ಕಾಂಗ್ರೆಸ್ನಿಂದ ಹಲವರು ಬಿಜೆಪಿ ಸೇರ್ಪಡೆ ಆಗಲಿದ್ದಾರೆ ಎಂಬ ಯೋಗೇಶ್ವರ್ ಹೇಳಿಕೆ ಕುರಿತು ಅವರು ಬಿಡದಿಯಲ್ಲಿ ಗುರುವಾರ ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಿದರು. ‘15ರ ನಂತರ ಚಿತ್ರಣ ಬದಲಾಗುತ್ತದೆ ಎಂದು ಅವರೇ ಹೇಳಿದ್ದಾರೆ. ನಾವೂ ಕೂಡ ಕಾಯುತ್ತಿದ್ದೇವೆ. ಮುಖ್ಯಮಂತ್ರಿ ಬದಲಾವಣೆ ಆಗುತ್ತಾರ? ಯಾವುದಾದರೂ ಸಿ.ಡಿ. ಬಿಡುಗಡೆ ಮಾಡುತ್ತಾರ? ಅಥವಾ ಯಾವುದಾದರೂ ಪರೀಕ್ಷೆ ಬರೆಯುತ್ತಾರ ಎಂದು ಅವರೇ ಹೇಳಬೇಕು’ಎಂದರು.