ಬಿಡದಿ: ಗಾಣಿಗರ ರುದ್ರಭೂಮಿಯನ್ನು ಗುರುವಾರದ ಮುಂಜಾನೆ ಯಾವುದೇ ಮಾಹಿತಿ ಇಲ್ಲದೆ ಸುಮಾರು 200 ವರ್ಷಗಳ ಇತಿಹಾಸವುಳ್ಳ ರುದ್ರಭೂಮಿಯನ್ನು ಏಕಾಏಕಿ ನೆಲಸಮ ಮಾಡಿದ್ದಾರೆ.
ಇದರಿಂದ ಆಕ್ರೋಶಗೊಂಡ ಗಾಣಿಗರ ಸಮುದಾಯದವರು ಕಾಮಗಾರಿ ನಡೆಸಿದ ಜೆಸಿಬಿಯನ್ನು ಹೊರಹಾಕಿದ್ದಾರೆ.ಶಾಸಕ ಎ.ಮಂಜುನಾಥ್, ಬಿಡದಿ ಪುರಸಭೆ ಅಧಿಕಾರಿಗಳು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದರು.
ಜನರ ಅಹವಾಲು ಸ್ವೀಕರಿಸಿ ಈ ನೆಲಸಮ ಮಾಡಿದ ಅಧಿಕಾರಿಗಳು ಹಾಗೂ ಜೆಸಿಬಿಯನ್ನು ಪತ್ತೆಹಚ್ಚಲು ಪೊಲೀಸರಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಸುಮಾರು 20 ಗುಂಟೆಯ ಜಮೀನು ಕಂದಾಯ ಅಧಿಕಾರಿಗಳ ಮಾಹಿತಿಯಲ್ಲಿ ಈ ಪ್ರದೇಶ ಹೈಟೆಕ್ ಬಸ್ ನಿಲ್ದಾಣ ಬಿಡದಿ ಎಂದು ನಮೂದಿಸಲಾಗಿದೆ ಎಂದು ಹೇಳಿರುತ್ತಾರೆ. ಕೂಡಲೇ ನಮ್ಮ ರುದ್ರಭೂಮಿಯನ್ನು ಹಿಂತಿರುಗಿಸಬೇಕು ಎಂದು ಸ್ಥಳೀಯ ಶಾಸಕರಿಗೆ ಮನವಿ ಮಾಡಿದರು.