ರಾಮನಗರ ಎಸ್ಪಿ ಹೆಸರಿನಲ್ಲಿ ಈ ಫೇಸ್ಬುಕ್ ಪೇಜ್ ತೆರೆದಿದ್ದ ಈ ಖದೀಮರ ಗುಂಪು ಹಲವು ಮಂದಿಗೆ ಸ್ನೇಹದ ವಿನಂತಿ ಕಳುಹಿಸಿತ್ತು. ಬಳಿಕ ಅಂತಹ ವ್ಯಕ್ತಿಗಳಿಂದ ಹಣದ ಸಹಾಯವನ್ನೂ ಕೋರಿತ್ತು. ಇದಕ್ಕೆ ಹಲವರು ಸ್ಪಂದಿಸಿದ್ದು, ಗೂಗಲ್ ಪೇ-ಫೋನ್ ಪೇ ಮೊದಲಾದ ವಿಧಾನಗಳ ಮೂಲಕ ₹10-20 ಸಾವಿರ ಸಂದಾಯ ಮಾಡಿದ್ದಾರೆ. ರಾಮನಗರದ ವ್ಯಕ್ತಿ ಸೇರಿದಂತೆ ಅನೇಕರು ಈ ಮೋಸಕ್ಕೆ ಬಲಿಯಾಗಿ ಹಣ ಸಂದಾಯ ಸಹ ಮಾಡಿದ್ದಾರೆ ಎಂದು ತಿಳಿದುಬಂದಿದೆ.