<p><strong>ರಾಮನಗರ: </strong>ಸೈಬರ್ ಕಳ್ಳರ ಗುಂಪೊಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಹೆಸರಿನಲ್ಲೇ ಜನರನ್ನು ವಂಚಿಸಿ ಹಣ ಸಂಗ್ರಹಿಸಿದೆ. ಈ ಬಗ್ಗೆ ಪೊಲೀಸರು ದೂರು ದಾಖಲಿಸಿದ್ದಾರೆ.</p>.<p>ರಾಮನಗರ ಎಸ್ಪಿ ಹೆಸರಿನಲ್ಲಿ ಈ ಫೇಸ್ಬುಕ್ ಪೇಜ್ ತೆರೆದಿದ್ದ ಈ ಖದೀಮರ ಗುಂಪು ಹಲವು ಮಂದಿಗೆ ಸ್ನೇಹದ ವಿನಂತಿ ಕಳುಹಿಸಿತ್ತು. ಬಳಿಕ ಅಂತಹ ವ್ಯಕ್ತಿಗಳಿಂದ ಹಣದ ಸಹಾಯವನ್ನೂ ಕೋರಿತ್ತು. ಇದಕ್ಕೆ ಹಲವರು ಸ್ಪಂದಿಸಿದ್ದು, ಗೂಗಲ್ ಪೇ-ಫೋನ್ ಪೇ ಮೊದಲಾದ ವಿಧಾನಗಳ ಮೂಲಕ ₹10-20 ಸಾವಿರ ಸಂದಾಯ ಮಾಡಿದ್ದಾರೆ. ರಾಮನಗರದ ವ್ಯಕ್ತಿ ಸೇರಿದಂತೆ ಅನೇಕರು ಈ ಮೋಸಕ್ಕೆ ಬಲಿಯಾಗಿ ಹಣ ಸಂದಾಯ ಸಹ ಮಾಡಿದ್ದಾರೆ ಎಂದು ತಿಳಿದುಬಂದಿದೆ.</p>.<p>ಫೇಸ್ಬುಕ್ ಪುಟದಲ್ಲಿ ರಾಮನಗರ ಎಸ್ಪಿ ಹೆಸರಿನಲ್ಲಿ ಐಪಿಎಸ್ ಅಧಿಕಾರಿ ಚಂದ್ರಗುಪ್ತ ಭಾವಚಿತ್ರವನ್ನು ಬಳಸಲಾಗಿದೆ. ಅವರು ಈ ಹಿಂದೆ ರಾಮನಗರ ಎಸ್ಪಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಈ ವಿಚಾರ ತಮ್ಮ ಗಮನಕ್ಕೆ ಬರುತ್ತಲೇ ಚಂದ್ರಗುಪ್ತ ರಾಮನಗರ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.</p>.<p><strong>ಬಿಹಾರಿಗಳ ಕೃತ್ಯ:</strong> ಈ ಸೈಬರ್ ಅಪರಾಧ ಚಟುವಟಿಕೆಗಳ ಹಿಂದೆ ಬಿಹಾರ ರಾಜ್ಯದ ಆರೋಪಿಗಳು ಕೆಲಸ ಮಾಡಿರುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಅವರ ಬಂಧನ ಮತ್ತು ಹೆಚ್ಚಿನ ತನಿಖೆಗಾಗಿ ರಾಮನಗರ ಪೊಲೀಸರ ತಂಡ ಶೀಘ್ರದಲ್ಲೇ ಬಿಹಾರಕ್ಕೆ ತೆರಳುವ ಸಾಧ್ಯತೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ: </strong>ಸೈಬರ್ ಕಳ್ಳರ ಗುಂಪೊಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಹೆಸರಿನಲ್ಲೇ ಜನರನ್ನು ವಂಚಿಸಿ ಹಣ ಸಂಗ್ರಹಿಸಿದೆ. ಈ ಬಗ್ಗೆ ಪೊಲೀಸರು ದೂರು ದಾಖಲಿಸಿದ್ದಾರೆ.</p>.<p>ರಾಮನಗರ ಎಸ್ಪಿ ಹೆಸರಿನಲ್ಲಿ ಈ ಫೇಸ್ಬುಕ್ ಪೇಜ್ ತೆರೆದಿದ್ದ ಈ ಖದೀಮರ ಗುಂಪು ಹಲವು ಮಂದಿಗೆ ಸ್ನೇಹದ ವಿನಂತಿ ಕಳುಹಿಸಿತ್ತು. ಬಳಿಕ ಅಂತಹ ವ್ಯಕ್ತಿಗಳಿಂದ ಹಣದ ಸಹಾಯವನ್ನೂ ಕೋರಿತ್ತು. ಇದಕ್ಕೆ ಹಲವರು ಸ್ಪಂದಿಸಿದ್ದು, ಗೂಗಲ್ ಪೇ-ಫೋನ್ ಪೇ ಮೊದಲಾದ ವಿಧಾನಗಳ ಮೂಲಕ ₹10-20 ಸಾವಿರ ಸಂದಾಯ ಮಾಡಿದ್ದಾರೆ. ರಾಮನಗರದ ವ್ಯಕ್ತಿ ಸೇರಿದಂತೆ ಅನೇಕರು ಈ ಮೋಸಕ್ಕೆ ಬಲಿಯಾಗಿ ಹಣ ಸಂದಾಯ ಸಹ ಮಾಡಿದ್ದಾರೆ ಎಂದು ತಿಳಿದುಬಂದಿದೆ.</p>.<p>ಫೇಸ್ಬುಕ್ ಪುಟದಲ್ಲಿ ರಾಮನಗರ ಎಸ್ಪಿ ಹೆಸರಿನಲ್ಲಿ ಐಪಿಎಸ್ ಅಧಿಕಾರಿ ಚಂದ್ರಗುಪ್ತ ಭಾವಚಿತ್ರವನ್ನು ಬಳಸಲಾಗಿದೆ. ಅವರು ಈ ಹಿಂದೆ ರಾಮನಗರ ಎಸ್ಪಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಈ ವಿಚಾರ ತಮ್ಮ ಗಮನಕ್ಕೆ ಬರುತ್ತಲೇ ಚಂದ್ರಗುಪ್ತ ರಾಮನಗರ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.</p>.<p><strong>ಬಿಹಾರಿಗಳ ಕೃತ್ಯ:</strong> ಈ ಸೈಬರ್ ಅಪರಾಧ ಚಟುವಟಿಕೆಗಳ ಹಿಂದೆ ಬಿಹಾರ ರಾಜ್ಯದ ಆರೋಪಿಗಳು ಕೆಲಸ ಮಾಡಿರುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಅವರ ಬಂಧನ ಮತ್ತು ಹೆಚ್ಚಿನ ತನಿಖೆಗಾಗಿ ರಾಮನಗರ ಪೊಲೀಸರ ತಂಡ ಶೀಘ್ರದಲ್ಲೇ ಬಿಹಾರಕ್ಕೆ ತೆರಳುವ ಸಾಧ್ಯತೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>