ಬಿಡದಿ: ರೋಟರಿ ಬಿಡದಿ ಸೆಂಟ್ರಲ್ ವತಿಯಿಂದ ಬುಧವಾರ ಅಬ್ಬನಕುಪ್ಪೆ, ಇಟ್ಟಮಡು, ಬಾನಂದೂರು, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗಳಲ್ಲಿ ಮಕ್ಕಳಿಗೆ ಕೈತೊಳೆಯುವ ಕಿಟ್ ವಿತರಿಸಲಾಯಿತು.
ಪ್ರಾಥಮಿಕ ಹಂತದಲ್ಲಿಯೇ ಸ್ವಚ್ಛತೆಯ ಬಗ್ಗೆ ಹೆಚ್ಚು ಮಹತ್ವ ನೀಡಬೇಕೆಂಬ ಜಾಗೃತಿ ಮೂಡಿಸಲಾಯಿತು. ಶಾಲಾ ಹಂತದಲ್ಲಿ ಮಕ್ಕಳು ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಆರೋಗ್ಯವಂತರಾಗಿ ಶಿಕ್ಷಣ ಕಲಿಯಬೇಕು. ಮಣ್ಣು, ಕೊಳಕು ಮತ್ತು ಸೂಕ್ಷ್ಮಾಣುಜೀವಿಗಳನ್ನು ತೆಗೆದುಹಾಕುವ ಉದ್ದೇಶದಿಂದ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಕೈಗಳನ್ನು ಶುಚಿತ್ವವಾಗಿ ಇಟ್ಟುಕೊಳ್ಳದಿದ್ದರೆ ಕಾಯಿಲೆಯ ಸೋಂಕಿಗೆ ಒಳಗಾಗಬಹುದು ಎಂದು ರೋಟರಿ ಸೆಂಟ್ರಲ್ ನ ಅಧ್ಯಕ್ಷ ಚಂದ್ರಶೇಖರ್ ಎಂ, ತಿಳಿಸಿದರು.
ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಹ್ಯಾಂಡ್ ಗ್ಲೌಸ್ ಕಿಟ್, ಹ್ಯಾಂಡ್ ವಾಷ್ ಲಿಕ್ವಿಡ್ ಅನ್ನು ವಿತರಿಸಲಾಯಿತು. ಕಾರ್ಯದರ್ಶಿ ಕೃಷ್ಣ.ಜಿ. ಬಿ.ಎನ್ ರೇಣುಕಪ್ಪ, ಬಿ.ಎನ್. ರಮೇಶ್ ಕುಮಾರ್, ಬಿ.ಆರ್ ಆನಂದ್, ಸದಸ್ಯರು ಮತ್ತು ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.