<p><strong>ರಾಮನಗರ</strong>: ಅನೇಕ ವರ್ಷಗಳ ಹಿಂದೆ ಸರ್ಕಾರದಿಂದ ಆಗಿರುವ ಭೂ ಮಂಜೂರಾತಿಯ ಪೋಡಿ ಪ್ರಕರಣಗಳ ಬಾಕಿ ವಿಲೇವಾರಿಗಾಗಿ ಜಿಲ್ಲೆಯಲ್ಲಿ ದರಖಾಸ್ತು ಪೋಡಿ ಆಂದೋಲನಕ್ಕೆ ಚಾಲನೆ ನೀಡಲಾಗಿದೆ.</p>.<p>ಕಂದಾಯ ಇಲಾಖೆಯ ಭೂ ಮಾಪನ ಮತ್ತು ದಾಖಲೆಗಳ ಇಲಾಖೆಯ ಈ ವಿಶೇಷ ಕ್ರಮದಿಂದಾಗಿ ಭೂ ಮಂಜೂರಿದಾರರು ಪೋಡಿಗಾಗಿ ಅಲೆಯುವುದು ತಪ್ಪಲಿದೆ.</p>.<p>ರೋವರ್, ಟ್ಯಾಬ್ ಹಾಗೂ ಆರ್ಥೋರೆಕ್ಟಿಫೈಡ್ ರೆಡಾರ್ ಇಮೇಜ್ (ಒಆರ್ಐ) ಆಧಾರಿತ ಸರ್ವೇ ಕಾರ್ಯದಿಂದಾಗಿ ವರ್ಷಗಳಿಂದ ಬಾಕಿ ಇರುವ ಪೋಡಿ ಪ್ರಕರಣಗಳಿಗೆ ಶೀಘ್ರ ಮುಕ್ತಿ ಸಿಗಲಿದೆ. </p>.<p>ರಾಜ್ಯದಲ್ಲಿ ಮೊದಲ ಬಾರಿಗೆ ರಾಮನಗರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಈ ಆಂದೋಲನ ನಡೆಯುತ್ತಿದ್ದು, ಯಶಸ್ವಿಯಾದರೆ ಮುಂದೆ ರಾಜ್ಯದಾದ್ಯಂತ ವಿಸ್ತರಿಸುವ ಆಲೋಚನೆ ಇಲಾಖೆಗಿದೆ. </p>.<p>‘ಪೋಡಿ ಅರ್ಜಿಗಳ ವಿಲೇವಾರಿ ರಾಜ್ಯದಾದ್ಯಂತ ಬಾಕಿ ಇದೆ. ಇವುಗಳನ್ನು ಶೀಘ್ರ ವಿಲೇವಾರಿ ಮಾಡಿ ಜನರಿಗಾಗುತ್ತಿರುವ ತೊಂದರೆ ನಿವಾರಿಸಬೇಕು ಎಂದು ಜಿಲ್ಲೆಗೆ ಇತ್ತೀಚೆಗೆ ಭೇಟಿ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಸಂಸದ ಡಿ.ಕೆ. ಸುರೇಶ್ ಸಭೆಯಲ್ಲಿ ಸೂಚಿಸಿದ್ದರು. ಆ ಮೇರೆಗೆ, ಇಲಾಖೆಯು ಜಿಲ್ಲೆಯಲ್ಲಿ ದರಖಾಸ್ತು ಪೋಡಿ ಆಂದೋಲನವನ್ನು ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಾರದ ಹಿಂದೆ ಕೈಗೆತ್ತಿಕೊಂಡಿದೆ’ ಎಂದು ಜಿಲ್ಲಾ ಭೂ ಮಾಪನ ಮತ್ತು ಭೂ ದಾಖಲೆಗಳ ಇಲಾಖೆಯ ಉಪ ನಿರ್ದೇಶಕ ಬಿ.ಆರ್. ಹನುಮೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>ಅರ್ಜಿ ಕೊಡದಿದ್ದರೂ ಕೆಲಸವಾಗಲಿದೆ:</strong> ‘ಮುಂಚೆ ದರಖಾಸ್ತು ಪೋಡಿಗೆ ಕೋರಿ ಭೂ ಮಂಜೂರಿದಾರರು ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕ, ಗ್ರೇಡ್– 2 ತಹಶೀಲ್ದಾರ್, ತಹಶೀಲ್ದಾರ್, ಉಪ ವಿಭಾಗಾಧಿಕಾರಿ, ಭೂ ಮಾಪನ ಮತ್ತು ಭೂ ದಾಖಲೆಗಳ ಇಲಾಖೆ ಕಚೇರಿಗಳಿಗೆ ಅಲೆಯಬೇಕಿತ್ತು. ದಾಖಲೆಗಳಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಮತ್ತೆ ಎಲ್ಲಾ ಕಡೆಗೂ ಓಡಾಡಬೇಕಾಗಿತ್ತು. ಆಂದೋಲನದ ಮೂಲಕ ಜನ ಅರ್ಜಿ ಕೊಡದಿದ್ದರೂ ಪೋಡಿ ಕೆಲಸ ಸುಲಭವಾಗಿ ಆಗಲಿದೆ’ ಎಂದು ಅವರು ತಿಳಿಸಿದರು.</p>.<p>‘ಹಳೆಯ ಪೋಡಿ ಪದ್ಧತಿಯಲ್ಲಿ ಒಬ್ಬ ಭೂ ಮಾಪಕ ದಿನಕ್ಕೆ ಗರಿಷ್ಠ 4 ಹಿಡುವಳಿ ಮಾತ್ರ ಸರ್ವೇ ಮಾಡುತ್ತಿದ್ದರು. ಹೊಸ ತಂತ್ರಜ್ಞಾನದ ಪದ್ಧತಿಯಲ್ಲಿ ದಿನಕ್ಕೆ ಗರಿಷ್ಠ 15 ಹಿಡುವಳಿ ಸರ್ವೇ ಮಾಡಬಹುದು. ಮೊದಲ ಹಂತದಲ್ಲಿ ನಗರಸಭೆಯ 3 ಕಿ.ಮೀ. ವ್ಯಾಪ್ತಿ ಮತ್ತು ಪುರಸಭೆಯ 5 ಕಿ.ಮೀ. ವ್ಯಾಪ್ತಿಯ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು, //ನಮೂನೆ–1ರಿಂದ ಮತ್ತು 6ರಿಂದ 10ರವರೆಗೆ// ಪೂರ್ಣಗೊಳಿಸಲಾಗುತ್ತಿದೆ’ ಎಂದು ಅವರು ತಿಳಿಸಿದರು.</p>.<p><strong>5 ತಂಡ ರಚನೆ:</strong> ‘ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಆಂದೋಲನಕ್ಕಾಗಿ ಸಹಾಯಕ ಭೂ ಮಾಪಕರನ್ನೊಳಗೊಂಡ ಐದು ತಂಡಗಳನ್ನು ರಚಿಸಲಾಗಿದೆ. ಸ್ಥಳೀಯ ಗ್ರಾಮ ಸಹಾಯಕರು ಈ ತಂಡಕ್ಕೆ ನೆರವಾಗಲಿದ್ದಾರೆ. ಒಬ್ಬೊಬ್ಬ ಭೂ ಮಾಪಕರು ಒಂದೊಂದು ಗ್ರಾಮದಲ್ಲಿರುವ ಸರ್ಕಾರಿ ಸರ್ವೇ ನಂಬರ್ನ ಅಳತೆ ಕೆಲಸ ಮಾಡುತ್ತಿದ್ದಾರೆ. ಸದ್ಯ ಹತ್ತು ಗ್ರಾಮಗಳಲ್ಲಿ ಕೆಲಸ ನಡೆಯುತ್ತಿದೆ’ ಎಂದರು.</p>.<p>‘ಆಂದೋಲನದ ಹಿನ್ನೆಲೆಯಲ್ಲಿ ಸರ್ಕಾರಿ ಭೂ ಮಂಜೂರಿದಾರರು ಮತ್ತು ಫಾರಂ–53 ಮತ್ತು 57ನಲ್ಲಿ ಮಂಜೂರಾತಿಗಾಗಿ ಅರ್ಜಿ ದಾಖಲಿಸಿಕೊಂಡಿರುವ ಅನುಭವದಾರರು, ಸರ್ವೇಗಾಗಿ ಭೂ ಮಾಪಕರು ನೋಟಿಸ್ ನೀಡಿದಾಗ ಸ್ಥಳದಲ್ಲಿದ್ದು ತಮ್ಮ ದಾಖಲೆಗಳನ್ನು ತೋರಿಸಿದರೆ ಅಳತೆ ಕಾರ್ಯ ಚುರುಕಾಗಿ ನಡೆಯುತ್ತದೆ’ ಎನ್ನುತ್ತಾರೆ ಅಧಿಕಾರಿ.</p>.<p>ಆಂದೋಲನದ ಭಾಗವಾಗಿ ಭೂ ಮಾಪಕರು ಸರ್ವೇಗಾಗಿ ಭೂ ಮಂಜೂರಿದಾರರಿಗೆ ನೋಟಿಸ್ ನೀಡುತ್ತಾರೆ. ಸಂಬಂಧಪಟ್ಟವರು ಸ್ಥಳದಲ್ಲಿದ್ದು ತಮ್ಮ ದಾಖಲೆಗಳನ್ನು ತೋರಿಸಿ ಅಳತೆ ಕಾರ್ಯಕ್ಕೆ ಸಹಕರಿಸಬೇಕು </p><p><strong>-ಬಿ.ಆರ್. ಹನುಮೇಗೌಡ ಉಪ ನಿರ್ದೇಶಕ ಜಿಲ್ಲಾ ಭೂ ಮಾಪನ ಮತ್ತು ಭೂ ದಾಖಲೆಗಳ ಇಲಾಖೆ</strong></p>.<p><strong>ಪೋಡಿ ಅನುಕೂಲ ಏನು?</strong> </p><ul><li><p>ಸರ್ವೇ ನಂಬರ್ ಪ್ರಕಾರವಾಗಿ ಪೋಡಿ ಆಂದೋಲನ ನಡೆಯುವುದರಿಂದ ಅಲ್ಲಿನ ಎಲ್ಲಾ ಅರ್ಹ ಭೂ ಮಂಜೂರಿದಾರರ ಸಂಪೂರ್ಣ ಮಾಹಿತಿ ಒಂದೇ ಕಡೆ ಸಿಗುತ್ತದೆ. </p></li><li><p>ಉಳಿಕೆ ಸರ್ಕಾರಿ ಸರ್ವೇ ನಂಬರ್ನ ವಿಸ್ತೀರ್ಣ ಹಾಗೂ ಒತ್ತುವರಿ ಸಹ ಗೊತ್ತಾಗಲಿದೆ. * ಸ್ಥಳದಲ್ಲೇ ವಿಸ್ತೀರ್ಣ ಪರಿಶೀಲನೆ ಮಾಡಿಕೊಳ್ಳಬಹುದು. </p></li><li><p>ರೋವರ್ ಟ್ಯಾಬ್ ಹಾಗೂ ಒಆರ್ಐ ಆಧಾರಿತವಾಗಿರುವುದರಿಂದ ಪಾರದರ್ಶಕತೆಗೆ ಒತ್ತು. ವಿಸ್ತೀರ್ಣದಲ್ಲಿ ಸಹ ವ್ಯತ್ಯಾಸವಾಗುವುದಿಲ್ಲ. ಬದಲಾವಣೆಗೂ ಅವಕಾಶವಿರುವುದಿಲ್ಲ. ಹಿಡುವಳಿದಾರರ ಭೂಮಿ ಓವರ್ ಲ್ಯಾಪ್ ಆಗುವುದಿಲ್ಲ. </p></li><li><p>ಹಿಂದೆ ಭೂ ಮಾಪಕರು ಮಾಡುತ್ತಿದ್ದ ಚೈನ್ ಸರ್ವೇಯಲ್ಲಿ ಕಣ್ತಪ್ಪಿನಿಂದಾಗಿ ಆಗುತ್ತಿದ್ದ ದೋಷಗಳಿಗೆ ಮುಕ್ತಿ ಸಿಗುತ್ತದೆ. ಹೊಸ ಪದ್ಧತಿಯಲ್ಲಿ ಹಿಂದಿನ ಪದ್ಧತಿಯಂತೆ ಹೆಚ್ಚಿನ ಮಾನವ ಸಂಪನ್ಮೂಲದ ಅಗತ್ಯವಿಲ್ಲ.</p></li><li><p>ಕಚೇರಿಯಲ್ಲಿ ಪೋಡಿ ದಾಖಲೆ ತಯಾರಿಸುವುದು ಸರಾಗವಾಗಲಿದೆ.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ</strong>: ಅನೇಕ ವರ್ಷಗಳ ಹಿಂದೆ ಸರ್ಕಾರದಿಂದ ಆಗಿರುವ ಭೂ ಮಂಜೂರಾತಿಯ ಪೋಡಿ ಪ್ರಕರಣಗಳ ಬಾಕಿ ವಿಲೇವಾರಿಗಾಗಿ ಜಿಲ್ಲೆಯಲ್ಲಿ ದರಖಾಸ್ತು ಪೋಡಿ ಆಂದೋಲನಕ್ಕೆ ಚಾಲನೆ ನೀಡಲಾಗಿದೆ.</p>.<p>ಕಂದಾಯ ಇಲಾಖೆಯ ಭೂ ಮಾಪನ ಮತ್ತು ದಾಖಲೆಗಳ ಇಲಾಖೆಯ ಈ ವಿಶೇಷ ಕ್ರಮದಿಂದಾಗಿ ಭೂ ಮಂಜೂರಿದಾರರು ಪೋಡಿಗಾಗಿ ಅಲೆಯುವುದು ತಪ್ಪಲಿದೆ.</p>.<p>ರೋವರ್, ಟ್ಯಾಬ್ ಹಾಗೂ ಆರ್ಥೋರೆಕ್ಟಿಫೈಡ್ ರೆಡಾರ್ ಇಮೇಜ್ (ಒಆರ್ಐ) ಆಧಾರಿತ ಸರ್ವೇ ಕಾರ್ಯದಿಂದಾಗಿ ವರ್ಷಗಳಿಂದ ಬಾಕಿ ಇರುವ ಪೋಡಿ ಪ್ರಕರಣಗಳಿಗೆ ಶೀಘ್ರ ಮುಕ್ತಿ ಸಿಗಲಿದೆ. </p>.<p>ರಾಜ್ಯದಲ್ಲಿ ಮೊದಲ ಬಾರಿಗೆ ರಾಮನಗರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಈ ಆಂದೋಲನ ನಡೆಯುತ್ತಿದ್ದು, ಯಶಸ್ವಿಯಾದರೆ ಮುಂದೆ ರಾಜ್ಯದಾದ್ಯಂತ ವಿಸ್ತರಿಸುವ ಆಲೋಚನೆ ಇಲಾಖೆಗಿದೆ. </p>.<p>‘ಪೋಡಿ ಅರ್ಜಿಗಳ ವಿಲೇವಾರಿ ರಾಜ್ಯದಾದ್ಯಂತ ಬಾಕಿ ಇದೆ. ಇವುಗಳನ್ನು ಶೀಘ್ರ ವಿಲೇವಾರಿ ಮಾಡಿ ಜನರಿಗಾಗುತ್ತಿರುವ ತೊಂದರೆ ನಿವಾರಿಸಬೇಕು ಎಂದು ಜಿಲ್ಲೆಗೆ ಇತ್ತೀಚೆಗೆ ಭೇಟಿ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಸಂಸದ ಡಿ.ಕೆ. ಸುರೇಶ್ ಸಭೆಯಲ್ಲಿ ಸೂಚಿಸಿದ್ದರು. ಆ ಮೇರೆಗೆ, ಇಲಾಖೆಯು ಜಿಲ್ಲೆಯಲ್ಲಿ ದರಖಾಸ್ತು ಪೋಡಿ ಆಂದೋಲನವನ್ನು ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಾರದ ಹಿಂದೆ ಕೈಗೆತ್ತಿಕೊಂಡಿದೆ’ ಎಂದು ಜಿಲ್ಲಾ ಭೂ ಮಾಪನ ಮತ್ತು ಭೂ ದಾಖಲೆಗಳ ಇಲಾಖೆಯ ಉಪ ನಿರ್ದೇಶಕ ಬಿ.ಆರ್. ಹನುಮೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>ಅರ್ಜಿ ಕೊಡದಿದ್ದರೂ ಕೆಲಸವಾಗಲಿದೆ:</strong> ‘ಮುಂಚೆ ದರಖಾಸ್ತು ಪೋಡಿಗೆ ಕೋರಿ ಭೂ ಮಂಜೂರಿದಾರರು ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕ, ಗ್ರೇಡ್– 2 ತಹಶೀಲ್ದಾರ್, ತಹಶೀಲ್ದಾರ್, ಉಪ ವಿಭಾಗಾಧಿಕಾರಿ, ಭೂ ಮಾಪನ ಮತ್ತು ಭೂ ದಾಖಲೆಗಳ ಇಲಾಖೆ ಕಚೇರಿಗಳಿಗೆ ಅಲೆಯಬೇಕಿತ್ತು. ದಾಖಲೆಗಳಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಮತ್ತೆ ಎಲ್ಲಾ ಕಡೆಗೂ ಓಡಾಡಬೇಕಾಗಿತ್ತು. ಆಂದೋಲನದ ಮೂಲಕ ಜನ ಅರ್ಜಿ ಕೊಡದಿದ್ದರೂ ಪೋಡಿ ಕೆಲಸ ಸುಲಭವಾಗಿ ಆಗಲಿದೆ’ ಎಂದು ಅವರು ತಿಳಿಸಿದರು.</p>.<p>‘ಹಳೆಯ ಪೋಡಿ ಪದ್ಧತಿಯಲ್ಲಿ ಒಬ್ಬ ಭೂ ಮಾಪಕ ದಿನಕ್ಕೆ ಗರಿಷ್ಠ 4 ಹಿಡುವಳಿ ಮಾತ್ರ ಸರ್ವೇ ಮಾಡುತ್ತಿದ್ದರು. ಹೊಸ ತಂತ್ರಜ್ಞಾನದ ಪದ್ಧತಿಯಲ್ಲಿ ದಿನಕ್ಕೆ ಗರಿಷ್ಠ 15 ಹಿಡುವಳಿ ಸರ್ವೇ ಮಾಡಬಹುದು. ಮೊದಲ ಹಂತದಲ್ಲಿ ನಗರಸಭೆಯ 3 ಕಿ.ಮೀ. ವ್ಯಾಪ್ತಿ ಮತ್ತು ಪುರಸಭೆಯ 5 ಕಿ.ಮೀ. ವ್ಯಾಪ್ತಿಯ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು, //ನಮೂನೆ–1ರಿಂದ ಮತ್ತು 6ರಿಂದ 10ರವರೆಗೆ// ಪೂರ್ಣಗೊಳಿಸಲಾಗುತ್ತಿದೆ’ ಎಂದು ಅವರು ತಿಳಿಸಿದರು.</p>.<p><strong>5 ತಂಡ ರಚನೆ:</strong> ‘ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಆಂದೋಲನಕ್ಕಾಗಿ ಸಹಾಯಕ ಭೂ ಮಾಪಕರನ್ನೊಳಗೊಂಡ ಐದು ತಂಡಗಳನ್ನು ರಚಿಸಲಾಗಿದೆ. ಸ್ಥಳೀಯ ಗ್ರಾಮ ಸಹಾಯಕರು ಈ ತಂಡಕ್ಕೆ ನೆರವಾಗಲಿದ್ದಾರೆ. ಒಬ್ಬೊಬ್ಬ ಭೂ ಮಾಪಕರು ಒಂದೊಂದು ಗ್ರಾಮದಲ್ಲಿರುವ ಸರ್ಕಾರಿ ಸರ್ವೇ ನಂಬರ್ನ ಅಳತೆ ಕೆಲಸ ಮಾಡುತ್ತಿದ್ದಾರೆ. ಸದ್ಯ ಹತ್ತು ಗ್ರಾಮಗಳಲ್ಲಿ ಕೆಲಸ ನಡೆಯುತ್ತಿದೆ’ ಎಂದರು.</p>.<p>‘ಆಂದೋಲನದ ಹಿನ್ನೆಲೆಯಲ್ಲಿ ಸರ್ಕಾರಿ ಭೂ ಮಂಜೂರಿದಾರರು ಮತ್ತು ಫಾರಂ–53 ಮತ್ತು 57ನಲ್ಲಿ ಮಂಜೂರಾತಿಗಾಗಿ ಅರ್ಜಿ ದಾಖಲಿಸಿಕೊಂಡಿರುವ ಅನುಭವದಾರರು, ಸರ್ವೇಗಾಗಿ ಭೂ ಮಾಪಕರು ನೋಟಿಸ್ ನೀಡಿದಾಗ ಸ್ಥಳದಲ್ಲಿದ್ದು ತಮ್ಮ ದಾಖಲೆಗಳನ್ನು ತೋರಿಸಿದರೆ ಅಳತೆ ಕಾರ್ಯ ಚುರುಕಾಗಿ ನಡೆಯುತ್ತದೆ’ ಎನ್ನುತ್ತಾರೆ ಅಧಿಕಾರಿ.</p>.<p>ಆಂದೋಲನದ ಭಾಗವಾಗಿ ಭೂ ಮಾಪಕರು ಸರ್ವೇಗಾಗಿ ಭೂ ಮಂಜೂರಿದಾರರಿಗೆ ನೋಟಿಸ್ ನೀಡುತ್ತಾರೆ. ಸಂಬಂಧಪಟ್ಟವರು ಸ್ಥಳದಲ್ಲಿದ್ದು ತಮ್ಮ ದಾಖಲೆಗಳನ್ನು ತೋರಿಸಿ ಅಳತೆ ಕಾರ್ಯಕ್ಕೆ ಸಹಕರಿಸಬೇಕು </p><p><strong>-ಬಿ.ಆರ್. ಹನುಮೇಗೌಡ ಉಪ ನಿರ್ದೇಶಕ ಜಿಲ್ಲಾ ಭೂ ಮಾಪನ ಮತ್ತು ಭೂ ದಾಖಲೆಗಳ ಇಲಾಖೆ</strong></p>.<p><strong>ಪೋಡಿ ಅನುಕೂಲ ಏನು?</strong> </p><ul><li><p>ಸರ್ವೇ ನಂಬರ್ ಪ್ರಕಾರವಾಗಿ ಪೋಡಿ ಆಂದೋಲನ ನಡೆಯುವುದರಿಂದ ಅಲ್ಲಿನ ಎಲ್ಲಾ ಅರ್ಹ ಭೂ ಮಂಜೂರಿದಾರರ ಸಂಪೂರ್ಣ ಮಾಹಿತಿ ಒಂದೇ ಕಡೆ ಸಿಗುತ್ತದೆ. </p></li><li><p>ಉಳಿಕೆ ಸರ್ಕಾರಿ ಸರ್ವೇ ನಂಬರ್ನ ವಿಸ್ತೀರ್ಣ ಹಾಗೂ ಒತ್ತುವರಿ ಸಹ ಗೊತ್ತಾಗಲಿದೆ. * ಸ್ಥಳದಲ್ಲೇ ವಿಸ್ತೀರ್ಣ ಪರಿಶೀಲನೆ ಮಾಡಿಕೊಳ್ಳಬಹುದು. </p></li><li><p>ರೋವರ್ ಟ್ಯಾಬ್ ಹಾಗೂ ಒಆರ್ಐ ಆಧಾರಿತವಾಗಿರುವುದರಿಂದ ಪಾರದರ್ಶಕತೆಗೆ ಒತ್ತು. ವಿಸ್ತೀರ್ಣದಲ್ಲಿ ಸಹ ವ್ಯತ್ಯಾಸವಾಗುವುದಿಲ್ಲ. ಬದಲಾವಣೆಗೂ ಅವಕಾಶವಿರುವುದಿಲ್ಲ. ಹಿಡುವಳಿದಾರರ ಭೂಮಿ ಓವರ್ ಲ್ಯಾಪ್ ಆಗುವುದಿಲ್ಲ. </p></li><li><p>ಹಿಂದೆ ಭೂ ಮಾಪಕರು ಮಾಡುತ್ತಿದ್ದ ಚೈನ್ ಸರ್ವೇಯಲ್ಲಿ ಕಣ್ತಪ್ಪಿನಿಂದಾಗಿ ಆಗುತ್ತಿದ್ದ ದೋಷಗಳಿಗೆ ಮುಕ್ತಿ ಸಿಗುತ್ತದೆ. ಹೊಸ ಪದ್ಧತಿಯಲ್ಲಿ ಹಿಂದಿನ ಪದ್ಧತಿಯಂತೆ ಹೆಚ್ಚಿನ ಮಾನವ ಸಂಪನ್ಮೂಲದ ಅಗತ್ಯವಿಲ್ಲ.</p></li><li><p>ಕಚೇರಿಯಲ್ಲಿ ಪೋಡಿ ದಾಖಲೆ ತಯಾರಿಸುವುದು ಸರಾಗವಾಗಲಿದೆ.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>