ಮೃತರ ಹೆಸರು ಬಳಸಿ ನೋಂದಣಿ: ದಾಖಲಾಗಿರುವ ಎರಡೂ ಪ್ರಕರಣಗಳಲ್ಲಿ ಮೃತರ ಹೆಸರು ಬಳಸಿಕೊಂಡು ಜಮೀನು ಪರಭಾರೆ ಮಾಡಿರುವುದು ಬೆಳಕಿಗೆ ಬಂದಿದೆ. ಶೇಖರ್ ಅವರ ದೂರಿನ ಮಾಹಿತಿಯಂತೆ; ಜಮೀನು ನಮ್ಮ ಮುತ್ತ ಅಜ್ಜ ಸಿದ್ದೇಗೌಡ ಹೆಸರಿ
ನಲ್ಲಿದೆ. ಈ ಜಮೀನನ್ನು ಅಜ್ಜ ನೋಂದಣಿ ಮಾಡಿಕೊಟ್ಟಿರುವಂತೆ ದಾಖಲೆ ಸೃಷ್ಟಿಸಲಾಗಿದೆ. ಆದರೆ, ಸಿದ್ದೇಗೌಡ ಮೃತರಾಗಿ 76 ವರ್ಷ ಕಳೆದಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.