಿನ ಪೀಳಿಗೆ ಇದನ್ನು ಮುಂದುವರೆಸಬೇಕು.
–ಬಿ. ಗಂಗಾಧರಯ್ಯ, ಅರ್ಚಕ, ಕಾಮನಗುಡಿ, ಚನ್ನಪಟ್ಟಣ.ರತಿ ಮನ್ಮಥರ ಮದುವೆ ಶಾಸ್ತ್ರದ ಅಲಂಕಾರ

ನಮ್ಮ ಹಿರಿಯರು ಸಂಪ್ರದಾಯದಂತೆ ಆಚರಿಸಿಕೊಂಡು ಬರುತ್ತಿರುವ ಕಾಮನಹಬ್ಬವನ್ನು ಮುಂದುವರೆಸಿಕೊಂಡು ಹೋಗುವುದು ನಮ್ಮ ಕರ್ತವ್ಯ. ವಿವಿಧ ವಿಶೇಷತೆಗಳೊಂದಿಗೆ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಮುಂದಿನ ವರ್ಷಗಳಲ್ಲಿ ಈ ಹಬ್ಬಕ್ಕೆ ಮತ್ತಷ್ಟು ಮೆರಗು ತರಲಾಗುವುದು.
–ರುದ್ರೇಶ್, ಕಾಮನಹಬ್ಬ ಸಮಿತಿಯ ಸಂಚಾಲಕ, ಚನ್ನಪಟ್ಟಣ.
ಕಾಮನಹಬ್ಬ ಆಚರಣೆಗೆ ಮಂಡೀಪೇಟೆ ಹಾಗೂ ಗರುಡಗಂಬ ಬೀದಿಯ ನಿವಾಸಿಗಳು ಸಹಕಾರ ನೀಡುತ್ತಿದ್ದಾರೆ. ಇದರ ಜತೆಗೆ ವ್ಯಾಪಾರಿಗಳು, ಯುವ ಸಮೂಹದ ಪ್ರೋತ್ಸಾಹ ದೊರೆಯುತ್ತಿದೆ. ಸ್ವಇಚ್ಛೆಯಿಂದ ಹಣ ಸಹಾಯ ಮಾಡುತ್ತಾರೆ. ಅನೇಕರು ಕೈಜೋಡಿಸಿರುವುದರಿಂದ ಹಬ್ಬವನ್ನು ವಿಜೃಂಭಣೆಯಿಂದ ಮಾಡಲಾಗುತ್ತಿದೆ.
–ದೇವರಾಜು, ಕಾಮನಹಬ್ಬ ಸಮಿತಿ, ಚನ್ನಪಟ್ಟಣ.ರತಿ ಮನ್ಮಥರ ದಿಬ್ಬಣದ ಮೆರವಣಿಗೆ ಅಲಂಕಾರ