<p><strong>ಮಾಗಡಿ: </strong>‘ಜ್ಞಾನದಿಂದ ಮಾತ್ರ ಮೋಕ್ಷದ ಪಥ ಕಂಡುಕೊಳ್ಳಲು ಸಾಧ್ಯ’ ಎಂದು ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.</p>.<p>ತಾಲ್ಲೂಕಿನ ಗುಡೇಮಾರನಹಳ್ಳಿಯ ಸಿದ್ಧಗಂಗಾ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ 1987-1990ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿದ್ದ ನಿವೃತ್ತ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಿ ಅವರು ಮಾತನಾಡಿದರು.</p>.<p>ಬೀಜಕ್ಕೆ ಮೊಳೆಯುವ ಶಕ್ತಿ ಇರುತ್ತದೆ. ಆದರೆ, ತಾನೇ ತಾನಾಗಿ ಮೊಳೆಯಲು ಸಾಧ್ಯವಿಲ್ಲ. ಅದಕ್ಕೆ ನೆಲ, ಜಲದ ಆಸರೆ ಬೇಕು. ಅದೇ ರೀತಿ ಲೌಕಿಕ ಬದುಕಿನಲ್ಲಿ ಇರುವವರನ್ನು ಮುಕ್ತಿಯತ್ತ ಅಭಿಮುಖರನ್ನಾಗಿಸಲು ಜ್ಞಾನಿಯಾದ ಗುರು ಬೇಕು ಎಂದು<br />ತಿಳಿಸಿದರು.</p>.<p>ಗುರುವಾದವನು ನೆಲ, ಜಲ ನಿರ್ವಹಿಸುವ ಕಾರ್ಯ ಮಾಡುತ್ತಾನೆ. ಆದ್ದರಿಂದ ಗುರು-ಶಿಷ್ಯರದು ತಾಯಿ-ಮಕ್ಕಳ ಸಂಬಂಧ ಇದ್ದಂತೆ. ಗುರು ದಾರಿ ತೋರುತ್ತಾನೆ. ಗುರು ತೋರಿದ ದಾರಿಯಲ್ಲಿ ಸಾಗುವ ಮನುಷ್ಯ ತನ್ನ ಅರಿವಿನ ಬೆಳಕಿನಲ್ಲಿಯೇ ಮುನ್ನಡೆಯಬೇಕಾಗುತ್ತದೆ ಎಂದು ಹೇಳಿದರು.</p>.<p>32 ವರ್ಷಗಳ ನಂತರ ಅಕ್ಷರ ಕಲಿಸಿದ್ದ ಗುರುಗಳನ್ನು ಸ್ಮರಿಸಿಕೊಂಡು ಹಳೆಯ ವಿದ್ಯಾರ್ಥಿಗಳನ್ನು ಒಂದುಗೂಡಿಸಿ ಗುರುವಂದನೆ ಸಲ್ಲಿಸುತ್ತಿರುವ ಹಳೆಯ ವಿದ್ಯಾರ್ಥಿಗಳ ಸೇವೆ ಅನನ್ಯವಾದುದು. ಗುರು ಶಿಷ್ಯ ಪರಂಪರೆ ಮುಂದುವರಿಯಲಿ ಎಂದರು.</p>.<p>ಜಗಣ್ಣಯ್ಯ ಮಠದ ಅಧ್ಯಕ್ಷ ಚನ್ನಬಸವ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವರುದ್ರಪ್ಪ, ಮಲ್ಲಪ್ಪ ಶೆಟ್ಟರು ಮಾತನಾಡಿದರು. 24 ನಿವೃತ್ತ ಶಿಕ್ಷಕರು, ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಗಡಿ: </strong>‘ಜ್ಞಾನದಿಂದ ಮಾತ್ರ ಮೋಕ್ಷದ ಪಥ ಕಂಡುಕೊಳ್ಳಲು ಸಾಧ್ಯ’ ಎಂದು ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.</p>.<p>ತಾಲ್ಲೂಕಿನ ಗುಡೇಮಾರನಹಳ್ಳಿಯ ಸಿದ್ಧಗಂಗಾ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ 1987-1990ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿದ್ದ ನಿವೃತ್ತ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಿ ಅವರು ಮಾತನಾಡಿದರು.</p>.<p>ಬೀಜಕ್ಕೆ ಮೊಳೆಯುವ ಶಕ್ತಿ ಇರುತ್ತದೆ. ಆದರೆ, ತಾನೇ ತಾನಾಗಿ ಮೊಳೆಯಲು ಸಾಧ್ಯವಿಲ್ಲ. ಅದಕ್ಕೆ ನೆಲ, ಜಲದ ಆಸರೆ ಬೇಕು. ಅದೇ ರೀತಿ ಲೌಕಿಕ ಬದುಕಿನಲ್ಲಿ ಇರುವವರನ್ನು ಮುಕ್ತಿಯತ್ತ ಅಭಿಮುಖರನ್ನಾಗಿಸಲು ಜ್ಞಾನಿಯಾದ ಗುರು ಬೇಕು ಎಂದು<br />ತಿಳಿಸಿದರು.</p>.<p>ಗುರುವಾದವನು ನೆಲ, ಜಲ ನಿರ್ವಹಿಸುವ ಕಾರ್ಯ ಮಾಡುತ್ತಾನೆ. ಆದ್ದರಿಂದ ಗುರು-ಶಿಷ್ಯರದು ತಾಯಿ-ಮಕ್ಕಳ ಸಂಬಂಧ ಇದ್ದಂತೆ. ಗುರು ದಾರಿ ತೋರುತ್ತಾನೆ. ಗುರು ತೋರಿದ ದಾರಿಯಲ್ಲಿ ಸಾಗುವ ಮನುಷ್ಯ ತನ್ನ ಅರಿವಿನ ಬೆಳಕಿನಲ್ಲಿಯೇ ಮುನ್ನಡೆಯಬೇಕಾಗುತ್ತದೆ ಎಂದು ಹೇಳಿದರು.</p>.<p>32 ವರ್ಷಗಳ ನಂತರ ಅಕ್ಷರ ಕಲಿಸಿದ್ದ ಗುರುಗಳನ್ನು ಸ್ಮರಿಸಿಕೊಂಡು ಹಳೆಯ ವಿದ್ಯಾರ್ಥಿಗಳನ್ನು ಒಂದುಗೂಡಿಸಿ ಗುರುವಂದನೆ ಸಲ್ಲಿಸುತ್ತಿರುವ ಹಳೆಯ ವಿದ್ಯಾರ್ಥಿಗಳ ಸೇವೆ ಅನನ್ಯವಾದುದು. ಗುರು ಶಿಷ್ಯ ಪರಂಪರೆ ಮುಂದುವರಿಯಲಿ ಎಂದರು.</p>.<p>ಜಗಣ್ಣಯ್ಯ ಮಠದ ಅಧ್ಯಕ್ಷ ಚನ್ನಬಸವ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವರುದ್ರಪ್ಪ, ಮಲ್ಲಪ್ಪ ಶೆಟ್ಟರು ಮಾತನಾಡಿದರು. 24 ನಿವೃತ್ತ ಶಿಕ್ಷಕರು, ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>