‘ಅಂದು ಬೆಳಿಗ್ಗೆ ನೆಲಮಂಗಲದ ನೈಸ್ ಜಂಕ್ಷನ್ ಬಳಿ ರೈತರು ತಮ್ಮ ಟ್ರ್ಯಾಕ್ಟರ್ಗಳೊಂದಿಗೆ ಸಮಾವೇಶಗೊಳ್ಳಲಿದ್ದಾರೆ. ಮುಖ್ಯಮಂತ್ರಿಯಿಂದ ಗಣರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದ ಬಳಿಕ ಪರೇಡ್ ಆರಂಭಗೊಳ್ಳಲಿದೆ. ನೈಸ್ ಜಂಕ್ಷನ್ನಿಂದ ಗೊರಗುಂಟೆ ಪಾಳ್ಯ. ಯಶವಂತಪುರ ರೈಲು ನಿಲ್ದಾಣ, ಮಲ್ಲೇಶ್ವರಂ, ಶೇಷಾದ್ರಿಪುರಂ, ಆನಂದ ರಾವ್ ವೃತ್ತದ ಮಾರ್ಗವಾಗಿ ತೆರಳಿ ಫ್ರೀಡಂ ಪಾರ್ಕ್ ಬಳಿ ಸಮಾವೇಶಗೊಳ್ಳಲಾಗುವುದು. ಅಲ್ಲಿ ‘ಸಂಯಕ್ತ ಕರ್ನಾಟಕ’ ಹೆಸರಿನಲ್ಲಿ ಎಲ್ಲ ಸಂಘಟನೆಗಳೂ ಒಗ್ಗೂಡಲಿವೆ’ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.