ಬಿಡದಿಯಲ್ಲಿ ಭಾನುವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, 'ನಿನ್ನೆಯ ಟ್ವೀಟ್ ನಲ್ಲಿ ನಿಮ್ಮ ಹೇಳಿಕೆಗಳನ್ನು ನೆನಪಿಸಿಕೊಂಡಿದ್ದೇನೆ ಅಷ್ಟೇ. ಸೈನಿಕರು, ನಿರುದ್ಯೋಗಿ ಯುವಜನರಿಗೆ ಅವಮಾನ ಮಾಡಿಲ್ಲ. ಶ್ರೀಮಂತರು ಯಾರೂ ತಮ್ಮ ಮಕ್ಕಳನ್ನು ದೇಶ ಕಾಯೋದಕ್ಕೆ ಕಳುಹಿಸುವುದಿಲ್ಲ. ಈಶ್ವರಪ್ಪ, ಯಡಿಯೂರಪ್ಪನ ಮಕ್ಕಳು ದೇಶ ಕಾಯೋದಕ್ಕೆ ಹೋಗುವುದಿಲ್ಲ. ಉದ್ಯೋಗವಿಲ್ಲದೇ ಕುಟುಂಬದ ನಿರ್ವಹಣೆಗಾಗಿ ಸೈನ್ಯಕ್ಕೆ ಸೇರುತ್ತಾರೆ ಎಂದು ಹೇಳಿ ನಾನೇನು ಅಪರಾಧ ಮಾಡಿಲ್ಲ. ಸೈನಿಕರನ್ನು ಕೇಳಿದರೆ ನೀವು ಹೇಳಿರೋದು ಸತ್ಯ ಎನ್ನುತ್ತಾರೆ. ನಾನು ವಾಸ್ತವಾಂಶ ಮಾತನಾಡುವವನು. ಈಶ್ವರಪ್ಪ ಥರ ತೆವಲಿಗೆ ಮಾತನಾಡುವವನಲ್ಲ’ ಎಂದು ಕಿಡಿಕಾರಿದರು.