ರಾಮನಗರ: ‘ಯುಗದ ಕವಿ, ಜಗದ ಕವಿ, ರಸ ಋಷಿ, ಮಾನವತಾವಾದಿ, ಆಧುನಿಕ ವಾಲ್ಮೀಕಿ, ಸಂತಕವಿ ಹಾಗೂ ಪ್ರಕೃತಿ ಕವಿ ಎಂದು ಕುವೆಂಪು ಅವರನ್ನು ಕರೆಯಲಾಗುತ್ತದೆ. ಮನುಜಮತ ವಿಶ್ವಪಥವನ್ನು ಜಗತ್ತಿಗೆ ಸಾರಿದ ಅವರು 20ನೇ ಶತಮಾನದ ಮಹಾಕವಿಯಾಗಿದ್ದಾರೆ’ ಎಂದು ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿಕಾರಿ ಚನ್ನಕೇಶವ ಬಣ್ಣಿಸಿದರು.