ತಮ್ಮ ಬಾಮೈದುನನ ಜೊತೆಗೆ ಜೀಪಿನಲ್ಲಿ ಅರ್ಕಾವತ್ ಸೇತುವೆ ಬಳಿ ಮುತ್ತುರಾಜು ತೆರಳಿದ್ದರು. ಅದೇ ವೇಳೆ ಅಪರಿಚಿತ ವ್ಯಕ್ತಿಯ ಮೆಸೇಜ್ ನೋಡಿ ಪುನಃ ಅವರಿಗೆ ಕರೆ ಮಾಡಿದ್ದಾರೆ. ಇದೇ ರೀತಿಯ ಕಿರುಕುಳ ಕೊಟ್ಟರೆ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ. ಆದರೆ, ಅಪರಿಚಿತ ವ್ಯಕ್ತಿಯು ನೀನು ಸತ್ತರೆ ನನಗೇನೂ ನಷ್ಟವಿಲ್ಲ. ನಾನು ಆ ಮಾಹಿತಿಯನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಬಾರದು ಎಂದರೆ ನೀನು ನನಗೆ ಹಣ ಕಳಿಸು, ಇಲ್ಲವೇ ಸಾಯಿ ಎಂದು ಹೇಳಿದ್ದಾನೆ. ಆ ವ್ಯಕ್ತಿಯ ಕಿರುಕುಳ ತಾಳಲಾರದೇ ಪತಿ ಮುತ್ತುರಾಜು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಅವರು ದೂರಿದ್ದಾರೆ.