ಕನ್ನಡ ಚಿತ್ರರಂಗದ ನಟ ಎನ್ನುವುದಕ್ಕಿಂತ ಓರ್ವ ಸಾಮಾಜಿಕ ಕಳಕಳಿಯ ಜೀವವನ್ನು ನಮ್ಮ ನಾಡು ಕಳೆದುಕೊಂಡಿದೆ. ವರನಟ ಡಾ.ರಾಜ್ಕುಮಾರ್ ತದನಂತರ ಅವರ ಸ್ಥಾನವನ್ನು ಅಪ್ಪುತುಂಬಿದ್ದರು. ಅವರ ಸಾವು ಇಡೀ ಗ್ರಾಮಸ್ಥರಿಗೆ ಅಪಾರವಾದ ನೋವುಂಟು ಮಾಡಿದೆ. ಅವರ ಪ್ರತಿವರ್ಷದ ಪುಣ್ಯಸ್ಮರಣೆಯನ್ನು ಗ್ರಾಮದಲ್ಲಿ ತಪ್ಪದೇ ನಡೆಸುತ್ತೇವೆ. ಮನೆ ಮಗನನ್ನು ಕಳೆದುಕೊಂಡಷ್ಟು ನೋವುಂಟಾಗಿದೆ ಎಂದು ಗ್ರಾಮಸ್ಥರು ಕಂಬನಿ ಮಿಡಿದರು.