ರಾಮನಗರ ತಾಲ್ಲೂಕಿನ ಮೇಗಳದೊಡ್ಡಿ ಕೆರೆಯಲ್ಲಿ ದೊಡ್ಡ ಬಿರುಕು ಕಾಣಿಸಿಕೊಂಡಿದ್ದು, ಏರಿ ಒಡೆಯುವ ಆತಂಕ ಎದುರಾಗಿದೆ. ಚನ್ನಪಟ್ಟಣ ತಾಲ್ಲೂಕಿನ ಕೊಂಡಾಪುರದಲ್ಲಿ ಕೆರೆ ಕೋಡಿ ಬಿದ್ದು, ಮೂವತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ದಿನಬಳಕೆ ಸಾಮಗ್ರಿಗಳು, ತೋಟಗಳಲ್ಲಿನ ತೆಂಗು ನೀರಿನಲ್ಲಿ ತೇಲಿದೆ. ರೇಷ್ಮೆ ಬೆಳೆಗೂ ಹಾನಿಯಾಗಿದೆ.