<p><strong>ಚನ್ನಪಟ್ಟಣ: </strong>ರಾಷ್ಟ್ರೀಯ ಹೆದ್ದಾರಿ 275 ಪಟ್ಲು ವಂದಾರಗುಪ್ಪೆ ಬಳಿ ಸಂಪರ್ಕ ರಸ್ತೆ ಮುಚ್ಚದೆ ಅಂಡರ್ ಪಾಸ್ ನಿರ್ಮಿಸುವಂತೆ ಒತ್ತಾಯಿಸಿ ದೇವರಹೊಸಹಳ್ಳಿ, ರಾಂಪುರ, ಕೋಮನಹಳ್ಳಿ, ಪಟ್ಲು ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದರು.</p>.<p>ಮರದ ಕೊಂಬೆಗಳಿಗೆ ಬೆಂಕಿ ಇಟ್ಟು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಷ್ಟ್ರೀಯ ಹೆದ್ದಾರಿ 275 ಕಾಮಗಾರಿ ಭರದಿಂದ ಸಾಗುತ್ತಿರುವುದು ಸ್ವಾಗತಾರ್ಹ. ಆದರೆ, ಇಲ್ಲಿರುವ ಪಟ್ಲು ವಂದಾರಗುಪ್ಪೆ ಸಂಪರ್ಕ ರಸ್ತೆ ಮುಚ್ಚಲಾಗುತ್ತಿದೆ. ಈ ರಸ್ತೆ ಗ್ರಾಮೀಣ ಭಾಗದ ದೇವರಹೊಸಹಳ್ಳಿ, ಕೋಮನಹಳ್ಳಿ, ಚಿಕ್ಕೇನಹಳ್ಳಿ, ನಾಗವಾರ, ಬೇವೂರು, ಉಜ್ಜಿನಿ, ಮಾಕಳಿ, ಹುಲಿಯೂರು ದುರ್ಗ, ಕುಣಿಗಲ್ ಸೇರಿದಂತೆ ಸುಮಾರು 50-60 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಅದರಲ್ಲೂ ವಿಶೇಷವಾಗಿ ರೈತರು, ಉದ್ಯೋಗಿಗಳು, ಕೂಲಿಕಾರ್ಮಿಕರು, ವಿದ್ಯಾರ್ಥಿಗಳಿಗೆ ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಇದನ್ನು ಮುಚ್ಚಲು ಉದ್ದೇಶಿಸಿರುವುದು ತರವಲ್ಲ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.</p>.<p>ಈ ರಸ್ತೆ ಮುಚ್ಚಿದರೆ ವಿನಾಕಾರಣ ಈ ಭಾಗದ ಜನರು 12ರಿಂದ 15ಕಿ.ಮೀ. ಬಳಸಿಕೊಂಡು ಚನ್ನಪಟ್ಟಣ ರಾಮನಗರ ತಲುಪಬೇಕಾಗಿದೆ. ಇದರಿಂದ ಅನಾನುಕೂಲವಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಗ್ರಾಮೀಣ ಜನರ ಹಿತದೃಷ್ಟಿಯಿಂದ ಈ ರಸ್ತೆ ಮುಚ್ಚಬಾರದು ಎಂದು ಪ್ರತಿಭಟನಾಕಾರರು ಅಗ್ರಹಿಸಿದರು.</p>.<p>ಜೆಡಿಎಸ್ ಅಧ್ಯಕ್ಷ ರಾಂಪುರ ರಾಜಣ್ಣ, ಮುಖಂಡರಾದ ಜಯರಾಜು, ದೇವರಾಜು, ಪ್ರತಾಪ್, ಶಿವಲಿಂಗಯ್ಯ, ರಾಮಸಂಜೀವಯ್ಯ, ಎಲ್.ಚಿಕ್ಕಯ್ಯ, ರಾಮಸಂಜೀವಯ್ಯ, ಸಿದ್ದಲಿಂಗಯ್ಯ, ರಾಜೇಂದ್ರ, ಧನಂಜಯ, ನಾರಾಯಣ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಪಟ್ಟಣ: </strong>ರಾಷ್ಟ್ರೀಯ ಹೆದ್ದಾರಿ 275 ಪಟ್ಲು ವಂದಾರಗುಪ್ಪೆ ಬಳಿ ಸಂಪರ್ಕ ರಸ್ತೆ ಮುಚ್ಚದೆ ಅಂಡರ್ ಪಾಸ್ ನಿರ್ಮಿಸುವಂತೆ ಒತ್ತಾಯಿಸಿ ದೇವರಹೊಸಹಳ್ಳಿ, ರಾಂಪುರ, ಕೋಮನಹಳ್ಳಿ, ಪಟ್ಲು ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದರು.</p>.<p>ಮರದ ಕೊಂಬೆಗಳಿಗೆ ಬೆಂಕಿ ಇಟ್ಟು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಷ್ಟ್ರೀಯ ಹೆದ್ದಾರಿ 275 ಕಾಮಗಾರಿ ಭರದಿಂದ ಸಾಗುತ್ತಿರುವುದು ಸ್ವಾಗತಾರ್ಹ. ಆದರೆ, ಇಲ್ಲಿರುವ ಪಟ್ಲು ವಂದಾರಗುಪ್ಪೆ ಸಂಪರ್ಕ ರಸ್ತೆ ಮುಚ್ಚಲಾಗುತ್ತಿದೆ. ಈ ರಸ್ತೆ ಗ್ರಾಮೀಣ ಭಾಗದ ದೇವರಹೊಸಹಳ್ಳಿ, ಕೋಮನಹಳ್ಳಿ, ಚಿಕ್ಕೇನಹಳ್ಳಿ, ನಾಗವಾರ, ಬೇವೂರು, ಉಜ್ಜಿನಿ, ಮಾಕಳಿ, ಹುಲಿಯೂರು ದುರ್ಗ, ಕುಣಿಗಲ್ ಸೇರಿದಂತೆ ಸುಮಾರು 50-60 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಅದರಲ್ಲೂ ವಿಶೇಷವಾಗಿ ರೈತರು, ಉದ್ಯೋಗಿಗಳು, ಕೂಲಿಕಾರ್ಮಿಕರು, ವಿದ್ಯಾರ್ಥಿಗಳಿಗೆ ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಇದನ್ನು ಮುಚ್ಚಲು ಉದ್ದೇಶಿಸಿರುವುದು ತರವಲ್ಲ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.</p>.<p>ಈ ರಸ್ತೆ ಮುಚ್ಚಿದರೆ ವಿನಾಕಾರಣ ಈ ಭಾಗದ ಜನರು 12ರಿಂದ 15ಕಿ.ಮೀ. ಬಳಸಿಕೊಂಡು ಚನ್ನಪಟ್ಟಣ ರಾಮನಗರ ತಲುಪಬೇಕಾಗಿದೆ. ಇದರಿಂದ ಅನಾನುಕೂಲವಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಗ್ರಾಮೀಣ ಜನರ ಹಿತದೃಷ್ಟಿಯಿಂದ ಈ ರಸ್ತೆ ಮುಚ್ಚಬಾರದು ಎಂದು ಪ್ರತಿಭಟನಾಕಾರರು ಅಗ್ರಹಿಸಿದರು.</p>.<p>ಜೆಡಿಎಸ್ ಅಧ್ಯಕ್ಷ ರಾಂಪುರ ರಾಜಣ್ಣ, ಮುಖಂಡರಾದ ಜಯರಾಜು, ದೇವರಾಜು, ಪ್ರತಾಪ್, ಶಿವಲಿಂಗಯ್ಯ, ರಾಮಸಂಜೀವಯ್ಯ, ಎಲ್.ಚಿಕ್ಕಯ್ಯ, ರಾಮಸಂಜೀವಯ್ಯ, ಸಿದ್ದಲಿಂಗಯ್ಯ, ರಾಜೇಂದ್ರ, ಧನಂಜಯ, ನಾರಾಯಣ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>