ಮರದ ಕೊಂಬೆಗಳಿಗೆ ಬೆಂಕಿ ಇಟ್ಟು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಷ್ಟ್ರೀಯ ಹೆದ್ದಾರಿ 275 ಕಾಮಗಾರಿ ಭರದಿಂದ ಸಾಗುತ್ತಿರುವುದು ಸ್ವಾಗತಾರ್ಹ. ಆದರೆ, ಇಲ್ಲಿರುವ ಪಟ್ಲು ವಂದಾರಗುಪ್ಪೆ ಸಂಪರ್ಕ ರಸ್ತೆ ಮುಚ್ಚಲಾಗುತ್ತಿದೆ. ಈ ರಸ್ತೆ ಗ್ರಾಮೀಣ ಭಾಗದ ದೇವರಹೊಸಹಳ್ಳಿ, ಕೋಮನಹಳ್ಳಿ, ಚಿಕ್ಕೇನಹಳ್ಳಿ, ನಾಗವಾರ, ಬೇವೂರು, ಉಜ್ಜಿನಿ, ಮಾಕಳಿ, ಹುಲಿಯೂರು ದುರ್ಗ, ಕುಣಿಗಲ್ ಸೇರಿದಂತೆ ಸುಮಾರು 50-60 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಅದರಲ್ಲೂ ವಿಶೇಷವಾಗಿ ರೈತರು, ಉದ್ಯೋಗಿಗಳು, ಕೂಲಿಕಾರ್ಮಿಕರು, ವಿದ್ಯಾರ್ಥಿಗಳಿಗೆ ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಇದನ್ನು ಮುಚ್ಚಲು ಉದ್ದೇಶಿಸಿರುವುದು ತರವಲ್ಲ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.