<p>ಕನಕಪುರ: ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ಮುಳ್ಳಳ್ಳಿ ಗ್ರಾಮದಲ್ಲಿರುವ ಬಸವೇಶ್ವರ, ಮಾರಮ್ಮ ದೇವಿಯ ಜಾತ್ರೆ ಮತ್ತು ರಥೋತ್ಸವ ಗುರುವಾರ ವಿಜೃಂಭಣೆಯಿಂದ ನಡೆದು ಸಂಪನ್ನವಾಯಿತು.</p>.<p>ಮೇ 20ರಿಂದ ಆರಂಭಗೊಂಡಿದ್ದ ಜಾತ್ರೆ ಗುರುವಾರ ಮುಕ್ತಾಯವಾಯಿತು.</p>.<p>ಸೋಮವಾರ ರಾತ್ರಿ ಬಸವೇಶ್ವರ ಸ್ವಾಮಿಯ ಓಲೆ ಬಂಡಿ ನಡೆಯಿತು. ಮಂಗಳವಾರ ಬಸವೇಶ್ವರ ಸ್ವಾಮಿ ಅಗ್ನಿಕೊಂಡೋತ್ಸವ ಮತ್ತು ರಥೋತ್ಸವ ಕಾರ್ಯಕ್ರಮ ಜರುಗಿತು. ಐ.ಗೊಲ್ಲಹಳ್ಳಿ ಶಂಭುಲಿಂಗ ಸ್ವಾಮೀಜಿ ತೇರಿಗೆ ಚಾಲನೆ ನೀಡಿದರು.</p>.<p>ಬುಧವಾರ ಬೆಳಿಗ್ಗೆ ಮಾರಮ್ಮ ದೇವಿಯ ಅಗ್ನಿ ಕೊಂಡೋತ್ಸವ ನೆರವೇರಿತು. ಮಧ್ಯಾಹ್ನ 2 ಗಂಟೆಗೆ ಸಿಡಿ ನಡೆಯಿತು. ಸಂಜೆ ಪಲ್ಲಕ್ಕಿ ಉತ್ಸವ ನೆರವೇರಿತು. ಮಾರಮ್ಮ ಬಸಪ್ಪ ಮತ್ತು ಪಟ್ಟಾಲದಮ್ಮ ಉತ್ಸವ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು.</p>.<p>ಬಸವೇಶ್ವರ ದೇವಸ್ಥಾನದ ಅರ್ಚಕ ಶಿವಲಿಂಗ, ಮಾರಮ್ಮ ದೇವಾಲಯದ ಅರ್ಚಕರಾದ ಅನಿಲ್ ಕುಮಾರ್ ಮತ್ತು ರವಿಕುಮಾರ್ ಅಗ್ನಿಕೊಂಡೋತ್ಸವ ನಡೆಸಿಕೊಟ್ಟರು.</p>.<p>ಮಂಗಳವಾರ ಮತ್ತು ಬುಧವಾರ ನಡೆದ ಜಾತ್ರಾ ಮಹೋತ್ಸವದಲ್ಲಿ ಗ್ರಾಮದಲ್ಲಿ ನೆಲೆಸಿರುವಂತಹ 16 ಜಾತಿಯ ಜನಾಂಗದವರು ತಂಬಿಟ್ಟಿನ ಆರತಿ ಮಾಡಿ ದೇವರಿಗೆ ತಂಪು ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕನಕಪುರ: ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ಮುಳ್ಳಳ್ಳಿ ಗ್ರಾಮದಲ್ಲಿರುವ ಬಸವೇಶ್ವರ, ಮಾರಮ್ಮ ದೇವಿಯ ಜಾತ್ರೆ ಮತ್ತು ರಥೋತ್ಸವ ಗುರುವಾರ ವಿಜೃಂಭಣೆಯಿಂದ ನಡೆದು ಸಂಪನ್ನವಾಯಿತು.</p>.<p>ಮೇ 20ರಿಂದ ಆರಂಭಗೊಂಡಿದ್ದ ಜಾತ್ರೆ ಗುರುವಾರ ಮುಕ್ತಾಯವಾಯಿತು.</p>.<p>ಸೋಮವಾರ ರಾತ್ರಿ ಬಸವೇಶ್ವರ ಸ್ವಾಮಿಯ ಓಲೆ ಬಂಡಿ ನಡೆಯಿತು. ಮಂಗಳವಾರ ಬಸವೇಶ್ವರ ಸ್ವಾಮಿ ಅಗ್ನಿಕೊಂಡೋತ್ಸವ ಮತ್ತು ರಥೋತ್ಸವ ಕಾರ್ಯಕ್ರಮ ಜರುಗಿತು. ಐ.ಗೊಲ್ಲಹಳ್ಳಿ ಶಂಭುಲಿಂಗ ಸ್ವಾಮೀಜಿ ತೇರಿಗೆ ಚಾಲನೆ ನೀಡಿದರು.</p>.<p>ಬುಧವಾರ ಬೆಳಿಗ್ಗೆ ಮಾರಮ್ಮ ದೇವಿಯ ಅಗ್ನಿ ಕೊಂಡೋತ್ಸವ ನೆರವೇರಿತು. ಮಧ್ಯಾಹ್ನ 2 ಗಂಟೆಗೆ ಸಿಡಿ ನಡೆಯಿತು. ಸಂಜೆ ಪಲ್ಲಕ್ಕಿ ಉತ್ಸವ ನೆರವೇರಿತು. ಮಾರಮ್ಮ ಬಸಪ್ಪ ಮತ್ತು ಪಟ್ಟಾಲದಮ್ಮ ಉತ್ಸವ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು.</p>.<p>ಬಸವೇಶ್ವರ ದೇವಸ್ಥಾನದ ಅರ್ಚಕ ಶಿವಲಿಂಗ, ಮಾರಮ್ಮ ದೇವಾಲಯದ ಅರ್ಚಕರಾದ ಅನಿಲ್ ಕುಮಾರ್ ಮತ್ತು ರವಿಕುಮಾರ್ ಅಗ್ನಿಕೊಂಡೋತ್ಸವ ನಡೆಸಿಕೊಟ್ಟರು.</p>.<p>ಮಂಗಳವಾರ ಮತ್ತು ಬುಧವಾರ ನಡೆದ ಜಾತ್ರಾ ಮಹೋತ್ಸವದಲ್ಲಿ ಗ್ರಾಮದಲ್ಲಿ ನೆಲೆಸಿರುವಂತಹ 16 ಜಾತಿಯ ಜನಾಂಗದವರು ತಂಬಿಟ್ಟಿನ ಆರತಿ ಮಾಡಿ ದೇವರಿಗೆ ತಂಪು ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>