<p>ಕನಕಪುರ: ಕೇಂದ್ರ ಸರ್ಕಾರವು ಎಲ್ಐಸಿ ಷೇರುಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ಚಿಂತನೆ ನಡೆಸಿರುವುದನ್ನು ವಿರೋಧಿಸಿ ಕನಕಪುರ ಎಲ್ಐಸಿ ಶಾಖೆಯ ಅಧಿಕಾರಿಗಳು, ನೌಕರರು ಹಾಗೂ ವಿಮಾಪ್ರತಿನಿಧಿಗಳು ಕಚೇರಿ ಮುಂದೆ ಸೋಮವಾರ ಸಾಂಕೇತಿಕ ಪ್ರತಿಭಟನೆ ನಡೆಸಿದರು.</p>.<p>ಪ್ರತಿಭಟನಕಾರರು ಮಾತನಾಡಿ, ‘ಎಲ್ಐಸಿ ಸಂಸ್ಥೆಯು 1956 ರಲ್ಲಿ ಪ್ರಾರಂಭಗೊಂಡಿದೆ. ಅಲ್ಲಿಂದ ಇಲ್ಲಿಯವರೆಗೂ ಸಂಸ್ಥೆಯು ಸಾರ್ವಜನಿಕವಾಗಿ ಅತ್ಯಂತ ವಿಶ್ವಾಸ ಮತ್ತು ನಂಬಿಕೆಯನ್ನು ಉಳಿಸಿಕೊಂಡು ಜಗತ್ತಿನಲ್ಲೇ ಅತ್ಯಂತ ವಿಶ್ವಾಸಾರ್ಹ ವಿಮಾ ಸಂಸ್ಥೆ ಎಂದು ಹೆಸರು ಗಳಿಸಿದೆ’ ಎಂದರು.</p>.<p>ಸರ್ಕಾರದಿಂದ ಮೂಲ ಬಂಡವಾಳವಾಗಿ ಪಡೆದ ₹5 ಕೋಟಿಗೆ ವಾರ್ಷಿಕವಾಗಿ ಬರುವ ಲಾಭಾಂಶದಲ್ಲಿ ಶೇ 95 ರಷ್ಟನ್ನು ಪಾಲಿಸಿದಾರರಿಗೆ ನೀಡಿ, ಶೇಕಡ 5 ಭಾಗವನ್ನು ಸರ್ಕಾರಕ್ಕೆ ನೀಡುತ್ತಿದೆ. ಸರ್ಕಾರದ ಪಾಲಿಗೆ ಎಲ್ಐಸಿ ಚಿನ್ನದ ಮೊಟ್ಟೆಯಿಡುತ್ತಿರುವ ಕೋಳಿಯಾಗಿದೆ. ಹೀಗಿದ್ದರೂ ಸರ್ಕಾರವು ಎಲ್ಐಸಿ ಷೇರುಗಳನ್ನು ಖಾಸಗಿಯಾಗಿ ಮಾರಾಟ ಮಾಡಲು ಚಿಂತನೆ ನಡೆಸುತ್ತಿರುವುದು ದುರುದಷ್ಟಕರ’ ಎಂದರು.</p>.<p>ಈ ನಿರ್ಧಾರ ದೇಶದ ಆರ್ಥಿಕತೆಯನ್ನು ಇನ್ನಷ್ಟು ಅಧೋಗತಿಗೆ ಕೊಂಡೊಯ್ಯಲಿದೆ ಎಂದು ಆರೋಪಿಸಿದರು.</p>.<p>ದೇಶದ ವಿಮಾ ಪಾಲಿಸಿದಾರರು, ನೌಕರರು, ಅಧಿಕಾರಿಗಳು, ಏಜೆಂಟರು ಮತ್ತು ದೇಶದ ಪ್ರಜೆಗಳು ಸರ್ಕಾರವು ಈ ನೀತಿಯಿಂದ ಹಿಂದೆ ಸರಿಯುವಂತೆ ಮಾಡಬೇಕಿದೆ ಎಂದು ಒತ್ತಾಯಿಸಿದರು.</p>.<p>ಕನಕಪುರ ಎಲ್ಐಸಿ ಶಾಖೆಯ ಶಾಖಾಧಿಕಾರಿ ಹರಿಪ್ರಸಾದ್, ಅಭಿವೃದ್ಧಿ ಅಧಿಕಾರಿ ಮುನಿರಾಜು, ನೌಕರರ ಸಂಘದ ಅಧ್ಯಕ್ಷ ಮಹದೇವರಾವ್, ಕಾರ್ಯದರ್ಶಿ ಚಂದ್ರು, ವಿಮಾ ಪ್ರತಿನಿಧಿ ಮಾದನಾಯಕ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕನಕಪುರ: ಕೇಂದ್ರ ಸರ್ಕಾರವು ಎಲ್ಐಸಿ ಷೇರುಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ಚಿಂತನೆ ನಡೆಸಿರುವುದನ್ನು ವಿರೋಧಿಸಿ ಕನಕಪುರ ಎಲ್ಐಸಿ ಶಾಖೆಯ ಅಧಿಕಾರಿಗಳು, ನೌಕರರು ಹಾಗೂ ವಿಮಾಪ್ರತಿನಿಧಿಗಳು ಕಚೇರಿ ಮುಂದೆ ಸೋಮವಾರ ಸಾಂಕೇತಿಕ ಪ್ರತಿಭಟನೆ ನಡೆಸಿದರು.</p>.<p>ಪ್ರತಿಭಟನಕಾರರು ಮಾತನಾಡಿ, ‘ಎಲ್ಐಸಿ ಸಂಸ್ಥೆಯು 1956 ರಲ್ಲಿ ಪ್ರಾರಂಭಗೊಂಡಿದೆ. ಅಲ್ಲಿಂದ ಇಲ್ಲಿಯವರೆಗೂ ಸಂಸ್ಥೆಯು ಸಾರ್ವಜನಿಕವಾಗಿ ಅತ್ಯಂತ ವಿಶ್ವಾಸ ಮತ್ತು ನಂಬಿಕೆಯನ್ನು ಉಳಿಸಿಕೊಂಡು ಜಗತ್ತಿನಲ್ಲೇ ಅತ್ಯಂತ ವಿಶ್ವಾಸಾರ್ಹ ವಿಮಾ ಸಂಸ್ಥೆ ಎಂದು ಹೆಸರು ಗಳಿಸಿದೆ’ ಎಂದರು.</p>.<p>ಸರ್ಕಾರದಿಂದ ಮೂಲ ಬಂಡವಾಳವಾಗಿ ಪಡೆದ ₹5 ಕೋಟಿಗೆ ವಾರ್ಷಿಕವಾಗಿ ಬರುವ ಲಾಭಾಂಶದಲ್ಲಿ ಶೇ 95 ರಷ್ಟನ್ನು ಪಾಲಿಸಿದಾರರಿಗೆ ನೀಡಿ, ಶೇಕಡ 5 ಭಾಗವನ್ನು ಸರ್ಕಾರಕ್ಕೆ ನೀಡುತ್ತಿದೆ. ಸರ್ಕಾರದ ಪಾಲಿಗೆ ಎಲ್ಐಸಿ ಚಿನ್ನದ ಮೊಟ್ಟೆಯಿಡುತ್ತಿರುವ ಕೋಳಿಯಾಗಿದೆ. ಹೀಗಿದ್ದರೂ ಸರ್ಕಾರವು ಎಲ್ಐಸಿ ಷೇರುಗಳನ್ನು ಖಾಸಗಿಯಾಗಿ ಮಾರಾಟ ಮಾಡಲು ಚಿಂತನೆ ನಡೆಸುತ್ತಿರುವುದು ದುರುದಷ್ಟಕರ’ ಎಂದರು.</p>.<p>ಈ ನಿರ್ಧಾರ ದೇಶದ ಆರ್ಥಿಕತೆಯನ್ನು ಇನ್ನಷ್ಟು ಅಧೋಗತಿಗೆ ಕೊಂಡೊಯ್ಯಲಿದೆ ಎಂದು ಆರೋಪಿಸಿದರು.</p>.<p>ದೇಶದ ವಿಮಾ ಪಾಲಿಸಿದಾರರು, ನೌಕರರು, ಅಧಿಕಾರಿಗಳು, ಏಜೆಂಟರು ಮತ್ತು ದೇಶದ ಪ್ರಜೆಗಳು ಸರ್ಕಾರವು ಈ ನೀತಿಯಿಂದ ಹಿಂದೆ ಸರಿಯುವಂತೆ ಮಾಡಬೇಕಿದೆ ಎಂದು ಒತ್ತಾಯಿಸಿದರು.</p>.<p>ಕನಕಪುರ ಎಲ್ಐಸಿ ಶಾಖೆಯ ಶಾಖಾಧಿಕಾರಿ ಹರಿಪ್ರಸಾದ್, ಅಭಿವೃದ್ಧಿ ಅಧಿಕಾರಿ ಮುನಿರಾಜು, ನೌಕರರ ಸಂಘದ ಅಧ್ಯಕ್ಷ ಮಹದೇವರಾವ್, ಕಾರ್ಯದರ್ಶಿ ಚಂದ್ರು, ವಿಮಾ ಪ್ರತಿನಿಧಿ ಮಾದನಾಯಕ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>