‘ಆರಂಭದಲ್ಲಿ ರೈತ ಚಳವಳಿಯನ್ನು ಕೇಂದ್ರ ಸರ್ಕಾರ ಹಗುರವಾಗಿ ಕಂಡಿತ್ತು. ಈಗ ಇದೇ ರೈತರ ಮುಂದೆ ಮಂಡಿಯೂರಿ ನಿಲ್ಲುತ್ತಿದೆ. ಕಂಪನಿ ಮಾಲೀಕರ ಹಿತರಕ್ಷಣೆಗಾಗಿ ಮಾಡಿದ ಕಾಯ್ದೆಗಳನ್ನು ಸರ್ಕಾರ ಇನ್ನಾದರೂ ಹಿಂಪಡೆಯಬೇಕು’ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು. ಹೋರಾಟದ ಭಾಗವಾಗಿ ಗಣರಾಜ್ಯೋತ್ಸವದ ದಿನ ಬೆಂಗಳೂರಿನಲ್ಲಿ ರೈತರು, ಶ್ರಮಿಕರಿಂದ ಪರೇಡ್ ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳ ಜನರು ಅಂದು ಟ್ರ್ಯಾಕ್ಟರ್, ಬೈಕ್, ಜೀಪ್ಗಳೊಂದಿಗೆ ಪರೇಡ್ ನಡೆಸಲಿದ್ದಾರೆ. ಒಂದು ವೇಳೆ ಪೊಲೀಸರು ರೈತರನ್ನು ತಡೆದಲ್ಲಿ ನಾವು ಇರುವ ಸ್ಥಳದಲ್ಲಿಯೇ ಧರಣಿ ಕೂರುತ್ತೇವೆ ಎಂದರು.