ಬ್ಯಾಂಕ್ ಗ್ರಾಹಕ ಸುಳ್ಳೇರಿ ರೈತ ಎಸ್.ಕೆ. ಸುನೀಲ್ ಮಾತನಾಡಿ, ‘ನಮ್ಮ ಕುಟುಂಬಕ್ಕೆ ಕೃಷಿಯೇ ಮುಖ್ಯ ಉದ್ಯೋಗವಾದರೂ ಬ್ಯಾಂಕಿನಿಂದ ₹5.4 ಲಕ್ಷ ಸಾಲ ಪಡೆದು ಕೃಷಿ ಜೊತೆಗೆ ರೇಷ್ಮೆ, ಹೈನೋದ್ಯಮದಲ್ಲಿ ತೊಡಗಿಸಿಕೊಂಡಿದ್ದೆ. ಈಗ ಆರ್ಥಿಕವಾಗಿ ಸಬಲರಾಗಿ ಬ್ಯಾಂಕಿನಿಂದ ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡಿದ್ದೇನೆ. ಇತರರಿಗೆ ಸಾಲ ಸೌಲಭ್ಯ ದೊರಕಿಸಿಕೊಡಲು ನೆರವಾಗಿದ್ದೇನೆ. ಇದೇ ರೀತಿ ಎಲ್ಲರೂ ಬ್ಯಾಂಕಿನ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು’ ಎಂದರು.