<p>ಪ್ರಜಾವಾಣಿ ವಾರ್ತೆ</p>.<p><strong>ಕನಕಪುರ</strong>: ಇಲ್ಲಿನ ಸಂಗಮ ರಸ್ತೆಯಲ್ಲಿರುವ ಧರ್ಮರಾಯ ದ್ರೌಪತಮ್ಮ ಹೂವಿನ ಕರಗ ಮಹೋತ್ಸವ ಸೋಮವಾರ ರಾತ್ರಿ ಅದ್ದೂರಿಯಾಗಿ ನಡೆಯಲಿದೆ. ಮಂಗಳವಾರ ಬೆಳಿಗ್ಗೆ ಅಗ್ನಿಕೊಂಡೋತ್ಸದೊಂದಿಗೆ ಕರಗ ಮಹೋತ್ಸವ ಮುಕ್ತಾಯವಾಗಲಿದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಕೆ.ಟಿ.ಕಿರಣ್ ತಿಳಿಸಿದರು.</p>.<p>ದೇವಾಲಯದ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ದ್ರೌಪತಮ್ಮನ ಕರಗವನ್ನು 28 ವರ್ಷಗಳಿಂದ ಆಚರಿಸುತ್ತಾ ಬಂದಿದ್ದೇವೆ. ಮೇ 4 ರಿಂದ ಕರಗ ಕಾರ್ಯಕ್ರಮವು ಪ್ರಾರಂಭಗೊಂಡಿದ್ದು ಮೇ 13ರಂದು ಮುಕ್ತಾಯವಾಗಲಿದೆ ಎಂದರು.</p>.<p>ಒಂಬತ್ತು ದಿನಗಳಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಸೋಮವಾರ ರಾತ್ರಿ ಹೂವಿನ ಕರಗ ಹಾಗೂ ಮಂಗಳವಾರ ಬೆಳಿಗ್ಗೆ ಅಗ್ನಿಕೊಂಡೋತ್ಸವ ನಡೆಯಲಿದೆ ಎಂದರು.</p>.<p>ಕೆ.ವಿ.ಆರ್.ಸ್ವಾಮಿ, ತಮ್ಮಣ್ಣ ಸುರೇಶ್.ಕೆ.ವಿ, ಜೈರಾಮು ಮಾತನಾಡಿ, ಹೂವಿನ ಕರಗವನ್ನು ಶ್ರೀನಿವಾಸ್ ನಡೆಸಿಕೊಡಲಿದ್ದಾರೆ. ಹೂವಿನ ಕರಗವು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣೆಗೆಯಲ್ಲಿ ಸಾಗಲಿದೆ. ನೂರು ಮಂದಿ ವೀರಕುಮಾರರು ಕರಗದೊಂದಿಗೆ ಸಾಗಲಿದ್ದಾರೆ ಎಂದರು. </p>.<p>ಗೋಪಾಲ್.ಕೆ.ಪಿ, ವೆಂಕಟರಮಣ ಸ್ವಾಮಿ, ಶ್ರೀಕಂಠ, ಶಿವರಾಜು, ಶೇಖರ್, ಚಂದ್ರಶೇಖರ ಹಾಗೂ ವೀರ ಕುಮಾರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರಜಾವಾಣಿ ವಾರ್ತೆ</p>.<p><strong>ಕನಕಪುರ</strong>: ಇಲ್ಲಿನ ಸಂಗಮ ರಸ್ತೆಯಲ್ಲಿರುವ ಧರ್ಮರಾಯ ದ್ರೌಪತಮ್ಮ ಹೂವಿನ ಕರಗ ಮಹೋತ್ಸವ ಸೋಮವಾರ ರಾತ್ರಿ ಅದ್ದೂರಿಯಾಗಿ ನಡೆಯಲಿದೆ. ಮಂಗಳವಾರ ಬೆಳಿಗ್ಗೆ ಅಗ್ನಿಕೊಂಡೋತ್ಸದೊಂದಿಗೆ ಕರಗ ಮಹೋತ್ಸವ ಮುಕ್ತಾಯವಾಗಲಿದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಕೆ.ಟಿ.ಕಿರಣ್ ತಿಳಿಸಿದರು.</p>.<p>ದೇವಾಲಯದ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ದ್ರೌಪತಮ್ಮನ ಕರಗವನ್ನು 28 ವರ್ಷಗಳಿಂದ ಆಚರಿಸುತ್ತಾ ಬಂದಿದ್ದೇವೆ. ಮೇ 4 ರಿಂದ ಕರಗ ಕಾರ್ಯಕ್ರಮವು ಪ್ರಾರಂಭಗೊಂಡಿದ್ದು ಮೇ 13ರಂದು ಮುಕ್ತಾಯವಾಗಲಿದೆ ಎಂದರು.</p>.<p>ಒಂಬತ್ತು ದಿನಗಳಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಸೋಮವಾರ ರಾತ್ರಿ ಹೂವಿನ ಕರಗ ಹಾಗೂ ಮಂಗಳವಾರ ಬೆಳಿಗ್ಗೆ ಅಗ್ನಿಕೊಂಡೋತ್ಸವ ನಡೆಯಲಿದೆ ಎಂದರು.</p>.<p>ಕೆ.ವಿ.ಆರ್.ಸ್ವಾಮಿ, ತಮ್ಮಣ್ಣ ಸುರೇಶ್.ಕೆ.ವಿ, ಜೈರಾಮು ಮಾತನಾಡಿ, ಹೂವಿನ ಕರಗವನ್ನು ಶ್ರೀನಿವಾಸ್ ನಡೆಸಿಕೊಡಲಿದ್ದಾರೆ. ಹೂವಿನ ಕರಗವು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣೆಗೆಯಲ್ಲಿ ಸಾಗಲಿದೆ. ನೂರು ಮಂದಿ ವೀರಕುಮಾರರು ಕರಗದೊಂದಿಗೆ ಸಾಗಲಿದ್ದಾರೆ ಎಂದರು. </p>.<p>ಗೋಪಾಲ್.ಕೆ.ಪಿ, ವೆಂಕಟರಮಣ ಸ್ವಾಮಿ, ಶ್ರೀಕಂಠ, ಶಿವರಾಜು, ಶೇಖರ್, ಚಂದ್ರಶೇಖರ ಹಾಗೂ ವೀರ ಕುಮಾರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>