ಜೋಗಿಪಾಳ್ಯದ ಬಳಿ ಗಿರಿಧರ್ ಕಸಬೆ ಎಂಬುವರು ಕ್ರಷರ್ ಆರಂಭಿಸುತ್ತಿದ್ದು, ಇದಕ್ಕೆ ಬೇಕಾದ ರಸ್ತೆ ನಿರ್ಮಾಣ ಕಾಮಗಾರಿ ನಡೆದಿದೆ. ಕ್ರಷರ್ ಆರಂಭ ವಿರೋಧಿಸಿ ಸೋಮವಾರ ಸ್ಥಳೀಯ ರೈತರು ಕ್ರಷರ್ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು. ಬುಧವಾರ ಕ್ರಷರ್ ಮಾಲೀಕರು ಸ್ಥಳಕ್ಕೆ ತೆರಳಿದ್ದು, ರಸ್ತೆ ಕಾಮಗಾರಿ ಮುಂದುವರಿಸಲು ತಮ್ಮ ಸಿಬ್ಬಂದಿಗೆ ಸೂಚಿಸಿದ್ದಾರೆ. ಈ ಸಂದರ್ಭ ಸ್ಥಳೀಯ ರೈತರು ಹಾಗೂ ಕ್ರಷರ್ ಮಾಲೀಕರ ನಡುವೆ ವಾಗ್ದಾದ ನಡೆದಿದೆ.